ಆ್ಯಪ್ನಗರ

ಹಿಂದೂ ದೇವರಿಗೆ ಅಪಮಾನ: ಬಂಧನ

ಹಿಂದೂ ದೇವರ ಚಿತ್ರವನ್ನು ಅಪಮಾನಕರ ರೀತಿಯಲ್ಲಿ ಬಳಸಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ತಪ್ಪಿತಸ್ಥ ಬಾಲಕನನ್ನು ಪೊಲೀಸರು ಬಂಧಿಸಿ ಚಿಕ್ಕಮಗಳೂರಿನ ಬಾಲನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Vijaya Karnataka 26 Jun 2018, 5:00 am
ನರಸಿಂಹರಾಜಪುರ : ಹಿಂದೂ ದೇವರ ಚಿತ್ರವನ್ನು ಅಪಮಾನಕರ ರೀತಿಯಲ್ಲಿ ಬಳಸಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ತಪ್ಪಿತಸ್ಥ ಬಾಲಕನನ್ನು ಪೊಲೀಸರು ಬಂಧಿಸಿ ಚಿಕ್ಕಮಗಳೂರಿನ ಬಾಲನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Vijaya Karnataka Web the hindu god is abusive arrest
ಹಿಂದೂ ದೇವರಿಗೆ ಅಪಮಾನ: ಬಂಧನ


ಪಟ್ಟಣದ ನಿವಾಸಿ ಫಯಾಜ್‌ ಬಂಧಿತ ಆರೋಪಿ. ಈತನನ್ನು ಭಾನುವಾರ ರಾತ್ರಿಯೇ ಬಂಧಿಸಿದ ಪೊಲೀಸರು ವಿಚಾರಣೆಗೊಳಪಡಿಸಿದರು. ಆರೋಪಿಯು ಹಿಂದೂ ದೇವರಾದ ಆಂಜನೇಯನು ಟಿಪ್ಪು ಸುಲ್ತಾನ್‌ ಕಾಲಿಗೆ ನಮಸ್ಕರಿಸುವ ರೀತಿಯ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದನು. ಇದನ್ನು ಗಮನಿಸಿದ ಬಜರಂಗದಳ, ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಯ ನೂರಾರು ಕಾರ್ಯಕರ್ತರು ಆಕ್ರೋಶಗೊಂಡಿದ್ದು, ರಾತ್ರಿ 8ರ ಸುಮಾರಿಗೆ ಪೊಲೀಸ್‌ ಠಾಣೆಗೆ ಆಗಮಿಸಿ, ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.

ಹಿಂದೂ ದೇವರಾದ ಆಂಜನೇಯನನ್ನು ಅಪಮಾನಗೊಳಿಸುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ, ಕೋಮು ಪ್ರಚೋದನೆ ಉಂಟು ಮಾಡಿದ್ದರಿಂದ ಆರೋಪಿ ಫಯಾಜ್‌ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಬಜರಂಗದಳ ಜಿಲ್ಲಾ ಸಹ ಸಂಚಾಲಕ ಮಾಂತೇಶ್‌, ಪೊಲೀಸರಿಗೆ ದೂರು ನೀಡಿದರು. ಕೋಮು ಪ್ರಚೋದನೆ ಹಾಗೂ ಸೈಬರ್‌ ಕ್ರೈಮ್‌ ಆಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ. ಸಿಪಿಐ ಜಗನ್ನಾಥ್‌ ನೇತೃತ್ವದಲ್ಲಿ ತನಿಖೆ ಮುಂದುವರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ