ಚಿಕ್ಕಮಗಳೂರು: ತಾಲೂಕಿನ ಚಿಕ್ಕೌಜ ಗ್ರಾಮದ ಸುಂಕದ ಕಟ್ಟೆಯಲ್ಲಿಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿಮುಳುಗಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಮೃತಪಟ್ಟ ವಿದ್ಯಾರ್ಥಿಯನ್ನು ವರುಣ್ (15) ಎಂದು ಗುರುತಿಸ ಲಾಗಿದ್ದು, ಈತ ಸಾದರಹಳ್ಳಿ ಗ್ರಾಮದವನಾಗಿದ್ದಾನೆ. ಈತ ನಗರದ ನರಿಗುಡ್ಡೇನಹಳ್ಳಿಯ ಎಂಇಎಸ್ ಶಾಲೆಯಲ್ಲಿ10 ನೇ ತರಗತಿ ಓದುತ್ತಿದ್ದು ಸೋಮವಾರ ತನ್ನ ಸ್ನೇಹಿತನೊಂದಿಗೆ ಹಿರೇಗೌಜ ಗ್ರಾ.ಪಂ. ವ್ಯಾಪ್ತಿಯ ಚಿಕ್ಕೌಜದ ಸುಂಕದಕಟ್ಟೆಗೆ ಈಜಾಡಲು ತೆರಳಿದ್ದ. ಇಬ್ಬರು ಈಜಾಡಲು ನೀರಿಗೆ ಇಳಿದಿದ್ದರು ಎನ್ನಲಾಗಿದೆ. ಈ ವೇಳೆ ವರುಣ್ ನೀರಿನಲ್ಲಿಮುಳುಗಿ ಮೇಲೆ ಏಳದೆ ಇದ್ದುದನ್ನು ಗಮನಿಸಿದ ಸ್ನೇಹಿತ ಗಾಬರಿಯಾಗಿ ನೀರಿನಿಂದ ಮೇಲೆ ಬಂದು ಜೋರಾಗಿ ಕೂಗಿದ್ದಾನೆ. ಹೊಲದಲ್ಲಿದ್ದ ರೈತರು ಬಂದು ನೋಡುವಷ್ಟರಲ್ಲಿವರುಣ್ ನೀರಿನಲ್ಲಿಸಂಪೂರ್ಣ ಮುಳುಗಿದ್ದಾನೆ. ಕೂಡಲೇ ಅಗ್ನಿ ಶಾಮಕ ದಳಕ್ಕೆ ತಿಳಿದಾಗ ಸಿಬ್ಬಂದಿ ಒಂದು ಗಂಟೆಗೂ ಹೆಚ್ಚು ಕಾಲ ಶೋಧ ಕಾರ್ಯ ನಡೆಸಿ ಶವ ಹೊರತೆಗೆದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ಈಜಲು ಹೋದ ವಿದ್ಯಾರ್ಥಿ ಸಾವು
ತಾಲೂಕಿನ ಚಿಕ್ಕೌಜ ಗ್ರಾಮದ ಸುಂಕದ ಕಟ್ಟೆಯಲ್ಲಿಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿಮುಳುಗಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
Vijaya Karnataka 16 Oct 2019, 5:00 am