ಆ್ಯಪ್ನಗರ

ಮಲೆ ಮಹದೇಶ್ವರ ಸೇರಿದ ಚಿಕ್ಕಮಗಳೂರಿನ ಎಲೆಮಡಲಿನಲ್ಲಿ ಸೆರೆ ಸಿಕ್ಕ ಪುಂಡಾನೆ

ಚಿಕ್ಕಮಗಳೂರಿನ ಕೊಪ್ಪ ತಾಲೂಕು ಹೇರೂರು ಗ್ರಾ.ಪಂ ವ್ಯಾಪ್ತಿಯ ಎಲೆಮಡಲಿನ ಚಹಾ ತೋಟದಲ್ಲಿ ಆ.25 ರಂದು ಸೆರೆ ಸಿಕ್ಕ ಹಾವೇರಿ ಟಸ್ಕರ್‌ ಪುಂಡಾನೆಯನ್ನು ಆ.26 ರಂದು ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗಕ್ಕೆ ಕರೆತರಲಾಗಿದೆ. ಕೆಲವು ತಿಂಗಳಿನಿಂದ ಬಾಳೆಹೊನ್ನೂರು ಸೇರಿದಂತೆ, ಮೇಗುಂದಾ ಹೋಬಳಿಯ ಅನೇಕ ರೈತರ ಕೃಷಿ ಭೂಮಿಗೆ ದಾಳಿ ಮಾಡಿ ಅಡಕೆ, ಕಾಫಿ, ಕಾಳು ಮೆಣಸು, ಭತ್ತದ ಗದ್ದೆಗಳನ್ನು ನಾಶಗೊಳಿಸಿತ್ತು. ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಒಂದು ವಾರಗಳ ಸತತ ಕಾರ್ಯಾಚರಣೆ ನಡೆಸಿ ಕೊನೆಗೂ ಪುಂಡನನ್ನು ಸೆರೆ ಹಿಡಿದಿದ್ದರು.

Vijaya Karnataka 29 Aug 2022, 2:22 pm
ಜಯಪುರ: ಚಿಕ್ಕಮಗಳೂರಿನ ಕೊಪ್ಪ ತಾಲೂಕು ಹೇರೂರು ಗ್ರಾ.ಪಂ ವ್ಯಾಪ್ತಿಯ ಎಲೆಮಡಲಿನ ಚಹಾ ತೋಟದಲ್ಲಿ ಆ.25 ರಂದು ಸೆರೆ ಸಿಕ್ಕ ಹಾವೇರಿ ಟಸ್ಕರ್‌ ಪುಂಡಾನೆಯನ್ನು ಆ.26 ರಂದು ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗಕ್ಕೆ ಕರೆತರಲಾಗಿದೆ.
Vijaya Karnataka Web ಆನೆ
ಸಾಂದರ್ಭಿಕ ಚಿತ್ರ


ಕೆಲವು ತಿಂಗಳಿನಿಂದ ಬಾಳೆಹೊನ್ನೂರು ಸೇರಿದಂತೆ, ಮೇಗುಂದಾ ಹೋಬಳಿಯ ಅನೇಕ ರೈತರ ಕೃಷಿ ಭೂಮಿಗೆ ದಾಳಿ ಮಾಡಿ ಅಡಕೆ, ಕಾಫಿ, ಕಾಳು ಮೆಣಸು, ಭತ್ತದ ಗದ್ದೆಗಳನ್ನು ನಾಶಗೊಳಿಸಿತ್ತು. ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಒಂದು ವಾರಗಳ ಸತತ ಕಾರ್ಯಾಚರಣೆ ನಡೆಸಿ ಕೊನೆಗೂ ಪುಂಡನನ್ನು ಸೆರೆ ಹಿಡಿದಿದ್ದರು. ಕಾರ್ಯಾಚರಣೆಯ ಸಹಾಯಕ್ಕೆ ಬಂದಿದ್ದ ಶಿವಮೊಗ್ಗ ಸಕ್ರೆಬೈಲು ಬಿಡಾರದ ಬಾಬಣ್ಣ, ಸೋಮಣ್ಣ, ಬಹದ್ದೂರು, ಸಾಗರ್‌ ಮತ್ತು ಭಾನುಮತಿ ಆನೆಗಳನ್ನು ಮರುದಿನ ಎಲೆಮಡಲಿನ ಕೃಷಿಕ ರಾಘವೇಂದ್ರ ಗುರು ಪ್ರಸಾದ್‌ ಹೆಬ್ಬಾರ್‌ ರವರ ಮನೆಯ ಶ್ರೀ ದುರ್ಗಾ ಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಬೀಳ್ಕೊಡಲಾಗಿತ್ತು.

ಕೊನೆಗೂ ಸೆರೆಸಿಕ್ಕ ಟಸ್ಕರ್: ಮಲೆ ಮಹದೇಶ್ವರ ವನ್ಯಜೀವಿ ವಿಭಾಗಕ್ಕೆ ರವಾನೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಗುರುವಾರ ರಾತ್ರಿ ಬಂಧಿತ ಪುಂಡಾನೆಯನ್ನು ಲಾರಿಯಲ್ಲಿ ಬಾಳೆಹೊನ್ನೂರು, ಚಿಕ್ಕಮಗಳೂರು, ಹಾಸನ, ಮೈಸೂರು ಮಾರ್ಗವಾಗಿ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗಕ್ಕೆ ಕೊಂಡೊಯ್ಯಲಾಗಿತ್ತು. ವನ್ಯಜೀವಿ ವಿಭಾಗಕ್ಕೆ ಬಂದಿಳಿದ ಟಸ್ಕರ್‌ನನ್ನು ಸಕ್ರೆಬೈಲು ಬಿಡಾರದ ಎರಡು ಆನೆಗಳ ಸಹಾಯದಿಂದಲೇ ವಾಹನದಿಂದ ಕೆಳಗಿಳಿಸಿ ಬಿಡಲಾಗಿದೆ.

ಹಾವೇರಿ ಟಸ್ಕರ್‌ ಲಾರಿಯಿಂದ ಕೆಳಗಿಳಿದ ತಕ್ಷಣ ಅಲ್ಲೇ ಹತ್ತಿರದಲ್ಲಿದ್ದ ನದಿಯಲ್ಲಿಕೆಲ ಹೊತ್ತು ವಿಶ್ರಾಂತಿ ಪಡೆದು ಕಾನನದೊಳಸೇರಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಟಸ್ಕರ್‌ನನ್ನು ಕಳೆದ ಫೆಬ್ರವರಿಯಲ್ಲಿ ಹಾವೇರಿ ಸಮೀಪದಲ್ಲಿ ಸೆರೆ ಹಿಡಿದು ರೇಡಿಯೋ ಕಾಲರ್‌ ಅಳವಡಿಸಿ ಲಕ್ಕವಳ್ಳಿ ಬಳಿಯ ಭದ್ರಾ ವನ್ಯಜೀವಿ ವಿಭಾಗದ ತಣಿಗೆಬೈಲು ಹತ್ತಿರ ಬಿಡಲಾಗಿತ್ತು. ಮತ್ತೆ ಬಾಲ ಬಿಚ್ಚಿದ ಪುಂಡ, ಮುತ್ತೋಡಿ, ಹೆಬ್ಬೆ ಮಾರ್ಗ ಅನುಸರಿಸಿ ಮಲೆನಾಡು ಭಾಗದಲ್ಲಿ ಉಪಟಳ ಆರಂಭಿಸಿದ್ದ. ಈತ ಇದೀಗ ಎರಡನೇ ಬಾರಿಗೆ ಸೆರೆ ಸಿಕ್ಕಿ ಮತ್ತೆ ಅರಣ್ಯ ಸೇರಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ