ಆ್ಯಪ್ನಗರ

ಕಣ್ಣೆತ್ತಿ ನೋಡದ ಜನಪ್ರತಿನಿಧಿಗಳ ವಿರುದ್ಧ ಭುಗಿಲೆದ್ದ ಆಕ್ರೋಶ

ಕಳಸ ತಾಲೂಕಿನಾಧ್ಯಂತ ಭೂಕುಸಿತದಿಂದ ಸಾಕಷ್ಟು ಅನಾಹುತಗಳು ಸಂಭವಿಸಿದ್ದು,ಇನ್ನು ಕೆಲ ಗ್ರಾಮೀಣ ಪ್ರದೇಶಗಳಿಗೆ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭೇಟಿ ಕೊಡದೆ ಇರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Vijaya Karnataka 15 Aug 2019, 5:00 am
ಕಳಸ : ಕಳಸ ತಾಲೂಕಿನಾಧ್ಯಂತ ಭೂಕುಸಿತದಿಂದ ಸಾಕಷ್ಟು ಅನಾಹುತಗಳು ಸಂಭವಿಸಿದ್ದು,ಇನ್ನು ಕೆಲ ಗ್ರಾಮೀಣ ಪ್ರದೇಶಗಳಿಗೆ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭೇಟಿ ಕೊಡದೆ ಇರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Vijaya Karnataka Web CKM-14KLS3


ಇಡಕಿಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಡಕಿಣಿ ಹೊಸಮನೆ ಚಂದ್ರರಾಜಯ್ಯ ಎಂಬುವವರ ಮನೆಯ ಪಕ್ಕದಲ್ಲಿರುವ ದನದ ಕೊಟ್ಟಿಗೆ ಕುಸಿದು ಅದರಡಿ ಆರು ಜಾನುವಾರುಗಳು ಬಿದ್ದು ಪ್ರಾಣ ಕಳೆದುಕೊಂಡಿವೆ.ಅಲ್ಲದೆ ಸಾಕಷ್ಟು ಆಸ್ತಿ ಪಾಸ್ತಿ ಹಾನಿಯಾಗಿದೆ.ಚಂದ್ರರಾಜಯ್ಯ ಅವರು ಹೇಳುವ ಪ್ರಕಾರ ಈ ಬಗ್ಗೆ ಸಂಬಂಧಿಸಿದವರಿಗೆ ಮಾಹಿತಿ ನೀಡಿದರೂ ಯಾರೂ ಇಲ್ಲಿಗೆ ಭೇಟಿ ನೀಡಿಲ್ಲ ಎಂದು ಜನ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.ಅದೇ ಗ್ರಾಮದ ನಾಗೇಂದ್ರ ಅವರು ತಮ್ಮ ಊರು ಎಲ್ಲಿದೆ ಎನ್ನುವುದನ್ನೇ ಮರೆತು ಬಿಟ್ಟಿದ್ದಾರೆ.ಇಲ್ಲಿಯ ಅನಾಹುತದ ಬಗ್ಗೆ ಕಂದಾಯ ಅಧಿಕಾರಿಯೊಬ್ಬರ ಬಳಿ ದೂರವಾಣಿ ಮುಖಾಂತರ ತಿಳಿಸಿದಾಗ ಉಡಾಪೆಯ ಮಾತುಗಳನ್ನು ಹೇಳಿದಲ್ಲದೆ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಹುಷಾರಿಲ್ಲದೆ ಆಸ್ಪತ್ರೆ ಸೇರಿದ್ದವರನ್ನು ಅವರ ಆಸ್ಪತ್ರೆ ಬಿಲ್ಲು ಕಟ್ಟಿ ಮತ ಹಾಕಿಸಿಕೊಂಡಿದ್ದಾರೆ.ಆದರೆ ನಮಗೆ ಸಮಸ್ಯೆ ಬಂದಾಗ ಯಾರೂ ಗಮನ ಹರಿಸಿಲ್ಲ.

ಇದೇ ಗ್ರಾಮದಲ್ಲಿರುವ ಯಶೋದರ ಅವರ ಮನೆಗೂ ಸಾಕಷ್ಟು ಹಾನಿಯಾಗಿದೆ.ಇಲ್ಲದೆ ತೋಟ,ಗದ್ದೆಗಳು ಸಂಪೂರ್ಣನಾಶವಾಗಿದೆ. ಅಲ್ಲಿಯೇ ಇರುವ ಪಾಶ್ರ್ವನಾಥ ಸ್ವಾಮಿ ಬಸದಿ ಹಾಗೂ ಯಳಂದೂರು ಭಾಗಗಳಲ್ಲಿ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ.ನೂರಾರು ಎಕರೆ ತೋಟ ಗದ್ದೆಗಳು ಹೇಳ ಹೆಸರಿಲ್ಲದಂತಾಗಿದೆ.ರಸ್ತೆಗಳು ಕುಸಿದುಹೋಗಿ ಗ್ರಾಮಸ್ಥರು ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.ಕಡಿತಗೊಂಡ ವಿದ್ಯುತ್‌ ಸಂಪರ್ಕವನ್ನು ದುರಸ್ತಿ ಮಾಡಲಾಗುತ್ತಿದೆ.ತಾಲೂಕಿನ ಬಹುತೇಕ ಕಡೆಗಳ ಗ್ರಾಮೀಣ ರಸ್ತೆಗಳಿಗೆ ಜೆಸಿಬಿಯನ್ನು ಕಳುಹಿಸಿ ರಸ್ತೆ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ.ಕಳಸ-ಕುದುರೆಮುಖ-ಕಾರ್ಕಳ ರಸ್ತೆಯನ್ನು ಮೂರು ದಿನಗಳಿಂದ ಸ್ಥಳಿಯರೆ ನಿಂತು ದುರಸ್ತಿ ಕಾರ್ಯ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.ಕಳಸ-ಹೊರನಾಡು ರಸ್ತೆ ಸಂಚಾರ ಪ್ರಾರಂಭವಾಗಿದೆ.ಕಳಸ-ಬಾಳೆ ಹೊನ್ನೂರು ರಸ್ತೆ ಸಂಚಾರ ಪ್ರಾರಂಭವಾಗಿದೆ.ಹಿರೇಬೈಲು-ಕೊಟ್ಟಿಗೆಹಾರ ರಸ್ತೆ ಮಾತ್ರ ದುರಸ್ತಿ ಕಾರ್ಯ ನಡೆಯುತ್ತಿದೆ.ಸಾಂತ್ವನ ಕೇಂದ್ರಗಳಲ್ಲಿ ಮೂಲ ಸೌಲಭ್ಯ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ