ಆ್ಯಪ್ನಗರ

ಮೇಗೂರಿನಲ್ಲಿ ಕಾಡಾನೆ ಹಾವಳಿಗೆ ಬೆಳೆ ಹಾನಿ

ಮೇಗೂರು ಗ್ರಾಮದಲ್ಲಿ ಒಂಟಿಸಲಗವೊಂದು ಭತ್ತದ ಗದ್ದೆಗೆ ನುಗ್ಗಿ ಪುಂಡಾಟ ನಡೆಸಿದ್ದು ಭತ್ತದ ಗದ್ದೆಗಳು ಹಾನಿಗೊಂಡಿವೆ.

Vijaya Karnataka 29 Nov 2018, 5:00 am
ಕೊಟ್ಟಿಗೆಹಾರ : ಮೇಗೂರು ಗ್ರಾಮದಲ್ಲಿ ಒಂಟಿಸಲಗವೊಂದು ಭತ್ತದ ಗದ್ದೆಗೆ ನುಗ್ಗಿ ಪುಂಡಾಟ ನಡೆಸಿದ್ದು ಭತ್ತದ ಗದ್ದೆಗಳು ಹಾನಿಗೊಂಡಿವೆ.
Vijaya Karnataka Web CKM-27KTG3


ಸೋಮವಾರ ರಾತ್ರಿ ಮೇಗೂರು ಗ್ರಾಮದ ರೈತರಾದ ಎಂ.ಆರ್‌.ನರೇಂದ್ರಗೌಡ, ಎಂ.ಆರ್‌.ಸುದೀರ್‌, ಸುನೀಲ್‌, ಜಯಂತ್‌, ನರೇಂದ್ರ, ಅಣ್ಣಪ್ಪಾಚಾರ್‌, ಉಪೇಂದ್ರ ಎಂಬುವವರ ಭತ್ತದ ಗದ್ದೆಗೆ ನುಗ್ಗಿ ಭತ್ತದ ಸಸಿಗಳನ್ನು ತುಳಿದು ಹಾನಿಗೊಳಿಸಿದೆ. ಭಾನುವಾರ ಗ್ರಾಮದ ಕಾಫಿತೋಟಗಳಿಗೆ ಕಾಡಾನೆ ಹಾವಳಿ ನಡೆಸಿದ್ದು ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ ಕಾಡಿಗೆ ಅಟ್ಟಿದ್ದು ,ಸೋಮವಾರ ರಾತ್ರಿ ಮತ್ತೆ ನಾಡಿನತ್ತ ಮುಖಮಾಡಿರುವ ಕಾಡಾನೆ ಭತ್ತದ ಗದ್ದೆಗಳತ್ತ ದಾಂಗುಡಿ ಇಟ್ಟಿದೆ. ಪದೆಪದೆ ಕಾಡಾನೆ ದಾಳಿ ನಡೆಯುತ್ತಿದ್ದು ಕಾಡಾನೆ ಹಾವಳಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಮೇಗೂರು ಗ್ರಾಮದ ರೈತರು ಆಗ್ರಹಿಸಿದ್ದಾರೆ.




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ