ಎನ್.ವೆಂಕಟೇಶ್
ಅಜ್ಜಂಪುರ : ಬೇಸಿಗೆ ಎಂದರೆ ಕೇವಲ ಬಿರು ಬಸಿಲಿನ ಧಗೆ ಮಾತ್ರವಲ್ಲದೆ ಕಾಯಿಲೆಗಳು ಲಗ್ಗೆ ಇಡುವ ಕಾಲ. ಸ್ವಚ್ಛತೆ, ಆರೋಗ್ಯದ ಬಗ್ಗೆ ಎಷ್ಟೇ ಎಚ್ಚರ ವಹಿಸಿದರೂ ಕಡಿಮೆಯೇ. ಆದರೆ, ಅಜ್ಜಂಪುರದ ದನಗಳ ಸಂತೆ ಮೈದಾನದಲ್ಲಿ ನಿರ್ಮಾಣವಾಗಿರುವ ಕೊಳಚೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಾಗಿದೆ.
ಪಟ್ಟಣದಲ್ಲಿ ಪ್ರತಿ ಸೋಮವಾರ ದನಗಳ ಸಂತೆ ನಡೆಯುತ್ತದೆ. ಪಟ್ಟಣದ ಹೃದಯಭಾಗದಲ್ಲಿ ಸುಮಾರು 8 ಎಕರೆ ಖಾಲಿ ಪ್ರದೇಶದಲ್ಲಿ ಸಂತೆ ನಡೆಯಲಿದ್ದು, ಮುಖ್ಯ ರಸ್ತೆ ಹಾಗೂ ಆಜುಬಾಜಿನ ರಸ್ತೆಗಳಿಗೆ ಹೋಲಿಸಿದರೆ ಈ ಪ್ರದೇಶ ತಗ್ಗಿನಲ್ಲಿದೆ. ಮಳೆ ಬಂದ ಸಮಯದಲ್ಲಿ ನೀರು ಚರಂಡಿಗಳಲ್ಲಿ ಹರಿಯಲಾರದೆ ಎಲ್ಲೆಂದರಲ್ಲಿ ನಿಲ್ಲುತ್ತದೆ. ಹಾಗೂ ಸಂತೆ ಸಂದರ್ಭ ರೈತರು ಕ್ರಯ, ವಿಕ್ರಯ ನಡೆಸುವ ಸಲುವಾಗಿ ನೂರಾರು ದನಕರು, ಎತ್ತು, ಎಮ್ಮೆ ಜಾನುವಾರುಗಳನ್ನು ಕರೆತರುತ್ತಾರೆ. ಇಲ್ಲಿ ಕಟ್ಟುವ ಜಾನುವಾರಗಳ ಸಗಣಿ, ಗಂಜಲ, ಹುಲ್ಲಿನ ಕಡ್ಡಿ ಮೇವುಗಳು ಮೈದಾನದಲ್ಲಿ ನಿಂತ ನೀರನೊಂದಿಗೆ ಬೆರೆತು ಕ್ರಮೇಣ ಕೊಳೆತು ದುರ್ಗಂಧ ಬೀರುತ್ತಿದೆ. ಇಲ್ಲಿ ನಿಂತಿರುವ ನೀರು ಸೊಳ್ಳೆಗಳ ಆವಾಸ ಸ್ಥಾನವೂ ಆಗಿ ಮಾರ್ಪಟ್ಟಿರುವುದರಿಂದ ಪಟ್ಟಣದ ಜನತೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದ್ದಾರೆ.
ಗ್ರಾ.ಪಂ.ಆಡಳಿತ ನಿರ್ಲಕ್ಷ ್ಯ: ಕೇವಲ ಅಭಿವೃದ್ಧಿಗಾಗಿ ಟೆಂಡರ್ ಕರೆದು ಕೈ ತೊಳೆದುಕೊಂಡರೆ ಅದನ್ನು ಸರಿಯಾಗಿ ನಿರ್ವಹಣೆ ಮಾಡಿಕೊಳ್ಳುವ ಜವಾಬ್ದಾರಿ ಯಾರದು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಇದಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ಉತ್ತರಿಸಬೇಕು. ಸ್ವಚ್ಛತೆ ಕಾಪಾಡಬೇಕಾದ ಗ್ರಾ.ಪಂ. ಈ ಬಗ್ಗೆ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಕಡೆ ಆರೋಗ್ಯ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಸ್ವಚ್ಛತೆಗೆ ಕ್ರಮ ವಹಿಸಲು ಕಾರ್ಯತತ್ಪರರಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
...................
ಚಿಕ್ಕಮಗಳೂರು ತಾಲೂಕಿನ ಮರ್ಲೆ ತಿಮ್ಮನಹಳ್ಳಿಯಲ್ಲಿ ಸಾಂಕ್ರಾಮಿಕ ರೋಗ ಹರಡಿದ್ದು ಇಡೀ ಊರಿನ ಜನ ಹುಷಾರಿಲ್ಲದೆ ಮಲಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಇಲಾಖೆ ಅಧಿಕಾರಿಗಳಿಗೆ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಾಂಕ್ರಾಮಿಕ ರೋಗಗಳ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿಯೂ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೂಚಿಸಿದ್ದಾರೆ. ಆದರೂ ಅಲ್ಲಲ್ಲಿ ಇಂತಹ ಸಾಂಕ್ರಾಮಿಕ ರೋಗಗಳ ಭೀತಿ ಕೇಳಿಬರುತ್ತಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚರ ವಹಿಸಬೇಕಾಗಿದೆ.
..................
ಗ್ರಾಮ ಪಂಚಾಯಿತಿ ಬರೀ ಆದಾಯ ನಿರೀಕ್ಷಿಸುತ್ತದೆ. ರಾಸುಗಳ ಸಂತೆ ನಡೆಯುವ ದಿನ ಮತ್ತು ಇನ್ನೂಳಿದ ದಿನ ರಾಸುಗಳ ಬಗ್ಗೆ ನಿಗಾ ವಹಿಸುವ ಕೆಲಸ ಮಾಡಬೇಕಾಗಿದೆ. ಪ್ರತಿ ಸೋಮವಾರ ಸಾವಿರಾರು ರಾಸುಗಳು ಸೇರುತ್ತವೆ. ಅವುಗಳಿಗೆ ನಿಲ್ಲಲು, ಮೇಯಲು ಸೂಕ್ತ ವ್ಯವಸ್ಥೆ ಮಾಡಬೇಕು.
-ಎಸ್. ಪ್ರಹ್ಲಾದ್, ಅಜ್ಜಂಪುರ
...................
ರಾಸುಗಳ ಸಂತೆ ನಡೆದ ನಂತರ ಇಲ್ಲಿನ ಪರಿಸ್ಥಿತಿ ಭೀಕರವಾಗಿರುತ್ತದೆ. ಅಸಾಧ್ಯ ನೊಣಗಳು ಗುಯ್ಗುಡುತ್ತವೆ. ಸಗಣಿ, ಗೋಮೂತ್ರ ಇತರೆ ತ್ಯಾಜ್ಯದಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ಕೈಗೊಂಡು ರಾಸುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅನುಕೂಲ ಮಾಡಿ ಕೊಡಬೇಕು.
-ಚಂದ್ರಶೇಖರಪ್ಪ, ರಾಸುಗಳ ದಲ್ಲಾಳಿ
......................
ಹಿಂದೆ ವರ್ಷಕ್ಕೊಮ್ಮೆ ಶಿವರಾತ್ರಿ ಹಬ್ಬದ ಆಸುಪಾಸು 15 ದಿನ ರಾಸುಗಳ ಬೃಹತ್ ಪ್ರದರ್ಶನ, ಮಾರಾಟ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಯಾವಾಗ ವಾರದ ಸಂತೆ ಪ್ರಾರಂಭವಾಯಿತೋ ಅವಾಗಿನಿಂದ ವರ್ಷದ ಜಾತ್ರೆ ನಿಂತು ಹೋಯಿತು. ಈಗಿರುವ ರಾಸುಗಳ ಮಾರಾಟದ ಸ್ಥಳವನ್ನು ಎಪಿಎಂಸಿ ಆವರಣದೊಳಕ್ಕೆ ಸ್ಥಳಾಂತರಿಸಬೇಕು. ಸಂತೆ ಮೈದಾನ ಪಟ್ಟಣದ ಹೃದಯಭಾಗದಲ್ಲಿದ್ದು, ರೋಗ ರುಜಿನಗಳ ತಾಣವಾಗಿದೆ. ಈ ಪ್ರದೇಶದಲ್ಲಿ ಸರಕಾರಿ ಹಾಸ್ಟೆಲ್ಗಳಿವೆ. ಅಸಾಧ್ಯ ಸೊಳ್ಳೆ ಮತ್ತು ನೊಣಗಳಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಪ್ರತಿ ಮಂಗಳವಾರ ನಡೆಯುವ ವಾರದ ಸಂತೆಯನ್ನೂ ಕೂಡಾ ಎಪಿಎಂಸಿಗೆ ಸ್ಥಳಾಂತರಿಸಬೇಕು.
-ಎ.ಎಸ್. ಕೃಷ್ಣಮೂರ್ತಿ, ರಂಗ ಕರ್ಮಿ, ಅಜ್ಜಂಪುರ
..........................
ಸಂತೆ ಮೈದಾನದಲ್ಲಿ ಪ್ರವಾಸಿ ಮಂದಿರ, ಶಿಶು ವಿಹಾರ, ಅರಣ್ಯ ಇಲಾಖೆ ಕಚೇರಿ, 3 ಹಾಸ್ಟೆಲ್ಗಳು, ಚಿತ್ರಮಂದಿರ ಇದೆ. ಇಲ್ಲಿಗೆ ಪ್ರತಿದಿನ ಸಾವಿರಾರು ಜನರು ವಿವಿಧ ಕೆಲಸಗಳಿಗೆ ಬರುತ್ತಾರೆ. ಇದೇ ಆವರಣದಲ್ಲಿ ಹತ್ತಾರು ಕೋಳಿ ಅಂಗಡಿಗಳಿವೆ. ಕೋಳಿ ತ್ಯಾಜ್ಯ ತಿನ್ನಲು ನಾಯಿಗಳು ಕಿತ್ತಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಗ್ರಾಮ ಪಂಚಾಯಿತಿ ಆಡಳಿತ ಉದಾರ ಮನಸ್ಸು ಮಾಡಿ ಎಪಿಎಂಸಿಗೆ ಸಂತೆ ಸ್ಥಳಾಂತರ ಮಾಡಿದರೆ ಸಾರ್ವಜನಿಕರ ಆರೋಗ್ಯಕ್ಕೆ ಅನುಕೂಲವಾಗುತ್ತದೆ.
-ಎ.ಸಿ. ಚಂದ್ರಪ್ಪ, ಅಜ್ಜಂಪುರ
ಅಜ್ಜಂಪುರ : ಬೇಸಿಗೆ ಎಂದರೆ ಕೇವಲ ಬಿರು ಬಸಿಲಿನ ಧಗೆ ಮಾತ್ರವಲ್ಲದೆ ಕಾಯಿಲೆಗಳು ಲಗ್ಗೆ ಇಡುವ ಕಾಲ. ಸ್ವಚ್ಛತೆ, ಆರೋಗ್ಯದ ಬಗ್ಗೆ ಎಷ್ಟೇ ಎಚ್ಚರ ವಹಿಸಿದರೂ ಕಡಿಮೆಯೇ. ಆದರೆ, ಅಜ್ಜಂಪುರದ ದನಗಳ ಸಂತೆ ಮೈದಾನದಲ್ಲಿ ನಿರ್ಮಾಣವಾಗಿರುವ ಕೊಳಚೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಾಗಿದೆ.
ಪಟ್ಟಣದಲ್ಲಿ ಪ್ರತಿ ಸೋಮವಾರ ದನಗಳ ಸಂತೆ ನಡೆಯುತ್ತದೆ. ಪಟ್ಟಣದ ಹೃದಯಭಾಗದಲ್ಲಿ ಸುಮಾರು 8 ಎಕರೆ ಖಾಲಿ ಪ್ರದೇಶದಲ್ಲಿ ಸಂತೆ ನಡೆಯಲಿದ್ದು, ಮುಖ್ಯ ರಸ್ತೆ ಹಾಗೂ ಆಜುಬಾಜಿನ ರಸ್ತೆಗಳಿಗೆ ಹೋಲಿಸಿದರೆ ಈ ಪ್ರದೇಶ ತಗ್ಗಿನಲ್ಲಿದೆ. ಮಳೆ ಬಂದ ಸಮಯದಲ್ಲಿ ನೀರು ಚರಂಡಿಗಳಲ್ಲಿ ಹರಿಯಲಾರದೆ ಎಲ್ಲೆಂದರಲ್ಲಿ ನಿಲ್ಲುತ್ತದೆ. ಹಾಗೂ ಸಂತೆ ಸಂದರ್ಭ ರೈತರು ಕ್ರಯ, ವಿಕ್ರಯ ನಡೆಸುವ ಸಲುವಾಗಿ ನೂರಾರು ದನಕರು, ಎತ್ತು, ಎಮ್ಮೆ ಜಾನುವಾರುಗಳನ್ನು ಕರೆತರುತ್ತಾರೆ. ಇಲ್ಲಿ ಕಟ್ಟುವ ಜಾನುವಾರಗಳ ಸಗಣಿ, ಗಂಜಲ, ಹುಲ್ಲಿನ ಕಡ್ಡಿ ಮೇವುಗಳು ಮೈದಾನದಲ್ಲಿ ನಿಂತ ನೀರನೊಂದಿಗೆ ಬೆರೆತು ಕ್ರಮೇಣ ಕೊಳೆತು ದುರ್ಗಂಧ ಬೀರುತ್ತಿದೆ. ಇಲ್ಲಿ ನಿಂತಿರುವ ನೀರು ಸೊಳ್ಳೆಗಳ ಆವಾಸ ಸ್ಥಾನವೂ ಆಗಿ ಮಾರ್ಪಟ್ಟಿರುವುದರಿಂದ ಪಟ್ಟಣದ ಜನತೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದ್ದಾರೆ.
ಗ್ರಾ.ಪಂ.ಆಡಳಿತ ನಿರ್ಲಕ್ಷ ್ಯ: ಕೇವಲ ಅಭಿವೃದ್ಧಿಗಾಗಿ ಟೆಂಡರ್ ಕರೆದು ಕೈ ತೊಳೆದುಕೊಂಡರೆ ಅದನ್ನು ಸರಿಯಾಗಿ ನಿರ್ವಹಣೆ ಮಾಡಿಕೊಳ್ಳುವ ಜವಾಬ್ದಾರಿ ಯಾರದು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಇದಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ಉತ್ತರಿಸಬೇಕು. ಸ್ವಚ್ಛತೆ ಕಾಪಾಡಬೇಕಾದ ಗ್ರಾ.ಪಂ. ಈ ಬಗ್ಗೆ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಕಡೆ ಆರೋಗ್ಯ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಸ್ವಚ್ಛತೆಗೆ ಕ್ರಮ ವಹಿಸಲು ಕಾರ್ಯತತ್ಪರರಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
...................
ಚಿಕ್ಕಮಗಳೂರು ತಾಲೂಕಿನ ಮರ್ಲೆ ತಿಮ್ಮನಹಳ್ಳಿಯಲ್ಲಿ ಸಾಂಕ್ರಾಮಿಕ ರೋಗ ಹರಡಿದ್ದು ಇಡೀ ಊರಿನ ಜನ ಹುಷಾರಿಲ್ಲದೆ ಮಲಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಇಲಾಖೆ ಅಧಿಕಾರಿಗಳಿಗೆ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಾಂಕ್ರಾಮಿಕ ರೋಗಗಳ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿಯೂ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೂಚಿಸಿದ್ದಾರೆ. ಆದರೂ ಅಲ್ಲಲ್ಲಿ ಇಂತಹ ಸಾಂಕ್ರಾಮಿಕ ರೋಗಗಳ ಭೀತಿ ಕೇಳಿಬರುತ್ತಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚರ ವಹಿಸಬೇಕಾಗಿದೆ.
..................
ಗ್ರಾಮ ಪಂಚಾಯಿತಿ ಬರೀ ಆದಾಯ ನಿರೀಕ್ಷಿಸುತ್ತದೆ. ರಾಸುಗಳ ಸಂತೆ ನಡೆಯುವ ದಿನ ಮತ್ತು ಇನ್ನೂಳಿದ ದಿನ ರಾಸುಗಳ ಬಗ್ಗೆ ನಿಗಾ ವಹಿಸುವ ಕೆಲಸ ಮಾಡಬೇಕಾಗಿದೆ. ಪ್ರತಿ ಸೋಮವಾರ ಸಾವಿರಾರು ರಾಸುಗಳು ಸೇರುತ್ತವೆ. ಅವುಗಳಿಗೆ ನಿಲ್ಲಲು, ಮೇಯಲು ಸೂಕ್ತ ವ್ಯವಸ್ಥೆ ಮಾಡಬೇಕು.
-ಎಸ್. ಪ್ರಹ್ಲಾದ್, ಅಜ್ಜಂಪುರ
...................
ರಾಸುಗಳ ಸಂತೆ ನಡೆದ ನಂತರ ಇಲ್ಲಿನ ಪರಿಸ್ಥಿತಿ ಭೀಕರವಾಗಿರುತ್ತದೆ. ಅಸಾಧ್ಯ ನೊಣಗಳು ಗುಯ್ಗುಡುತ್ತವೆ. ಸಗಣಿ, ಗೋಮೂತ್ರ ಇತರೆ ತ್ಯಾಜ್ಯದಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ಕೈಗೊಂಡು ರಾಸುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅನುಕೂಲ ಮಾಡಿ ಕೊಡಬೇಕು.
-ಚಂದ್ರಶೇಖರಪ್ಪ, ರಾಸುಗಳ ದಲ್ಲಾಳಿ
......................
ಹಿಂದೆ ವರ್ಷಕ್ಕೊಮ್ಮೆ ಶಿವರಾತ್ರಿ ಹಬ್ಬದ ಆಸುಪಾಸು 15 ದಿನ ರಾಸುಗಳ ಬೃಹತ್ ಪ್ರದರ್ಶನ, ಮಾರಾಟ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಯಾವಾಗ ವಾರದ ಸಂತೆ ಪ್ರಾರಂಭವಾಯಿತೋ ಅವಾಗಿನಿಂದ ವರ್ಷದ ಜಾತ್ರೆ ನಿಂತು ಹೋಯಿತು. ಈಗಿರುವ ರಾಸುಗಳ ಮಾರಾಟದ ಸ್ಥಳವನ್ನು ಎಪಿಎಂಸಿ ಆವರಣದೊಳಕ್ಕೆ ಸ್ಥಳಾಂತರಿಸಬೇಕು. ಸಂತೆ ಮೈದಾನ ಪಟ್ಟಣದ ಹೃದಯಭಾಗದಲ್ಲಿದ್ದು, ರೋಗ ರುಜಿನಗಳ ತಾಣವಾಗಿದೆ. ಈ ಪ್ರದೇಶದಲ್ಲಿ ಸರಕಾರಿ ಹಾಸ್ಟೆಲ್ಗಳಿವೆ. ಅಸಾಧ್ಯ ಸೊಳ್ಳೆ ಮತ್ತು ನೊಣಗಳಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಪ್ರತಿ ಮಂಗಳವಾರ ನಡೆಯುವ ವಾರದ ಸಂತೆಯನ್ನೂ ಕೂಡಾ ಎಪಿಎಂಸಿಗೆ ಸ್ಥಳಾಂತರಿಸಬೇಕು.
-ಎ.ಎಸ್. ಕೃಷ್ಣಮೂರ್ತಿ, ರಂಗ ಕರ್ಮಿ, ಅಜ್ಜಂಪುರ
..........................
ಸಂತೆ ಮೈದಾನದಲ್ಲಿ ಪ್ರವಾಸಿ ಮಂದಿರ, ಶಿಶು ವಿಹಾರ, ಅರಣ್ಯ ಇಲಾಖೆ ಕಚೇರಿ, 3 ಹಾಸ್ಟೆಲ್ಗಳು, ಚಿತ್ರಮಂದಿರ ಇದೆ. ಇಲ್ಲಿಗೆ ಪ್ರತಿದಿನ ಸಾವಿರಾರು ಜನರು ವಿವಿಧ ಕೆಲಸಗಳಿಗೆ ಬರುತ್ತಾರೆ. ಇದೇ ಆವರಣದಲ್ಲಿ ಹತ್ತಾರು ಕೋಳಿ ಅಂಗಡಿಗಳಿವೆ. ಕೋಳಿ ತ್ಯಾಜ್ಯ ತಿನ್ನಲು ನಾಯಿಗಳು ಕಿತ್ತಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಗ್ರಾಮ ಪಂಚಾಯಿತಿ ಆಡಳಿತ ಉದಾರ ಮನಸ್ಸು ಮಾಡಿ ಎಪಿಎಂಸಿಗೆ ಸಂತೆ ಸ್ಥಳಾಂತರ ಮಾಡಿದರೆ ಸಾರ್ವಜನಿಕರ ಆರೋಗ್ಯಕ್ಕೆ ಅನುಕೂಲವಾಗುತ್ತದೆ.
-ಎ.ಸಿ. ಚಂದ್ರಪ್ಪ, ಅಜ್ಜಂಪುರ