ಆ್ಯಪ್ನಗರ

ಸಿಂಗಟಗೆರೆಗೆ ಚಿರತೆ ಬಂತು ಚಿರತೆ!

ಚಿರತೆಯೊಂದು ಕೊಬ್ಬರಿ ತುಂಬಿದ್ದ ಗೋಡೌನ್‌ ಒಳಗೆ ಸೇರಿಕೊಂಡು ಹಲವು ಗಂಟೆಗಳ ಕಾಲ ಜನರನ್ನು ಭಯಭೀತರನ್ನಾಗಿಸಿದ ಘಟನೆ ತಾಲೂಕಿನ ಸಿಂಗಟಗೆರೆಯಲ್ಲಿಭಾನುವಾರ ರಾತ್ರಿ ನಡೆದಿದೆ.

Vijaya Karnataka 10 Sep 2019, 5:00 am
ಕಡೂರು (ಚಿಕ್ಕಮಗಳೂರು): ಚಿರತೆಯೊಂದು ಕೊಬ್ಬರಿ ತುಂಬಿದ್ದ ಗೋಡೌನ್‌ ಒಳಗೆ ಸೇರಿಕೊಂಡು ಹಲವು ಗಂಟೆಗಳ ಕಾಲ ಜನರನ್ನು ಭಯಭೀತರನ್ನಾಗಿಸಿದ ಘಟನೆ ತಾಲೂಕಿನ ಸಿಂಗಟಗೆರೆಯಲ್ಲಿಭಾನುವಾರ ರಾತ್ರಿ ನಡೆದಿದೆ.
Vijaya Karnataka Web the leopard had to come to singapore
ಸಿಂಗಟಗೆರೆಗೆ ಚಿರತೆ ಬಂತು ಚಿರತೆ!


ಸಿಂಗಟಗೆರೆ ಮೆಸ್ಕಾಂ 110ಕೆವಿ ಸಾಮರ್ಥ್ಯದ ವಿತರಣಾ ಕೇಂದ್ರದ ಎದುರು ಶಿವು ಎಂಬುವವರಿಗೆ ಸೇರಿದ ಕೊಬ್ಬರಿ ಗೋಡೌನ್‌ಗೆ ಸಂಜೆ 6 ಗಂಟೆ ಸುಮಾರಿಗೆ ಚಿರತೆಯೊಂದು ಪ್ರವೇಶಿಸಿತ್ತುಎನ್ನಲಾಗಿದೆ. ಅಕ್ಕಪಕ್ಕದ ಕೆಲವು ನಿವಾಸಿಗಳು ಇದನ್ನು ನೋಡಿದ್ದಾಗಿ ತಿಳಿಸಿದ್ದರಿಂದ ತಕ್ಷಣವೇ ಗ್ರಾಮದಲ್ಲಿಸುದ್ದಿ ಹಬ್ಬಿತು. ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು. ವಲಯ ಅರಣ್ಯಾಧಿಕಾರಿ ಪಾಲಾಕ್ಷಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಚಿರತೆ ಹಿಡಿಯುವ ಬೋನು, ಬಲೆ ಮುಂತಾದುವುಗಳೊಂದಿಗೆ ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿದರು. ಆದರೆ, ಚಿರತೆ ಹೊರ ಬರದೇ ಜನರನ್ನು ಇನ್ನಷ್ಟು ಚಿಂತೆಗೀಡು ಮಾಡಿತು.

ಚಿರತೆ ಸೋಮವಾರ ಮಧ್ಯಾಹ್ನದವರೆಗೂ ಹೊರ ಬರದೇ ಇದ್ದುದರಿಂದ ಅರಣ್ಯ ಸಿಬ್ಬಂದಿ ಧೈರ್ಯ ವಹಿಸಿ ಗೋಡೌನ್‌ ಒಳಗೆ ಪ್ರವೇಶಿಸಿದರು. ಆದರೆ ಅಲ್ಲಿಚಿರತೆ ಕಾಣಲಿಲ್ಲ. ಅದು ಯಾವುದೋ ದಾರಿಯಲ್ಲಿತಪ್ಪಿಸಿಕೊಂಡಿರಬಹುದು, ಸನಿಹದಲ್ಲೇ ಇರುವ ಗರುಡನಗಿರಿ ಕಾಡಿನತ್ತ ಹೋಗಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

ಒಟ್ಟಾರೆ 18 ಗಂಟೆಗಳ ಕಾಲ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಸೇರಿದಂತೆ ಗ್ರಾಮಸ್ಥರನ್ನು ಚಿರತೆ ನಿದ್ದೆಗೆಡಿಸಿತ್ತು. ಅಂತಿಮವಾಗಿ ಪ್ರಕರಣ ಸುಖಾಂತವಾಗಿದ್ದರೂ ಜನರ ಭೀತಿ ಮಾತ್ರ ದೂರವಾಗಿರಲಿಲ್ಲ. ಪುನಃ ಯಾವುದೇ ಸಮಯದಲ್ಲಿಚಿರತೆ ಬರಬಹುದು ಎಂಬ ಆತಂಕ ಜನರಲ್ಲಿಮನೆಮಾಡಿದೆ.

ಅರಣ್ಯ ಇಲಾಖೆಯ ಎಸಿಎಫ್‌ ಮುತ್ತಣ್ಣ ಮಾರ್ಗದರ್ಶನದಲ್ಲಿವಲಯ ಅರಣ್ಯಾಧಿಕಾರಿ ಪಾಲಾಕ್ಷಪ್ಪ ಸಿಬ್ಬಂದಿ ತಮ್ಮಯ್ಯ, ಹರೀಶ್‌, ಸಂತೋಷ್‌ ಮುಂತಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ