ಆ್ಯಪ್ನಗರ

ಮಳೆ ನಿಂತರೂ ನಿಲ್ಲದ ಸಂತ್ರಸ್ತರ ಮೊರೆ

ಜಿಲ್ಲೆಯಲ್ಲಿ ಮಳೆ ನಿಂತರೂ ರಕ್ಷಿಸಿ ಎಂದು ಮೊರೆ ಇಡುವವರ ಧ್ವನಿ ನಿಂತಿಲ್ಲ. ಸೋಮವಾರ ಕೂಡ ಪ್ರಾಣಾಪಾಯಕ್ಕೆ ಸಿಲುಕಿದ್ದ 60ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಕಾಳಜಿ ಕೇಂದ್ರಕ್ಕೆ ಸೇರಿಸಲಾಗಿದೆ.

Vijaya Karnataka 13 Aug 2019, 5:00 am
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮಳೆ ನಿಂತರೂ ರಕ್ಷಿಸಿ ಎಂದು ಮೊರೆ ಇಡುವವರ ಧ್ವನಿ ನಿಂತಿಲ್ಲ. ಸೋಮವಾರ ಕೂಡ ಪ್ರಾಣಾಪಾಯಕ್ಕೆ ಸಿಲುಕಿದ್ದ 60ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಕಾಳಜಿ ಕೇಂದ್ರಕ್ಕೆ ಸೇರಿಸಲಾಗಿದೆ.
Vijaya Karnataka Web CKM-12shivup5


ಪ್ರವಾಹ, ಗುಡ್ಡ ಕುಸಿತದಿಂದ ಪ್ರಾಣಾಪಾಯದಲ್ಲಿದ್ದವರನ್ನು ಪ್ರತಿಕೂಲ ಹವಾಮಾನದ ಕಾರಣ ಹೆಲಿಕಾಪ್ಟರ್‌ ಮೂಲಕ ರಕ್ಷಿಸುವ ಕಾರ‍್ಯಕ್ಕೆ ಹಿನ್ನಡೆಯಾಗಿದೆ. ಯೋಧರು, ಎನ್‌ಡಿಆರ್‌ಎಫ್‌, ಅಗ್ನಿಶಾಮಕ ದಳ, ಸ್ವಯಂ ಸೇವಾ ಸಂಸ್ಥೆಗಳು, ಸ್ಥಳೀಯರೇ ವಿರೋಚಿತ ಸಾಹಸದ ಮೂಲಕ ಸಂಕಷ್ಟದಲ್ಲಿರುವ ಜನರನ್ನು ಹೊತ್ತು ತರುತ್ತಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 2 ಸಾವಿರ ಜನರನ್ನು ರಕ್ಷಿಸಿ 27 ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಭಾರಿ ಮಳೆ, ಗುಡ್ಡಕುಸಿತಕ್ಕೆ 9 ಜನರು ಮೃತಪಟ್ಟಿದ್ದು, 7 ಮೃತದೇಹಗಳು ಪತ್ತೆಯಾಗಿವೆ. ಇನ್ನೂ 2 ಮೃತದೇಹಗಳ ಪತ್ತೆ ಕಾರ‍್ಯ ನಡೆಯುತ್ತಿದೆ.

ಮೂಡಿಗೆರೆ ತಾಲೂಕಿನಲ್ಲಿ ಒಟ್ಟು 7 ಮಂದಿ ಮೃತಪಟ್ಟಿದ್ದು, ಇಬ್ಬರ ದೇಹ ಪತ್ತೆಯಾಗಬೇಕಿದೆ. ಚಿಕ್ಕಮಗಳೂರು ಮತ್ತು ನರಸಿಂಹರಾಜಪುರ ತಾಲೂಕಿನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಮೂಡಿಗೆರೆ ತಾಲೂಕಿನಲ್ಲಿ 1731, ನರಸಿಂಹರಾಜಪುರದಲ್ಲಿ 120 ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ 179 ಜನ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

60 ಜನರ ರಕ್ಷಣೆ

ಮೂಡಿಗೆರೆ ತಾಲೂಕಿನ ಕುಣಿಯಾಲ್‌, ಮಲೆಮನೆಯಲ್ಲಿ ಪ್ರಾಣಾಪಾಯಕ್ಕೆ ಸಿಲುಕಿದ್ದ 50 ಜನರನ್ನು ಸೋಮವಾರ ಯೋಧರು ಮತ್ತು ಸ್ಥಳೀಯರು ರಕ್ಷಿಸಿದ್ದಾರೆ. ಹಲಗಡಕ ಗ್ರಾಮದಲ್ಲಿ ಕಳೆದ 6 ದಿನಗಳಿಂದ ಸಿಕ್ಕಿಹಾಕಿಕೊಂಡಿದ್ದ 10 ಜನರನ್ನು ಯೋಧರು ಹರಸಾಹಸ ಮಾಡಿ ಹೊತ್ತು ತರುವಲ್ಲಿ ಯಶಸ್ವಿಯಾಗಿದ್ದಾರೆ. ಹಲಗಡಕ ಗ್ರಾಮದಲ್ಲಿ ಸಿಲುಕಿದ್ದವರಲ್ಲಿ ಒಬ್ಬರು ಕ್ಯಾನ್ಸರ್‌ ರೋಗಿ ಹಾಗೂ ಬೆನ್ನುಮೂಳೆ ಸಮಸ್ಯೆಯಿಂದ ಬಳಲುತ್ತಿದ್ದವರೂ ಇದ್ದರು. ಕೈಗೆ ಸಿಕ್ಕಿದ ಸಲಕರಣೆಗಳನ್ನೇ ಬಳಸಿ ಸ್ಟ್ರೆಚರ್‌ ತಯಾರಿಸಿಕೊಂಡ ಯೋಧರು ಅನಾರೋಗ್ಯದಿಂದ ನಿತ್ರಾಣಗೊಂಡಿದ್ದ 4 ಮಂದಿಯನ್ನು 5ಕಿ.ಮೀ.ವರೆಗೆ ಹೊತ್ತುತಂದು ಸುರಕ್ಷಿತ ಜಾಗಕ್ಕೆ ತಲುಪಿಸಿದರು. ಸ್ಥಳೀಯರು, ಅಧಿಕಾರಿಗಳು ಈ ಕಾರ‍್ಯಕ್ಕೆ ಕೈಜೋಡಿಸಿದರು.

ರಸ್ತೆಗಳು ಕೊಚ್ಚಿಕೊಂಡು ಹೋಗಿ ಸಂಪರ್ಕವೇ ಕಡಿತಗೊಂಡಿದ್ದರಿಂದ ರಕ್ಷಣಾ ಕಾರಾರ‍ಯಚರಣೆಗೆ ತೀವ್ರ ಅಡ್ಡಿಯಾಗಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ರಕ್ಷಣಾ ಕಾರಾರ‍ಯಚರಣೆ ಚುರುಕುಗೊಂಡಿದೆ. ಕಾಳಜಿ ಕೇಂದ್ರದಲ್ಲಿ ಯಾವುದೇ ಕೊರತೆಗಳು ಎದುರಾಗದಂತೆ ಪ್ರತಿ ಕೇಂದ್ರಕ್ಕೆ 4 ಹಂತದಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಡಳಿತ ಎಚ್ಚರ ವಹಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ