ಆ್ಯಪ್ನಗರ

ಪೊಲೀಸ್‌ ವೃತ್ತಿಗೆ ಕ್ರೀಡಾ ವಿರಾಮ ಅವಶ್ಯಕ

ಪೊಲೀಸ್‌ ಇಲಾಖೆಯಲ್ಲಿರುವ ಒತ್ತಡ ಸಹಿಸಿಕೊಳ್ಳಬೇಕಾದರೆ ಕ್ರೀಡಾಕೂಟಗಳು ಬಹಳ ಅವಶ್ಯಕ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಮೇಶ್‌ ಎಂ ಅಡಿಗ ಹೇಳಿದರು.

Vijaya Karnataka 4 Jan 2019, 5:00 am
ಚಿಕ್ಕಮಗಳೂರು: ಪೊಲೀಸ್‌ ಇಲಾಖೆಯಲ್ಲಿರುವ ಒತ್ತಡ ಸಹಿಸಿಕೊಳ್ಳಬೇಕಾದರೆ ಕ್ರೀಡಾಕೂಟಗಳು ಬಹಳ ಅವಶ್ಯಕ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಮೇಶ್‌ ಎಂ ಅಡಿಗ ಹೇಳಿದರು.
Vijaya Karnataka Web CKM-3RUDRAP4


ನಗರದ ರಾಮನಹಳ್ಳಿ ಪೊಲೀಸ್‌ ಕವಾಯತು ಮೈದಾನದಲ್ಲಿ ಗುರುವಾರ ಪೊಲೀಸ್‌ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ, ಇತ್ತೀಚೆಗೆ ನಿಧನರಾದ ಐಪಿಎಸ್‌ ಮಧುಕರಶೆಟ್ಟಿ ಆತ್ಮಕ್ಕೆ ಶಾಂತಿ ಕೋರಿ ಮಾತನಾಡಿದರು. ಪೊಲೀಸ್‌ ಸಿಬ್ಬಂದಿ ಕೊರತೆ, ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅಪರಾಧಗಳು, ಈಗಿನ ವ್ಯವಸ್ಥೆ ಮತ್ತಿತರೆ ಹಲವಾರು ಕಾರಣದಿಂದ ಪೊಲೀಸರು ಬಹಳ ಒತ್ತಡದಿಂದ ಕೆಲಸ ಮಾಡಬೇಕಾಗಿದೆ. ಇಂತಹ ಒತ್ತಡ ಸಹಿಸಿಕೊಳ್ಳಬೇಕಾದರೆ, ದೈಹಿಕ ಮತ್ತು ಮಾನಸಿಕವಾಗಿ ಅವರು ಸದೃಢರಾಗಬೇಕಿದೆ. ಈ ನಿಟ್ಟಿನಲ್ಲಿ ಕ್ರೀಡಾಕೂಟಗಳು ಅತ್ಯವಶ್ಯಕ ಎಂದರು.

ಪೊಲೀಸ್‌ ಇಲಾಖೆ ಮತ್ತು ನ್ಯಾಯಾಲಯಕ್ಕೆ ಸಹೋದರತ್ವ ಸಂಬಂಧವಿದೆ. ಈ ಸಂಬಂಧ ಗಟ್ಟಿಯಾಗಿ ಅದೇ ರೀತಿ ನಡೆದಲ್ಲಿ ಸಮಾಜಕ್ಕೆ ನ್ಯಾಯ ಕೊಡಬಹುದು . ಪೊಲೀಸ್‌ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಒಲಂಪಿಕ್ಸ್‌ವರೆಗೂ ಹೋಗಬೇಕು ಎಂದು ಹಾರೈಸಿದರು.

ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಹರೀಶ್‌ಪಾಂಡೆ ಪ್ರಾಸ್ತಾವಿಸಿ, ಇಂದಿನಿಂದ ಮೂರು ದಿನ ನಡೆಯುವ ಪೊಲೀಸ್‌ ಕ್ರೀಡಾಕೂಟದಲ್ಲಿ ವಿವಿಧ ರೀತಿಯ 35 ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜಚೇಂಗಟಿ ಮತ್ತಿತರೆ ಪೊಲೀಸ್‌ ಅಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ