ಆ್ಯಪ್ನಗರ

ಶೃಂಗೇರಿಯಲ್ಲಿ ಎರಡನೇ ದಿನವೂ ಸುರಿದ ರೇವತಿ ಮಳೆ

ತಾಲೂಕಿನಾದ್ಯಾಂತ ರೇವತಿ ಮಳೆ ಎರಡನೇ ದಿನವೂ ಆಗಮಿಸಿದ್ದು,ಗುಡುಗು,ಸಿಡಿಲು ಹಾಗೂ ರಭಸವಾದ ಗಾಳಿ ನಡುವೆ ಸಾಮಾನ್ಯ ಮಳೆಯಾಗಿದೆ.

Vijaya Karnataka 31 Mar 2019, 5:00 am
ಶೃಂಗೇರಿ : ತಾಲೂಕಿನಾದ್ಯಾಂತ ರೇವತಿ ಮಳೆ ಎರಡನೇ ದಿನವೂ ಆಗಮಿಸಿದ್ದು,ಗುಡುಗು,ಸಿಡಿಲು ಹಾಗೂ ರಭಸವಾದ ಗಾಳಿ ನಡುವೆ ಸಾಮಾನ್ಯ ಮಳೆಯಾಗಿದೆ.
Vijaya Karnataka Web CKM-30SRI5


ಶನಿವಾರ ಮಧ್ಯಾಹ್ನ ನಂತರ ಮೋಡ ಕವಿದು,ಒಮ್ಮೆಲೆ ಆರಂಭವಾದ ಮಳೆ ಅಲ್ಪ ಸಮಯ ಮಾತ್ರ ಸುರಿಯಿತು.ಶುಕ್ರವಾರ ಹಾಗೂ ಶನಿವಾರ ಒಟ್ಟು 4 ಮಿಮೀ ಮಳೆ ದಾಖಲಾಗಿದೆ. ಶೃಂಗೇರಿ ತೆಕ್ಕೂರು ರಸ್ತೆಯ ಅಗ್ನಿಶಾಮಕ ಕಚೇರಿ ಸಮೀಪದ ಭಾರಿ ಗಾತ್ರದ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿತ್ತು.ಯಾವುದೇ ಅನಾಹುತ ಸಂಭವಿಸಿಲ್ಲ.ಪಟ್ಟಣದ ಸಂತೆ ಮಾರುಕಟ್ಟೆ ಬಳಿ ಆಟೊ ನಿಲ್ದಾಣಕ್ಕೆ ನೀರು ನುಗ್ಗಿದ್ದು,ಸಂಚಾರ ಅಸ್ತವ್ಯಸ್ತವಾಗಿತ್ತು.ಈ ವರ್ಷ ರಸ್ತೆ ಅಗಲಿಕರಣವಾಗಿದ್ದು,ಆಟೊ ನಿಲ್ದಾಣ ತಗ್ಗಾಗಿದ್ದು,ಮಳೆಯ ನೀರು ಹರಿಯದೇ ಆಟೊ ನಿಲ್ಧಾಣವನ್ನು ಸುತ್ತುವರಿದಿತ್ತು.ತಾಲೂಕಿನ ಗ್ರಾಮೀಣ ಭಾಗದಲ್ಲೂ ಬಹುತೇಕ ಕಡೆ ಸಾಮಾನ್ಯ ಮಳೆಯಾಗಿದೆ.




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ