ಆ್ಯಪ್ನಗರ

ಗ್ರಂಥಾಲಯ ಬೀಗ ಮುರಿದು ದಾಂಧಲೆ

ಪಟ್ಟಣದ ಗ್ರಾಮ ಪಂಚಾಯಿತಿ ಸುಪರ್ದಿಯ ಕೈಲಾಸಂ ಕಲಾಕ್ಷೇತ್ರದಲ್ಲಿರುವ ಕೃಷ್ಣರಾಜೇಂದ್ರ ಸಾರ್ವಜನಿಕ ಗ್ರಂಥಾಲಯದ ಬೀಗ ಮುರಿದು ದಾಂಧಲೆ ಮಾಡಿರುವ ಪ್ರಕರಣ ಬುಧವಾರ ರಾತ್ರಿ ನಡೆದಿದೆ.

Vijaya Karnataka 6 Dec 2019, 5:00 am
ಅಜ್ಜಂಪುರ: ಪಟ್ಟಣದ ಗ್ರಾಮ ಪಂಚಾಯಿತಿ ಸುಪರ್ದಿಯ ಕೈಲಾಸಂ ಕಲಾಕ್ಷೇತ್ರದಲ್ಲಿರುವ ಕೃಷ್ಣರಾಜೇಂದ್ರ ಸಾರ್ವಜನಿಕ ಗ್ರಂಥಾಲಯದ ಬೀಗ ಮುರಿದು ದಾಂಧಲೆ ಮಾಡಿರುವ ಪ್ರಕರಣ ಬುಧವಾರ ರಾತ್ರಿ ನಡೆದಿದೆ.
Vijaya Karnataka Web the library lock is broken
ಗ್ರಂಥಾಲಯ ಬೀಗ ಮುರಿದು ದಾಂಧಲೆ


ಕನ್ನಡ ರಾಜ್ಯೋತ್ಸವ ಮತ್ತು ರಾತ್ರಿ ಆರ್ಕೆಸ್ಟ್ರಾ ಕಾರ್ಯಕ್ರಮ ಕಲಾ ಕ್ಷೇತ್ರದಲ್ಲಿಆಯೋಜಿಸಲಾಗಿತ್ತು. ಒಂದು ಪಾಶ್ರ್ವದಲ್ಲಿಬಾಗಿಲನ್ನು ಹಾಕಿ ಯಾರೂ ತೆಗೆಯಬಾರದೆಂದು ಗಾಡ್ರೇಜ್‌ ಬೀರನ್ನು ಇಡಲಾಗಿತ್ತು. ಮುಂಭಾಗದ ಬೀಗ ಒಡೆದು ಒಳ ನುಗ್ಗಿದ ಅಪರಿಚಿತರು ಬೀರನ್ನು ಸರಿಸಿ ಓಡಾಡಲು ಅನುಕೂಲ ಮಾಡಿಕೊಂಡು ಗ್ರಂಥಾಲಯ ಪುಸ್ತಕಗಳು, ದಿನ ಪತ್ರಿಕೆಗಳು, ಕುರ್ಚಿ, ಟೇಬಲ್‌ ಬೀರುವಿನಲ್ಲಿಇದ್ದ ಸಾಮಾನುಗಳನ್ನು ಎಲ್ಲೆಂದರಲ್ಲಿಬಿಸಾಡಿ ಹಾಳು ಮಾಡಿದ್ದಾರೆ.

ಗ್ರಂಥಾಲಯದ ರೆಫರೆನ್ಸ್‌ ಪುಸ್ತಕಗಳು, ಬೆಲೆಬಾಳುವ ಸಾಮಾನುಗಳನ್ನು ಕಿತ್ತು ಬಿಸಾಡಿದ್ದಾರೆ. ಕಳೆದ ಬಾರಿ ರಾಜ್ಯೋತ್ಸವದಂದು ಕೂಡಾ ಬೀಗ ಒಡೆದು ಒಳನುಗ್ಗಿ ಮದ್ಯ ಸೇವಿಸಿ, ಖಾಲಿ ಬಾಟಲಿಗಳನ್ನು ಅಲ್ಲೇ ಬಿಟ್ಟಿದ್ದರು. ಅಲ್ಲೇ ತಿಂದು ಬಿಸಾಕಿರುವ ಎಲೆಗಳನ್ನು ಬೆಳಗ್ಗೆ ಬಂದಾಗ ಸ್ವಚ್ಛ ಮಾಡಲಾಗಿತ್ತು. ಈ ಬಗ್ಗೆ ಗ್ರಂಥಪಾಲಕಿ ಅಜ್ಜಂಪುರ ಪೊಲೀಸರಿಗೆ ದೂರು ನೀಡಿ ಸೂಕ್ತ ಕ್ರಮಕೈಗೊಳ್ಳಲು ವಿನಂತಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ