ಅಜ್ಜಂಪುರ : ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ರಂಗಶಿಕ್ಷ ಕರ ನೇಮಕದ ವಿಷಯವನ್ನು ಆದ್ಯತೆಯ ವಿಷಯವಾಗಿ ಪರಿಗಣಿ ಪ್ರತಿ ಶಾಲೆಗೂಬ್ಬ ರಂಗಶಿಕ್ಷ ಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣ ಸಮೀಪದ ಸಾಣೇಹಳ್ಳಿ ಎಸ್.ಎಸ್. ರಂಗಮಂದಿರದಲ್ಲಿ ಶಿವಕುಮಾರ ಕಲಾ ಸಂಘ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದೊಂದಿಗೆ ಬುಧವಾರ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ಕಂಸಾಳೆ, ರಂಗಗೀತೆಗಳ ಗಾಯನ, ರಂಗ ಸನ್ಮಾನ, ರಂಗಭೂಮಿ ಮಹತ್ವ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಂಗಭೂಮಿ ಕೇವಲ ಮನರಂಜನೆಯ ಮಾಧ್ಯಮವಲ್ಲ. ಅದರ ಸಾಧ್ಯತೆಗಳು ಅಪರಿಮಿತವಾದವು. ರಂಗಭೂಮಿಯಲ್ಲಿ ಏನಿದೆ ಎನ್ನುವುದಕ್ಕಿಂತ ಏನಿಲ್ಲ ಎಂದು ಕೇಳಿಕೊಳ್ಳಬೇಕು. ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ರಂಗಭೂಮಿಯ ಪ್ರಭಾವ ಇದ್ದೇ ಇದೆ. ಅದರಲ್ಲೂ ಶಿಕ್ಷ ಣದಲ್ಲಿ ರಂಗಭೂಮಿಯ ಬಳಕೆ ಅತ್ಯಂತ ಅವಶ್ಯವಾದುದು. ಈಗಿರುವ ಔಪಚಾರಿಕ ಶಿಕ್ಷ ಣಕ್ಕೆ ಬಹಳಷ್ಟು ಇತಿಮಿತಿಗಳಿವೆ. ಅದು ಜ್ಞಾನವನ್ನು ತುರುಕುತ್ತಿದೆಯೇ ಹೊರತು ಮನಸ್ಸನ್ನು ವಿಕಾಸಗೊಳಿಸುತ್ತಿಲ್ಲ ಎಂದರು.
ರಂಗಭೂಮಿಗೆ ಆದಿ-ಅಂತ್ಯವಿಲ್ಲ. ಅದು ಒಂದು ದಿನದ ಆಚರಣೆಯಲ್ಲ. ರಂಗಭೂಮಿ ವ್ಯಕ್ತಿಯ ಜಡತ್ವವನ್ನು ಹೋಗಲಾಡಿಸಿ ಚಿಂತನೆಗೆ ಹಚ್ಚುತ್ತದೆ. ನೋವುಗಳನ್ನು ನಿವಾರಿಸಿ ನಲಿವನ್ನು ನೀಡುತ್ತದೆ ಎಂದರು.
ರಂಗಗೌರವ ಸ್ವೀಕರಿಸಿ ಮಾತನಾಡಿದ ಹಿರಿಯ ರಂಗಕರ್ಮಿ ಕೆ.ಪಿ.ಎಂ. ಗಣೇಶಯ್ಯ ಮಾತನಾಡಿದರು. ರಂಗಶಿಕ್ಷ ಕ ಕೆ. ವೆಂಕಟೇಶ್ವರ 'ಶಿಕ್ಷ ಣದಲ್ಲಿ ರಂಗಭೂಮಿಯ ಮಹತ್ವ' ಕುರಿತಂತೆ ಮಾತನಾಡಿ, ರಂಗಭೂಮಿಯ ವ್ಯಾಪ್ತಿ ಅತ್ಯಂತ ವಿಶಾಲವಾದುದು. ರಂಗಕರ್ಮಿಗಳು ವಿಶ್ವ ಕುಟುಂಬಿಗಳು. ರಂಗಭೂಮಿಯಲ್ಲಿ ಜಾತಿ, ಮತ, ಧರ್ಮ, ಭಾಷೆ, ಗಂಡು-ಹೆಣ್ಣು, ಬಡವ-ಶ್ರೀಮಂತ, ಅಕ್ಷ ರಸ್ಥ-ಅನಕ್ಷ ರಸ್ಥ ಮುಂತಾದ ಅಸಮಾನತೆಗಳು ಇಲ್ಲ. ಇಂದಿನ ಮೆಕಾಲೆಯ ಶಿಕ್ಷ ಣ ಪದ್ಧತಿ ಕೇವಲ ಜ್ಞಾನಧಾರಿತ ಗುಮಾಸ್ತರನ್ನಾಗಿ ರೂಪಿಸುತ್ತಿದೆಯೇ ಹೊರತು ನಿಜ ಅರ್ಥದಲ್ಲಿ ಮಕ್ಕಳನ್ನು ವಿಶ್ವಮಾನವರನ್ನಾಗಿಸುವಲ್ಲಿ ಸೋತಿದೆ. ಈ ಔಪಚಾರಿಕ ಪದ್ಧತಿಯಿಂದ ಮಕ್ಕಳಲ್ಲಿನ ಕ್ರಿಯಾಶೀಲತೆಯೇ ಬತ್ತಿಹೋಗಿದೆ. ವಿದ್ಯಾರ್ಥಿ-ಶಿಕ್ಷ ಕರ ನಡುವಿನ ಅಂತರ ಹೆಚ್ಚಿದ್ದು ಕೇವಲ ಅಂಕಗಳಿಕೆಗೆ ಮಾತ್ರ ಸೀಮಿತವಾಗಿದೆ. ಅಂಕ ಗಳಿಕೆಯೇ ಮುಖ್ಯ ಗುರಿ ಎಂಬ ಭ್ರಮೆಯಲ್ಲಿ ಶಿಕ್ಷ ಣ ಕ್ಷೇತ್ರವಿದೆ. ರಂಗಭೂಮಿ ಅನುಭವ ಮತ್ತು ಚಟುವಟಿಕೆಗಳ ಆಧಾರಿತವಾದದ್ದು. ಇಲ್ಲಿ ಕಲಿತದ್ದು ಮರೆಯುವ ಪ್ರಶ್ನೆಯೇ ಇಲ್ಲ. ಕೀಳರಮೆಯನ್ನು ತೊಡೆದುಹಾಕಿ ಕ್ರಿಯಾಶೀಲತೆಯನ್ನು ಬೆಳೆಸುತ್ತದೆ. ಇಂಥ ಅಪೂರ್ವ ಸಾಧ್ಯತೆಗಳುಳ್ಳ ರಂಗಭೂಮಿಯನ್ನು ಬಳಸಿಕೊಳ್ಳುವಲ್ಲಿ ಶಿಕ್ಷ ಣ ವ್ಯವಸ್ಥೆ ಸೋತಿದೆ ಎಂದರು. ವಿಶ್ವರಂಗಭೂಮಿ ದಿನಾಚರಣೆಯ ಸಂದೇಶ ಓದಲಾಯಿತು. ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷ ಕರು, ಗ್ರಾಮಸ್ಥರು ಭಾಗವಹಿಸಿದ್ದರು. ರಂಗಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು.
ಪಟ್ಟಣ ಸಮೀಪದ ಸಾಣೇಹಳ್ಳಿ ಎಸ್.ಎಸ್. ರಂಗಮಂದಿರದಲ್ಲಿ ಶಿವಕುಮಾರ ಕಲಾ ಸಂಘ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದೊಂದಿಗೆ ಬುಧವಾರ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ಕಂಸಾಳೆ, ರಂಗಗೀತೆಗಳ ಗಾಯನ, ರಂಗ ಸನ್ಮಾನ, ರಂಗಭೂಮಿ ಮಹತ್ವ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಂಗಭೂಮಿ ಕೇವಲ ಮನರಂಜನೆಯ ಮಾಧ್ಯಮವಲ್ಲ. ಅದರ ಸಾಧ್ಯತೆಗಳು ಅಪರಿಮಿತವಾದವು. ರಂಗಭೂಮಿಯಲ್ಲಿ ಏನಿದೆ ಎನ್ನುವುದಕ್ಕಿಂತ ಏನಿಲ್ಲ ಎಂದು ಕೇಳಿಕೊಳ್ಳಬೇಕು. ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ರಂಗಭೂಮಿಯ ಪ್ರಭಾವ ಇದ್ದೇ ಇದೆ. ಅದರಲ್ಲೂ ಶಿಕ್ಷ ಣದಲ್ಲಿ ರಂಗಭೂಮಿಯ ಬಳಕೆ ಅತ್ಯಂತ ಅವಶ್ಯವಾದುದು. ಈಗಿರುವ ಔಪಚಾರಿಕ ಶಿಕ್ಷ ಣಕ್ಕೆ ಬಹಳಷ್ಟು ಇತಿಮಿತಿಗಳಿವೆ. ಅದು ಜ್ಞಾನವನ್ನು ತುರುಕುತ್ತಿದೆಯೇ ಹೊರತು ಮನಸ್ಸನ್ನು ವಿಕಾಸಗೊಳಿಸುತ್ತಿಲ್ಲ ಎಂದರು.
ರಂಗಭೂಮಿಗೆ ಆದಿ-ಅಂತ್ಯವಿಲ್ಲ. ಅದು ಒಂದು ದಿನದ ಆಚರಣೆಯಲ್ಲ. ರಂಗಭೂಮಿ ವ್ಯಕ್ತಿಯ ಜಡತ್ವವನ್ನು ಹೋಗಲಾಡಿಸಿ ಚಿಂತನೆಗೆ ಹಚ್ಚುತ್ತದೆ. ನೋವುಗಳನ್ನು ನಿವಾರಿಸಿ ನಲಿವನ್ನು ನೀಡುತ್ತದೆ ಎಂದರು.
ರಂಗಗೌರವ ಸ್ವೀಕರಿಸಿ ಮಾತನಾಡಿದ ಹಿರಿಯ ರಂಗಕರ್ಮಿ ಕೆ.ಪಿ.ಎಂ. ಗಣೇಶಯ್ಯ ಮಾತನಾಡಿದರು. ರಂಗಶಿಕ್ಷ ಕ ಕೆ. ವೆಂಕಟೇಶ್ವರ 'ಶಿಕ್ಷ ಣದಲ್ಲಿ ರಂಗಭೂಮಿಯ ಮಹತ್ವ' ಕುರಿತಂತೆ ಮಾತನಾಡಿ, ರಂಗಭೂಮಿಯ ವ್ಯಾಪ್ತಿ ಅತ್ಯಂತ ವಿಶಾಲವಾದುದು. ರಂಗಕರ್ಮಿಗಳು ವಿಶ್ವ ಕುಟುಂಬಿಗಳು. ರಂಗಭೂಮಿಯಲ್ಲಿ ಜಾತಿ, ಮತ, ಧರ್ಮ, ಭಾಷೆ, ಗಂಡು-ಹೆಣ್ಣು, ಬಡವ-ಶ್ರೀಮಂತ, ಅಕ್ಷ ರಸ್ಥ-ಅನಕ್ಷ ರಸ್ಥ ಮುಂತಾದ ಅಸಮಾನತೆಗಳು ಇಲ್ಲ. ಇಂದಿನ ಮೆಕಾಲೆಯ ಶಿಕ್ಷ ಣ ಪದ್ಧತಿ ಕೇವಲ ಜ್ಞಾನಧಾರಿತ ಗುಮಾಸ್ತರನ್ನಾಗಿ ರೂಪಿಸುತ್ತಿದೆಯೇ ಹೊರತು ನಿಜ ಅರ್ಥದಲ್ಲಿ ಮಕ್ಕಳನ್ನು ವಿಶ್ವಮಾನವರನ್ನಾಗಿಸುವಲ್ಲಿ ಸೋತಿದೆ. ಈ ಔಪಚಾರಿಕ ಪದ್ಧತಿಯಿಂದ ಮಕ್ಕಳಲ್ಲಿನ ಕ್ರಿಯಾಶೀಲತೆಯೇ ಬತ್ತಿಹೋಗಿದೆ. ವಿದ್ಯಾರ್ಥಿ-ಶಿಕ್ಷ ಕರ ನಡುವಿನ ಅಂತರ ಹೆಚ್ಚಿದ್ದು ಕೇವಲ ಅಂಕಗಳಿಕೆಗೆ ಮಾತ್ರ ಸೀಮಿತವಾಗಿದೆ. ಅಂಕ ಗಳಿಕೆಯೇ ಮುಖ್ಯ ಗುರಿ ಎಂಬ ಭ್ರಮೆಯಲ್ಲಿ ಶಿಕ್ಷ ಣ ಕ್ಷೇತ್ರವಿದೆ. ರಂಗಭೂಮಿ ಅನುಭವ ಮತ್ತು ಚಟುವಟಿಕೆಗಳ ಆಧಾರಿತವಾದದ್ದು. ಇಲ್ಲಿ ಕಲಿತದ್ದು ಮರೆಯುವ ಪ್ರಶ್ನೆಯೇ ಇಲ್ಲ. ಕೀಳರಮೆಯನ್ನು ತೊಡೆದುಹಾಕಿ ಕ್ರಿಯಾಶೀಲತೆಯನ್ನು ಬೆಳೆಸುತ್ತದೆ. ಇಂಥ ಅಪೂರ್ವ ಸಾಧ್ಯತೆಗಳುಳ್ಳ ರಂಗಭೂಮಿಯನ್ನು ಬಳಸಿಕೊಳ್ಳುವಲ್ಲಿ ಶಿಕ್ಷ ಣ ವ್ಯವಸ್ಥೆ ಸೋತಿದೆ ಎಂದರು. ವಿಶ್ವರಂಗಭೂಮಿ ದಿನಾಚರಣೆಯ ಸಂದೇಶ ಓದಲಾಯಿತು. ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷ ಕರು, ಗ್ರಾಮಸ್ಥರು ಭಾಗವಹಿಸಿದ್ದರು. ರಂಗಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು.