ಆ್ಯಪ್ನಗರ

ವಿದ್ಯುತ್‌ ಹರಿದು ಕಾಡಾನೆ ಸಾವು

ಭದ್ರಾ ಅಭಯಾರಣ್ಯ ವ್ಯಾಪ್ತಿಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಭಾಗದಲ್ಲಿ ಕಾಡಾನೆ ಸಾವಿನ ಸರಣಿ ಮುಂದುವರಿದಿದ್ದು, ಲಕ್ಕವಳ್ಳಿ ಪ್ರಾದೇಶಿಕ ವಲಯದ ಹರುವನಹಳ್ಳಿ ಬಳಿ ವಿದ್ಯುತ್‌ ತಗುಲಿ ಅಂದಾಜು 30 ವರ್ಷ ಪ್ರಾಯದ ಗಂಡಾನೆ ಮೃತಪಟ್ಟಿದೆ.

Vijaya Karnataka 1 Dec 2018, 5:00 am
ಚಿಕ್ಕಮಗಳೂರು : ಭದ್ರಾ ಅಭಯಾರಣ್ಯ ವ್ಯಾಪ್ತಿಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಭಾಗದಲ್ಲಿ ಕಾಡಾನೆ ಸಾವಿನ ಸರಣಿ ಮುಂದುವರಿದಿದ್ದು, ಲಕ್ಕವಳ್ಳಿ ಪ್ರಾದೇಶಿಕ ವಲಯದ ಹರುವನಹಳ್ಳಿ ಬಳಿ ವಿದ್ಯುತ್‌ ತಗುಲಿ ಅಂದಾಜು 30 ವರ್ಷ ಪ್ರಾಯದ ಗಂಡಾನೆ ಮೃತಪಟ್ಟಿದೆ.
Vijaya Karnataka Web CKM-30ARAGAP4


ಕೃಷಿ ಜಮೀನಿನ ಬೇಲಿಗೆ ಅಕ್ರಮವಾಗಿ ವಿದ್ಯುತ್‌ ಹರಿಸಿದ್ದರಿಂದ ಕಾಡಾನೆಗೆ ತಗುಲಿ ಮೃತಪಟ್ಟಿದೆ. ಮೊನ್ನೆಯಷ್ಟೇ ಇದೇ ವ್ಯಾಪ್ತಿಯ ಮಾವಿನಹಳ್ಳದ ಭದ್ರಾ ಹಿನ್ನೀರಿನಲ್ಲಿ ಗರ್ಭ ಧರಿಸಿದ್ದ ಆನೆಯೊಂದು ಕಾಲುಜಾರಿ ಬಿದ್ದು ಮೃತಪಟ್ಟಿತ್ತು. ಕಳೆದ ತಿಂಗಳು ಇದೇ ಭಾಗದಲ್ಲಿ ವಿದ್ಯುತ್‌ ತಗುಲಿ ಆನೆಯೊಂದು ಮೃತಪಟ್ಟಿತ್ತು. ಭದ್ರಾ ಅಭಯಾರಣ್ಯ ವ್ಯಾಪ್ತಿಯ ಲಕ್ಕವಳ್ಳಿ ಭಾಗದಲ್ಲಿ ಪದೇ ಪದೆ ಕಾಡಾನೆಗಳು ಸಾಯುತ್ತಿದ್ದು, ಈ ಪ್ರದೇಶ ಆನೆಗಳಿಗೆ ಮಾರಕವಾಗಿ ಮಾರ್ಪಟ್ಟಿದೆ.

ಕಾಡು ಪ್ರಾಣಿಗಳ ಹಾವಳಿ ತಪ್ಪಿಸಿ ಬೆಳೆ ರಕ್ಷಣೆ ಮಾಡಿಕೊಳ್ಳಲು ಜಮೀನಿನ ಬೇಲಿಗೆ ಅಕ್ರಮವಾಗಿ ವಿದ್ಯುತ್‌ ಹರಿಸಲಾಗಿತ್ತು. ಈ ಬೇಲಿಯ ಬಳಿ ಬಂದ ಕಾಡಾನೆಗೆ ವಿದ್ಯುತ್‌ ತಗುಲಿ ಮೃತಪಟ್ಟಿದ್ದು, ಮಾಹಿತಿ ತಿಳಿದ ಲಕ್ಕವಳ್ಳಿ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಾಡಾನೆಯ ಮರಣೋತ್ತರ ಪರೀಕ್ಷೆ ಶನಿವಾರ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ