ಸಮಷ್ಠಿ ಹಿತ ಕಾಯುವುದೇ ಸಾಹಿತ್ಯದ ಗುರಿ
ಸಮಷ್ಠಿ ಬದುಕಿನ ಹಿತ ಕಾಯುವುದೇ ಒಟ್ಟು ಸಾಹಿತ್ಯದ ಗುರಿ ಎಂದು ಸಾಹಿತಿ ಚಟ್ನಹಳ್ಳಿ ಮಹೇಶ್ ಅಭಿಪ್ರಾಯಪಟ್ಟರು.
Vijaya Karnataka 25 Aug 2019, 5:00 am
ಚಿಕ್ಕಮಗಳೂರು : ಸಮಷ್ಠಿ ಬದುಕಿನ ಹಿತ ಕಾಯುವುದೇ ಒಟ್ಟು ಸಾಹಿತ್ಯದ ಗುರಿ ಎಂದು ಸಾಹಿತಿ ಚಟ್ನಹಳ್ಳಿ ಮಹೇಶ್ ಅಭಿಪ್ರಾಯಪಟ್ಟರು.
ಕೇಂದ್ರ ಸಾಹಿತ್ಯ ಅಕಾಡೆಮಿ, ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ, ಎಂಎಲ್ಎಂಎನ್ ಬಿಇಡಿ ಕಾಲೇಜು ಸಹಯೋಗದಲ್ಲಿಶನಿವಾರ ಆಯೋಜಿಸಿದ್ದ ಪ್ರಗತಿಪರ ಸಾಹಿತ್ಯ; ಸಾಮಾಜಿಕ ಚಿಂತನೆ ಸಾಹಿತ್ಯ ವೇದಿಕೆ ಕಾರ್ಯಕ್ರಮದಲ್ಲಿವಚನ ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿದರು.ವಿದ್ಯಾರ್ಥಿಗಳಲ್ಲಿಸಾಹಿತ್ಯದ ಆಸಕ್ತಿ ಅರಳಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಸಮಕಾಲೀನ ಸಮಾಜದಲ್ಲಿನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಾಹಿತ್ಯ ಪರಿಹಾರ ಒದಗಿಸುತ್ತದೆ. ಬದುಕಿಗೆ ಬೇಕಾದ ಹೊಸ ಆಯಾಮ, ಅರಿವನ್ನು ಸಾಹಿತ್ಯ ಕೊಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಲೆನಾಡು ವಿದ್ಯಾಸಂಸ್ಥೆ ಉಪಾಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಮಹಿಳೆಯರು ವಿದ್ಯೆ, ಆರೋಗ್ಯ, ಸ್ವಾವಲಂಬನೆ ಸಾಧಿಸಿದಾಗ ನಿಜವಾದ ಸ್ವಾತಂತ್ರ್ಯ ಬರುತ್ತದೆ ಎಂದು ಗಾಂಧೀಜಿ ಹೇಳಿದ್ದರು. ಅಂತಹ ದಿನಗಳು ಬಂದಿರುವುದು ಸಂತಸದ ಸಂಗತಿ ಎಂದು ಹೇಳಿದರು.
ನವ್ಯ ಸಾಹಿತ್ಯದ ಬಗ್ಗೆ ಪ್ರಾಧ್ಯಾಪಕ ಡಾ.ಎಚ್.ಎಂ.ಮಹೇಶ್, ದಲಿತ ಸಾಹಿತ್ಯದ ಬಗ್ಗೆ ನಿವೃತ್ತ ಡಿಡಿಪಿಐ ಎಚ್.ಎಂ.ರುದ್ರಸ್ವಾಮಿ, ಬಂಡಾಯ ಸಾಹಿತ್ಯದ ಬಗ್ಗೆ ಲೇಖಕ ರವೀಶ್ ಕ್ಯಾತನಬೀಡು ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ವಿಜಯಲಕ್ಷ್ಮಿ ದೇಸಾಯಿ, ಡಿ.ಎಚ್.ನಟರಾಜ್ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ವೆಂಕಟೇಶ್, ವಕೀಲ ಬಿ.ಆರ್.ಜಗದೀಶ್ ಹಾಜರಿದ್ದರು. ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನದ ಅಧ್ಯಕ್ಷ ಸೂರಿ ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು.
---
ಭಾರತದಲ್ಲಿಬ್ರಿಟಿಷರ ಆಗಮನದ ನಂತರ ನವೋದಯ ಸಾಹಿತ್ಯ ಪರಂಪರೆ ಆರಂಭವಾಯಿತು. ಅದಕ್ಕೂ ಮೊದಲೇ ಭಾರತದಲ್ಲಿಉತ್ಕೃಷ್ಟ ಸಾಹಿತ್ಯ ಇದ್ದರೂ ಇಂಗ್ಲಿಷ್ ಕಾವ್ಯದ ಜತೆಗೆ ಕನ್ನಡದ ಕಾವ್ಯ ಸಮ್ಮಿಳಿತವಾಗಿ ನವೋದಯ ಸಾಹಿತ್ಯ ಸೃಷ್ಟಿಯಾಯಿತು. ಸಾಹಿತ್ಯ ಇಲ್ಲಿಂದ ಸಾಮಾನ್ಯರಿಗೆ ತಲುಪಲು ಸಾಧ್ಯವಾಯಿತು.
-ಸ.ಗಿರಿಜಾಶಂಕರ, ಹಿರಿಯ ಪತ್ರಕರ್ತ
------------------
ಕೇಂದ್ರ ಸಾಹಿತ್ಯ ಅಕಾಡೆಮಿ, ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ, ಎಂಎಲ್ಎಂಎನ್ ಬಿಇಡಿ ಕಾಲೇಜು ಸಹಯೋಗದಲ್ಲಿಶನಿವಾರ ಆಯೋಜಿಸಿದ್ದ ಪ್ರಗತಿಪರ ಸಾಹಿತ್ಯ; ಸಾಮಾಜಿಕ ಚಿಂತನೆ ಸಾಹಿತ್ಯ ವೇದಿಕೆ ಕಾರ್ಯಕ್ರಮದಲ್ಲಿವಚನ ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿದರು.ವಿದ್ಯಾರ್ಥಿಗಳಲ್ಲಿಸಾಹಿತ್ಯದ ಆಸಕ್ತಿ ಅರಳಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಸಮಕಾಲೀನ ಸಮಾಜದಲ್ಲಿನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಾಹಿತ್ಯ ಪರಿಹಾರ ಒದಗಿಸುತ್ತದೆ. ಬದುಕಿಗೆ ಬೇಕಾದ ಹೊಸ ಆಯಾಮ, ಅರಿವನ್ನು ಸಾಹಿತ್ಯ ಕೊಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಲೆನಾಡು ವಿದ್ಯಾಸಂಸ್ಥೆ ಉಪಾಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಮಹಿಳೆಯರು ವಿದ್ಯೆ, ಆರೋಗ್ಯ, ಸ್ವಾವಲಂಬನೆ ಸಾಧಿಸಿದಾಗ ನಿಜವಾದ ಸ್ವಾತಂತ್ರ್ಯ ಬರುತ್ತದೆ ಎಂದು ಗಾಂಧೀಜಿ ಹೇಳಿದ್ದರು. ಅಂತಹ ದಿನಗಳು ಬಂದಿರುವುದು ಸಂತಸದ ಸಂಗತಿ ಎಂದು ಹೇಳಿದರು.
ನವ್ಯ ಸಾಹಿತ್ಯದ ಬಗ್ಗೆ ಪ್ರಾಧ್ಯಾಪಕ ಡಾ.ಎಚ್.ಎಂ.ಮಹೇಶ್, ದಲಿತ ಸಾಹಿತ್ಯದ ಬಗ್ಗೆ ನಿವೃತ್ತ ಡಿಡಿಪಿಐ ಎಚ್.ಎಂ.ರುದ್ರಸ್ವಾಮಿ, ಬಂಡಾಯ ಸಾಹಿತ್ಯದ ಬಗ್ಗೆ ಲೇಖಕ ರವೀಶ್ ಕ್ಯಾತನಬೀಡು ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ವಿಜಯಲಕ್ಷ್ಮಿ ದೇಸಾಯಿ, ಡಿ.ಎಚ್.ನಟರಾಜ್ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ವೆಂಕಟೇಶ್, ವಕೀಲ ಬಿ.ಆರ್.ಜಗದೀಶ್ ಹಾಜರಿದ್ದರು. ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನದ ಅಧ್ಯಕ್ಷ ಸೂರಿ ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು.
---
ಭಾರತದಲ್ಲಿಬ್ರಿಟಿಷರ ಆಗಮನದ ನಂತರ ನವೋದಯ ಸಾಹಿತ್ಯ ಪರಂಪರೆ ಆರಂಭವಾಯಿತು. ಅದಕ್ಕೂ ಮೊದಲೇ ಭಾರತದಲ್ಲಿಉತ್ಕೃಷ್ಟ ಸಾಹಿತ್ಯ ಇದ್ದರೂ ಇಂಗ್ಲಿಷ್ ಕಾವ್ಯದ ಜತೆಗೆ ಕನ್ನಡದ ಕಾವ್ಯ ಸಮ್ಮಿಳಿತವಾಗಿ ನವೋದಯ ಸಾಹಿತ್ಯ ಸೃಷ್ಟಿಯಾಯಿತು. ಸಾಹಿತ್ಯ ಇಲ್ಲಿಂದ ಸಾಮಾನ್ಯರಿಗೆ ತಲುಪಲು ಸಾಧ್ಯವಾಯಿತು.
-ಸ.ಗಿರಿಜಾಶಂಕರ, ಹಿರಿಯ ಪತ್ರಕರ್ತ
------------------