ಬಾಳೆಹೊನ್ನೂರು : ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ಅಕ್ಟೋಬರ್ 10ರಿಂದ 19ರ ವರೆಗೆ ಜಗದ್ಗುರು ರಂಭಾಪುರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಜರುಗಲಿದೆ ಎಂದು ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಅವರು ಶನಿವಾರ ಶ್ರೀರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ ತಪೋನುಷ್ಠಾನ ಸಂದರ್ಭ ದಸರಾ ಧರ್ಮ ಸಮ್ಮೇಳನದ ಪ್ರಥಮ ಪ್ರಕಟಣೆ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.
45 ವರ್ಷಗಳ ಹಿಂದೆ ಪರಮ ಪೂಜ್ಯ ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ದಸರಾ ಧರ್ಮ ಸಮಾರಂಭವನ್ನು ಲಕ್ಷ್ಮೇಶ್ವರದಲ್ಲಿ ನೆರವೇರಿಸಿದ್ದರು. ಇದೀಗ ತಮ್ಮ 27ನೇ ವರ್ಷದ ದಸರಾ ಧರ್ಮ ಸಮ್ಮೇಳನ ನಡೆಸುತ್ತಿರುವುದು ಆ ಭಾಗದ ಭಕ್ತರಿಗೆ ಅಪಾರ ಸಂತೋಷ ತಂದಿದೆ ಎಂದರು.
ದಸರಾ ಧರ್ಮ ಸಮಾರಂಭದ ಮಾರ್ಗದರ್ಶಕರಾದ ಮುಕ್ತಿಮಂದಿರ ಕ್ಷೇತ್ರದ ಪಟ್ಟಾಧ್ಯಕ್ಷ Ü ಶ್ರೀವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಯಶಸ್ವಿಗಾಗಿ ಈಗಾಗಲೇ ಸೇವಾ ಸಮಿತಿ ರಚಿಸಲಾಗಿದೆ. ಕೆಲವೇ ದಿನಗಳಲ್ಲಿ ಉಪ ಸಮಿತಿ ರಚಿಸಲಾಗಿದೆ ಎಂದರು.
ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ್, ಜಿ.ಎಸ್.ಗಡ್ಡದ್ದೇವರ ಮಠ ಮಾತನಾಡಿ, ದಸರಾ ಧರ್ಮ ಸಮ್ಮೇಳನವನ್ನು ಅರ್ಥಪೂರ್ಣವಾಗಿ ನೆರವೇರಿಸಲು ಎಲ್ಲ ಸಮುದಾಯದ ಭಕ್ತ ಸಮೂಹವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಒಂದೊಂದು ಜವಾಬ್ದಾರಿ ವಹಿಸಿ ಕೊಡಲಾಗುವುದೆಂದರು.
ಎಸಳೂರು ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ತಾವರೆಕೆರೆ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಹಾರನಹಳ್ಳಿ ವಿಶ್ವಾರಾಧ್ಯ ಶಿವಾಚಾರ್ಯರು ಉಪಸ್ಥಿತರಿದ್ದರು.
ಈ ಸಂದರ್ಭ ಚನ್ನಪ್ಪ ಕೋಲಕಾರ, ನಾಗಪ್ಪ ವಡಕಣ್ಣವರ, ಬಸವರಾಜ ಪಲ್ಲೇದ, ಎಸ್.ಎಫ್.ಘಂಟಾಮಠ, ಕುಬೇರಪ್ಪ ಮಹಾಂತಶೆಟ್ಟರ, ವೀರಣ್ಣ ಪವಾಡದ, ಚನ್ನಬಸಪ್ಪ ಲಿಂಗಶೆಟ್ಟಯವರ, ಶಂಬಣ್ಣ ಬಾಳಿಕಾಯಿ, ಸಿದ್ದಲಿಂಗಯ್ಯ, ಶಿವಲಿಂಗಯ್ಯ ಹಾಲೇವಾಡಿಮಠ ಸೇರಿದಂತೆ ನೂರಾರು ಭಕ್ತರು ರಂಭಾಪುರಿ ಜಗದ್ಗುರುಗಳಿಗೆ ಲಕ್ಷ್ಮೇಶ್ವರಕ್ಕೆ ಆಗಮಿಸಲು ಅಧಿಕೃತವಾಗಿ ಬಿನ್ನಹ ಪತ್ರವನ್ನು ಸಮರ್ಪಿಸಿ ಆಶೀರ್ವಾದ ಪಡೆದರು.
ಆನಂದ ಮೆಕ್ಕಿ ಸ್ವಾಗತಿಸಿ, ಡಾ. ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ ನಿರೂಪಿಸಿದರು.
ಅವರು ಶನಿವಾರ ಶ್ರೀರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ ತಪೋನುಷ್ಠಾನ ಸಂದರ್ಭ ದಸರಾ ಧರ್ಮ ಸಮ್ಮೇಳನದ ಪ್ರಥಮ ಪ್ರಕಟಣೆ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.
45 ವರ್ಷಗಳ ಹಿಂದೆ ಪರಮ ಪೂಜ್ಯ ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ದಸರಾ ಧರ್ಮ ಸಮಾರಂಭವನ್ನು ಲಕ್ಷ್ಮೇಶ್ವರದಲ್ಲಿ ನೆರವೇರಿಸಿದ್ದರು. ಇದೀಗ ತಮ್ಮ 27ನೇ ವರ್ಷದ ದಸರಾ ಧರ್ಮ ಸಮ್ಮೇಳನ ನಡೆಸುತ್ತಿರುವುದು ಆ ಭಾಗದ ಭಕ್ತರಿಗೆ ಅಪಾರ ಸಂತೋಷ ತಂದಿದೆ ಎಂದರು.
ದಸರಾ ಧರ್ಮ ಸಮಾರಂಭದ ಮಾರ್ಗದರ್ಶಕರಾದ ಮುಕ್ತಿಮಂದಿರ ಕ್ಷೇತ್ರದ ಪಟ್ಟಾಧ್ಯಕ್ಷ Ü ಶ್ರೀವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಯಶಸ್ವಿಗಾಗಿ ಈಗಾಗಲೇ ಸೇವಾ ಸಮಿತಿ ರಚಿಸಲಾಗಿದೆ. ಕೆಲವೇ ದಿನಗಳಲ್ಲಿ ಉಪ ಸಮಿತಿ ರಚಿಸಲಾಗಿದೆ ಎಂದರು.
ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ್, ಜಿ.ಎಸ್.ಗಡ್ಡದ್ದೇವರ ಮಠ ಮಾತನಾಡಿ, ದಸರಾ ಧರ್ಮ ಸಮ್ಮೇಳನವನ್ನು ಅರ್ಥಪೂರ್ಣವಾಗಿ ನೆರವೇರಿಸಲು ಎಲ್ಲ ಸಮುದಾಯದ ಭಕ್ತ ಸಮೂಹವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಒಂದೊಂದು ಜವಾಬ್ದಾರಿ ವಹಿಸಿ ಕೊಡಲಾಗುವುದೆಂದರು.
ಎಸಳೂರು ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ತಾವರೆಕೆರೆ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಹಾರನಹಳ್ಳಿ ವಿಶ್ವಾರಾಧ್ಯ ಶಿವಾಚಾರ್ಯರು ಉಪಸ್ಥಿತರಿದ್ದರು.
ಈ ಸಂದರ್ಭ ಚನ್ನಪ್ಪ ಕೋಲಕಾರ, ನಾಗಪ್ಪ ವಡಕಣ್ಣವರ, ಬಸವರಾಜ ಪಲ್ಲೇದ, ಎಸ್.ಎಫ್.ಘಂಟಾಮಠ, ಕುಬೇರಪ್ಪ ಮಹಾಂತಶೆಟ್ಟರ, ವೀರಣ್ಣ ಪವಾಡದ, ಚನ್ನಬಸಪ್ಪ ಲಿಂಗಶೆಟ್ಟಯವರ, ಶಂಬಣ್ಣ ಬಾಳಿಕಾಯಿ, ಸಿದ್ದಲಿಂಗಯ್ಯ, ಶಿವಲಿಂಗಯ್ಯ ಹಾಲೇವಾಡಿಮಠ ಸೇರಿದಂತೆ ನೂರಾರು ಭಕ್ತರು ರಂಭಾಪುರಿ ಜಗದ್ಗುರುಗಳಿಗೆ ಲಕ್ಷ್ಮೇಶ್ವರಕ್ಕೆ ಆಗಮಿಸಲು ಅಧಿಕೃತವಾಗಿ ಬಿನ್ನಹ ಪತ್ರವನ್ನು ಸಮರ್ಪಿಸಿ ಆಶೀರ್ವಾದ ಪಡೆದರು.
ಆನಂದ ಮೆಕ್ಕಿ ಸ್ವಾಗತಿಸಿ, ಡಾ. ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ ನಿರೂಪಿಸಿದರು.