ಶೃಂಗೇರಿ : ಶೃಂಗೇರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಶೃಂಗೇರಿ ತಾಲೂಕು ಶ್ರೀಶಾರದಾ ಪೀಠದಿಂದ ಪ್ರಸಿದ್ಧವಾಗಿದೆ. ದೇಶ ವಿದೇಶಗಳ ಸಹಸ್ರಾರು ಪ್ರವಾಸಿಗರು ಇಲ್ಲಿಗೆ ಪ್ರತಿವರ್ಷ ಬಂದುಹೋಗುತ್ತಾರೆ. ರಾಜಕೀಯ ನೇತಾರರು ಮತ್ತೆಮತ್ತೆ ಬಂದುಹೋಗುತ್ತಾರೆ. ಆದರೆ ತಾಲೂಕು ಮಾತ್ರ ಹಲವಾರು ಸಮಸ್ಯೆಗಳ ಸಂಕೋಲೆಯಿಂದ ಬಿಡಿಸಿಕೊಳ್ಳಲು, ಕೊರತೆಗಳನ್ನು ನೀಗಿಸಿಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ.
ಶೃಂಗೇರಿ ಕ್ಷೇತ್ರದ ಮತದಾರರು ಇತ್ತೀಚಿನ ಚುನಾವಣೆಯಲ್ಲಿ ಹೊಸ ಶಾಸಕರನ್ನು ಚುನಾಯಿಸಿದ್ದು, ನೂತನ ಪ್ರತಿನಿಧಿ ಟಿ.ಡಿ.ರಾಜೇಗೌಡರ ಮೇಲೆ ತಮ್ಮ ಭಾಗದ ಸಮಸ್ಯೆಗಳನ್ನು ನಿಗಿಸಿಕೊಳ್ಳುವ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗೆಯೇ ನೂತನ ಶಾಸಕರು ತಾವು ಚುನಾವಣೆ ಪ್ರಚಾರದ ವೇಳೆ ನಿಡಿದ್ದ ಹಲವಾರು ಭರವಸೆಗಳನ್ನೂ ಈಡೇರಿಸುವ ಸವಾಲು ಹೊಂದಿದ್ದಾರೆ.
ಶೃಂಗೇರಿ ತಾಲೂಕು ಸಣ್ಣದಾದರೂ ಸಮಸ್ಯೆ ನೂರಾರು. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಗುರುತಿಸಿಕೊಂಡಿರುವ ತಾಲೂಕು, ಕುದುರೆಮುಖ ರಾಷ್ಟ್ರೀಯ ಉದ್ಯಾನ, ಕಸ್ತೂರಿ ರಂಗನ್ ಯೋಜನೆ ವರದಿ ಜಾರಿಗೆ ತಾಲೂಕಿನ ಬಹುತೇಕ ಗ್ರಾಮಗಳು ಸೇರ್ಪಡೆಯಾಗಿವೆ. ರಾಷ್ಟ್ರೀಯ ಉದ್ಯಾನವನ ಘೋಷಣೆಯಾದ ನಂತರ ಉದ್ಯಾನದೊಳಗಿನ ಜನರಿಗೆ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಲು ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ.
ಗ್ರಾಮೀಣ ರಸ್ತೆಗಳ ಅಧೋಗತಿ :
ಪ್ರಮುಖ ಯಾತ್ರಾ ಸ್ಥಳವಾದ ಪಟ್ಟಣದ ಮುಖ್ಯ ರಸ್ತೆ ಕಿರಿದಾಗಿದ್ದು, ಅದರ ವಿಸ್ತರಣೆ ಬಹುದಿನಗಳಿಂದ ಕನಸಾಗಿಯೇ ಉಳಿದಿದೆ. ಇದರಿಂದ ಸಂಚಾರಕ್ಕೆ ಮತ್ತು ವ್ಯಾಪಾರ, ವಹಿವಾಟಿಗೆ ತೀವ್ರ ಹಿನ್ನಡೆಯಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 169ರ ಅಭಿವೃದ್ಧಿಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಅಡ್ಡಿಪಡಿಸುತ್ತಿದೆ. ಈ ಕುರಿತಂತೆ ಹಲವು ಹೋರಾಟಗಳು ನಡೆದಿದ್ದರೂ ಹೆದ್ದಾರಿ ಅಭಿವೃದ್ದಿ ಸಾಧ್ಯವಾಗಿಲ್ಲ. ತಾಲೂಕಿನ ಗ್ರಾಮೀಣ ಪ್ರದೇಶದ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ಅನೇಕ ರಸ್ತೆಗಳು ಕೇವಲ ಜಲ್ಲಿ ಹಾಕಿ ಮತ್ತೆ ನಿರ್ವಹಣೆ ಮಾಡದಿರುವುದರಿಂದ, ಸಂಚಾರಕ್ಕೆ ಯೋಗ್ಯವಾಗಿಲ್ಲ. ಗ್ರಾಮೀಣ ಪ್ರದೇಶದ ಡಾಂಬರು ರಸ್ತೆಗಳ ನಿರ್ವಹಣೆಯೂ ಇಲ್ಲದಾಗಿ ಹೊಂಡ, ಗುಂಡಿಗಾಳಗಿವೆ. ಗ್ರಾಮೀಣ ರಸ್ತೆಗಳ ಬೇಡಿಕೆ ಸಾಕಷ್ಟಿದ್ದು, ಇರುವ ಅಲ್ಪ ಅನುದಾನದಲ್ಲಿ ಯಾವ ಯಾವ ರಸ್ತೆ ಅಭಿವೃದ್ಧಿಗೊಳಸುತ್ತಾರೆ ಎಂಬುದು ಪ್ರಶ್ನೆಯಾಗಿದೆ.
ನಿವೇಶನ ಸಮಸ್ಯೆ :
ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 15 ವರ್ಷದಿಂದ ಬಡವರಿಗೆ ನಿವೇಶನ ನೀಡದಿರುವುದು ಈಗ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇದರಿಂದ ತಾಲೂಕಿನಲ್ಲಿ ಅನಧಿಕೃತ ಕಟ್ಟಡಗಳ ಸಂಖ್ಯೆ ಸಾಕಷ್ಟು ಇದ್ದು, ಬಡವರು ನಿವೇಶನಕ್ಕಾಗಿ ಕಾಯುತ್ತಲೇ ಇದ್ದಾರೆ. ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಅಲ್ಲಿಯೇ ಸಂಸಾರ ನಡೆಸುತ್ತಿದ್ದರೂ, ಸರಕಾರದಿಂದ ನಿವೇಶನ ಮಂಜೂರು ಮಾತ್ರ ಆಗಿಲ್ಲ. ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆ ಹಳದಿ ಎಲೆ ರೋಗ ಮತ್ತು ಇತರೆ ಕಾಯಿಲೆಯಿಂದ ರೈತರ ಸ್ಥಿತಿ ಶೋಚನೀಯವಾಗಿದೆ. ರೈತರ ಆರ್ಥಿಕ ಸ್ಥಿತಿ ಸುಧಾರಣೆ ಮಾಡುವ ಯಾವುದೇ ಕ್ರಮವನ್ನು ಸರಕಾರಗಳುಇ ಅನುಷ್ಠಾನಗೊಳಸದೆ ಇರುವುದರಿಂದ ಕೃಷಿಕರ ಸ್ಥಿತಿ ಅತಂತ್ರವಾಗಿಯೇ ಮುಂದುವರಿದಿದೆ.
ಅನುಷ್ಠಾನವಾಗದ ಕೆಎಸ್ಆರ್ಟಿಸಿ ಡಿಪೊ
ಪಟ್ಟಣಕ್ಕೆ ರಾಜ್ಯ ಸಾರಿಗೆ ಸಂಸ್ಥೆಯ ಡಿಪೊ ಮಂಜೂರಾಗಿರುವುದು ಮಲೆನಾಡು ಭಾಗದ ಜನರಿಗೆ ಖುಷಿ ವಿಚಾರವಾಗಿದೆ. ಆದರೆ, ಸ್ಥಳಾವಕಾಶದ ಗೊಂದಲ ಬಗೆಹರಿಯದ ಕಾರಣ ಇಂದಿಗೂ ಡಿಪೊಗೆ ಕಾಯಕಲ್ಪ ನೀಡಲಾಗಿಲ್ಲ. ಕಳೆದ ವರ್ಷ ಸರಕಾರ ಮೆಣಸೆಯಲ್ಲಿ 5 ಎಕರೆ ಜಾಗವನ್ನು ನಿಗದಿಗೊಳಿಸಿತ್ತು. ಸ್ಥಳ ಗುರುತಿಸಿದ್ದರೂ ಮತ್ತೆ ಡಿಪೊ ಸ್ಥಾಪನೆ ವಿಳಂಬವಾಗುತ್ತಿದೆ. ಪ್ರವಾಸಿ ಕೇಂದ್ರವಾಗಿರುವ ಶ್ರೀ ಶಾರದಾ ಪೀಠಕ್ಕೆ ಆಗಮಿಸುವ ಭಕ್ತರಿಗೆ ಮತ್ತು ತಾಲೂಕಿನ ಜನರಿಗೆ ಸಂಚಾರ ಸಮಸ್ಯೆ ಹಾಗೆಯೇ ಮುಂದುವರಿದಿದೆ. ತಾಲೂಕಿನ ಹಲವು ವರ್ಷಗಳ ಬೇಡಿಕೆಯಾದ ಮಿಲ್ಕ್ ರೂಟ್ ನನೆಗುದಿಗೆ ಬಿದ್ದಿದೆ. ಇದರಿಂದ ತಾಲೂಕಿನ ರೈತರಿಗೆ ಉಪ ಉದ್ಯೋಗ ನೀಡುವ ಹೈನುಗಾರಿಕೆಗೆ ಮರುಜೀವ ಬರಲು ಕಷ್ಟಕರವಾಗಿದೆ. ಮಿಲ್ಕ್ ರೂಟ್ ಅಗತ್ಯವಾಗಿದ್ದು, ಈ ಕುರಿತ ಗೊಂದಲ ಶೀಘ್ರ ಬಗೆಹರಿಯಬೇಕಿದೆ.
---
ಸರಕಾರ ನಿವೇಶನ ನೀಡದಿರುವುದರಿಂದ ನಮ್ಮದೇ ಆದ ಮನೆ ಹೊಂದಲು ಸಾಧ್ಯವಾಗಿಲ್ಲ. ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಅದರಲ್ಲಿ ವಾಸವಿರಲು ಸುತ್ತಲೂ ಎತ್ತರವಾಗಿ ಬೆಳೆದಿರುವ ಅಕೇಶಿಯಾ ಮರ ಸರಿಯಾಗಿ ಒಂದು ಗಾಳಿ ಬಂದರೂ ಬೀಳುವ ಸ್ಥಿತಿ ಇದೆ. ನೂತನ ಶಾಸಕರು ನಮಗೆ ನಿವೇಶನ ನೀಡುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸಬೇಕು.
- ಶಶಿಕಲಾ, ರೇಣುಕಾಂಬ ನಗರ, ಶೃಂಗೇರಿ.
ಹತ್ತಾರು ವರ್ಷದಿಂದ ಬಡವರಿಗೆ ನಿವೇಶನ ನೀಡದಿರುವುದರಿಂದಾಗಿ ಈಗ ಈ ಸಮಸ್ಯೆ ದೊಡ್ಡದಾಗಿ ಬೆಳೆದು ನಿಂತಿದೆ. ತಾಲೂಕಿನಲ್ಲಿ ದುಬಾರಿ ದರದಲ್ಲಿ ಹಲವಾರು ನಿವೇಶನಗಳಿವೆಯಾದರೂ ಬಡವರಿಗೆ ಮಾತ್ರ ದೊರಕುತ್ತಿಲ್ಲ. ಕ್ಷೇತ್ರದ ಶಾಸಕರು ಈ ಬಗ್ಗೆ ಚಿಂತನೆ ನಡೆಸಿ, ಸರಕಾರ ಜತೆಗೆ ಚರ್ಚಿಸುವ ಮೂಲಕ ಬಡವರಿಗೆ ನಿವೇಶನ ಒದಗಿಸುವ ಕಾರ್ಯವನ್ನು ಶೀಘ್ರ ಅನುಷ್ಠಾನಗೊಳಿಸಬೇಕು.
- ಆನಂದ ಶೆಟ್ಟಿ, ಮೆಣಸೆ ಗ್ರಾಮ.
ಶೃಂಗೇರಿ ಕ್ಷೇತ್ರದ ಮತದಾರರು ಇತ್ತೀಚಿನ ಚುನಾವಣೆಯಲ್ಲಿ ಹೊಸ ಶಾಸಕರನ್ನು ಚುನಾಯಿಸಿದ್ದು, ನೂತನ ಪ್ರತಿನಿಧಿ ಟಿ.ಡಿ.ರಾಜೇಗೌಡರ ಮೇಲೆ ತಮ್ಮ ಭಾಗದ ಸಮಸ್ಯೆಗಳನ್ನು ನಿಗಿಸಿಕೊಳ್ಳುವ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗೆಯೇ ನೂತನ ಶಾಸಕರು ತಾವು ಚುನಾವಣೆ ಪ್ರಚಾರದ ವೇಳೆ ನಿಡಿದ್ದ ಹಲವಾರು ಭರವಸೆಗಳನ್ನೂ ಈಡೇರಿಸುವ ಸವಾಲು ಹೊಂದಿದ್ದಾರೆ.
ಶೃಂಗೇರಿ ತಾಲೂಕು ಸಣ್ಣದಾದರೂ ಸಮಸ್ಯೆ ನೂರಾರು. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಗುರುತಿಸಿಕೊಂಡಿರುವ ತಾಲೂಕು, ಕುದುರೆಮುಖ ರಾಷ್ಟ್ರೀಯ ಉದ್ಯಾನ, ಕಸ್ತೂರಿ ರಂಗನ್ ಯೋಜನೆ ವರದಿ ಜಾರಿಗೆ ತಾಲೂಕಿನ ಬಹುತೇಕ ಗ್ರಾಮಗಳು ಸೇರ್ಪಡೆಯಾಗಿವೆ. ರಾಷ್ಟ್ರೀಯ ಉದ್ಯಾನವನ ಘೋಷಣೆಯಾದ ನಂತರ ಉದ್ಯಾನದೊಳಗಿನ ಜನರಿಗೆ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಲು ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ.
ಗ್ರಾಮೀಣ ರಸ್ತೆಗಳ ಅಧೋಗತಿ :
ಪ್ರಮುಖ ಯಾತ್ರಾ ಸ್ಥಳವಾದ ಪಟ್ಟಣದ ಮುಖ್ಯ ರಸ್ತೆ ಕಿರಿದಾಗಿದ್ದು, ಅದರ ವಿಸ್ತರಣೆ ಬಹುದಿನಗಳಿಂದ ಕನಸಾಗಿಯೇ ಉಳಿದಿದೆ. ಇದರಿಂದ ಸಂಚಾರಕ್ಕೆ ಮತ್ತು ವ್ಯಾಪಾರ, ವಹಿವಾಟಿಗೆ ತೀವ್ರ ಹಿನ್ನಡೆಯಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 169ರ ಅಭಿವೃದ್ಧಿಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಅಡ್ಡಿಪಡಿಸುತ್ತಿದೆ. ಈ ಕುರಿತಂತೆ ಹಲವು ಹೋರಾಟಗಳು ನಡೆದಿದ್ದರೂ ಹೆದ್ದಾರಿ ಅಭಿವೃದ್ದಿ ಸಾಧ್ಯವಾಗಿಲ್ಲ. ತಾಲೂಕಿನ ಗ್ರಾಮೀಣ ಪ್ರದೇಶದ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ಅನೇಕ ರಸ್ತೆಗಳು ಕೇವಲ ಜಲ್ಲಿ ಹಾಕಿ ಮತ್ತೆ ನಿರ್ವಹಣೆ ಮಾಡದಿರುವುದರಿಂದ, ಸಂಚಾರಕ್ಕೆ ಯೋಗ್ಯವಾಗಿಲ್ಲ. ಗ್ರಾಮೀಣ ಪ್ರದೇಶದ ಡಾಂಬರು ರಸ್ತೆಗಳ ನಿರ್ವಹಣೆಯೂ ಇಲ್ಲದಾಗಿ ಹೊಂಡ, ಗುಂಡಿಗಾಳಗಿವೆ. ಗ್ರಾಮೀಣ ರಸ್ತೆಗಳ ಬೇಡಿಕೆ ಸಾಕಷ್ಟಿದ್ದು, ಇರುವ ಅಲ್ಪ ಅನುದಾನದಲ್ಲಿ ಯಾವ ಯಾವ ರಸ್ತೆ ಅಭಿವೃದ್ಧಿಗೊಳಸುತ್ತಾರೆ ಎಂಬುದು ಪ್ರಶ್ನೆಯಾಗಿದೆ.
ನಿವೇಶನ ಸಮಸ್ಯೆ :
ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 15 ವರ್ಷದಿಂದ ಬಡವರಿಗೆ ನಿವೇಶನ ನೀಡದಿರುವುದು ಈಗ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇದರಿಂದ ತಾಲೂಕಿನಲ್ಲಿ ಅನಧಿಕೃತ ಕಟ್ಟಡಗಳ ಸಂಖ್ಯೆ ಸಾಕಷ್ಟು ಇದ್ದು, ಬಡವರು ನಿವೇಶನಕ್ಕಾಗಿ ಕಾಯುತ್ತಲೇ ಇದ್ದಾರೆ. ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಅಲ್ಲಿಯೇ ಸಂಸಾರ ನಡೆಸುತ್ತಿದ್ದರೂ, ಸರಕಾರದಿಂದ ನಿವೇಶನ ಮಂಜೂರು ಮಾತ್ರ ಆಗಿಲ್ಲ. ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆ ಹಳದಿ ಎಲೆ ರೋಗ ಮತ್ತು ಇತರೆ ಕಾಯಿಲೆಯಿಂದ ರೈತರ ಸ್ಥಿತಿ ಶೋಚನೀಯವಾಗಿದೆ. ರೈತರ ಆರ್ಥಿಕ ಸ್ಥಿತಿ ಸುಧಾರಣೆ ಮಾಡುವ ಯಾವುದೇ ಕ್ರಮವನ್ನು ಸರಕಾರಗಳುಇ ಅನುಷ್ಠಾನಗೊಳಸದೆ ಇರುವುದರಿಂದ ಕೃಷಿಕರ ಸ್ಥಿತಿ ಅತಂತ್ರವಾಗಿಯೇ ಮುಂದುವರಿದಿದೆ.
ಅನುಷ್ಠಾನವಾಗದ ಕೆಎಸ್ಆರ್ಟಿಸಿ ಡಿಪೊ
ಪಟ್ಟಣಕ್ಕೆ ರಾಜ್ಯ ಸಾರಿಗೆ ಸಂಸ್ಥೆಯ ಡಿಪೊ ಮಂಜೂರಾಗಿರುವುದು ಮಲೆನಾಡು ಭಾಗದ ಜನರಿಗೆ ಖುಷಿ ವಿಚಾರವಾಗಿದೆ. ಆದರೆ, ಸ್ಥಳಾವಕಾಶದ ಗೊಂದಲ ಬಗೆಹರಿಯದ ಕಾರಣ ಇಂದಿಗೂ ಡಿಪೊಗೆ ಕಾಯಕಲ್ಪ ನೀಡಲಾಗಿಲ್ಲ. ಕಳೆದ ವರ್ಷ ಸರಕಾರ ಮೆಣಸೆಯಲ್ಲಿ 5 ಎಕರೆ ಜಾಗವನ್ನು ನಿಗದಿಗೊಳಿಸಿತ್ತು. ಸ್ಥಳ ಗುರುತಿಸಿದ್ದರೂ ಮತ್ತೆ ಡಿಪೊ ಸ್ಥಾಪನೆ ವಿಳಂಬವಾಗುತ್ತಿದೆ. ಪ್ರವಾಸಿ ಕೇಂದ್ರವಾಗಿರುವ ಶ್ರೀ ಶಾರದಾ ಪೀಠಕ್ಕೆ ಆಗಮಿಸುವ ಭಕ್ತರಿಗೆ ಮತ್ತು ತಾಲೂಕಿನ ಜನರಿಗೆ ಸಂಚಾರ ಸಮಸ್ಯೆ ಹಾಗೆಯೇ ಮುಂದುವರಿದಿದೆ. ತಾಲೂಕಿನ ಹಲವು ವರ್ಷಗಳ ಬೇಡಿಕೆಯಾದ ಮಿಲ್ಕ್ ರೂಟ್ ನನೆಗುದಿಗೆ ಬಿದ್ದಿದೆ. ಇದರಿಂದ ತಾಲೂಕಿನ ರೈತರಿಗೆ ಉಪ ಉದ್ಯೋಗ ನೀಡುವ ಹೈನುಗಾರಿಕೆಗೆ ಮರುಜೀವ ಬರಲು ಕಷ್ಟಕರವಾಗಿದೆ. ಮಿಲ್ಕ್ ರೂಟ್ ಅಗತ್ಯವಾಗಿದ್ದು, ಈ ಕುರಿತ ಗೊಂದಲ ಶೀಘ್ರ ಬಗೆಹರಿಯಬೇಕಿದೆ.
---
ಸರಕಾರ ನಿವೇಶನ ನೀಡದಿರುವುದರಿಂದ ನಮ್ಮದೇ ಆದ ಮನೆ ಹೊಂದಲು ಸಾಧ್ಯವಾಗಿಲ್ಲ. ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಅದರಲ್ಲಿ ವಾಸವಿರಲು ಸುತ್ತಲೂ ಎತ್ತರವಾಗಿ ಬೆಳೆದಿರುವ ಅಕೇಶಿಯಾ ಮರ ಸರಿಯಾಗಿ ಒಂದು ಗಾಳಿ ಬಂದರೂ ಬೀಳುವ ಸ್ಥಿತಿ ಇದೆ. ನೂತನ ಶಾಸಕರು ನಮಗೆ ನಿವೇಶನ ನೀಡುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸಬೇಕು.
- ಶಶಿಕಲಾ, ರೇಣುಕಾಂಬ ನಗರ, ಶೃಂಗೇರಿ.
ಹತ್ತಾರು ವರ್ಷದಿಂದ ಬಡವರಿಗೆ ನಿವೇಶನ ನೀಡದಿರುವುದರಿಂದಾಗಿ ಈಗ ಈ ಸಮಸ್ಯೆ ದೊಡ್ಡದಾಗಿ ಬೆಳೆದು ನಿಂತಿದೆ. ತಾಲೂಕಿನಲ್ಲಿ ದುಬಾರಿ ದರದಲ್ಲಿ ಹಲವಾರು ನಿವೇಶನಗಳಿವೆಯಾದರೂ ಬಡವರಿಗೆ ಮಾತ್ರ ದೊರಕುತ್ತಿಲ್ಲ. ಕ್ಷೇತ್ರದ ಶಾಸಕರು ಈ ಬಗ್ಗೆ ಚಿಂತನೆ ನಡೆಸಿ, ಸರಕಾರ ಜತೆಗೆ ಚರ್ಚಿಸುವ ಮೂಲಕ ಬಡವರಿಗೆ ನಿವೇಶನ ಒದಗಿಸುವ ಕಾರ್ಯವನ್ನು ಶೀಘ್ರ ಅನುಷ್ಠಾನಗೊಳಿಸಬೇಕು.
- ಆನಂದ ಶೆಟ್ಟಿ, ಮೆಣಸೆ ಗ್ರಾಮ.