ಆ್ಯಪ್ನಗರ

ವಿಧಿ ಲಿಖಿತ ಬದಲಾಯಿಸಲು ಸಾಧ್ಯವಿಲ್ಲ

ವಿಧಿ ಲಿಖಿತವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲಎಂದು ಮಂಕುತಿಮ್ಮನ ಕಗ್ಗದಲ್ಲಿಡಿವಿಜಿ ಸಾರಿದ್ದಾರೆ ಎಂದು ಶಿವಮೊಗ್ಗದ ನಿವೃತ್ತ ಉಪನ್ಯಾಸಕ ವಿದ್ವಾನ್‌ ಜಿ.ಎಸ್‌.ನಟೇಶ್‌ ಹೇಳಿದರು.

Vijaya Karnataka 24 Sep 2019, 5:00 am
ಕೊಪ್ಪ: ವಿಧಿ ಲಿಖಿತವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲಎಂದು ಮಂಕುತಿಮ್ಮನ ಕಗ್ಗದಲ್ಲಿಡಿವಿಜಿ ಸಾರಿದ್ದಾರೆ ಎಂದು ಶಿವಮೊಗ್ಗದ ನಿವೃತ್ತ ಉಪನ್ಯಾಸಕ ವಿದ್ವಾನ್‌ ಜಿ.ಎಸ್‌.ನಟೇಶ್‌ ಹೇಳಿದರು.
Vijaya Karnataka Web the rule cannot change the prescription
ವಿಧಿ ಲಿಖಿತ ಬದಲಾಯಿಸಲು ಸಾಧ್ಯವಿಲ್ಲ


ನಚಿಕೇತ ಶಾಲೆಯಲ್ಲಿಪಟ್ಟಣದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ವತಿಯಿಂದ ತಿಂಗಳ ಸಾಹಿತ್ಯ ಸಂಭ್ರಮದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಕಗ್ಗದ ಸಿರಿ ಬೆಳಕಿನಲ್ಲಿಕಾರ್ಯಕ್ರಮದಲ್ಲಿಅವರು ಕಗ್ಗದ ಸಾರದ ಬಗ್ಗೆ ಉಪನ್ಯಾಸ ನೀಡಿದರು.

ನಾವು ಜಗತ್ತಿಗೆ ಬರುವಾಗಲೆ ನಮ್ಮ ಗ್ರಹಗತಿ ನಿರ್ಧಾರವಾಗಿರುತ್ತದೆ. ಅದನ್ನು ಬದಲಿಸಲು ಯಾವುದೆ ಜೋತಿಷಿಗೆ ಸಾಧ್ಯವಿಲ್ಲ. ಅದರಂತೆ ಬದುಕುವ ಸಹನ ಶಕ್ತಿ ನೀಡು ಎಂದು ಮಾತ್ರ ದೇವರಲ್ಲಿಪ್ರಾರ್ಥಿಸಬೇಕು. ಅದನ್ನು ಹೊರತು ಪಡಿಸಿ, ಐಶ್ವರ್ಯ, ಆಯಸ್ಸು, ಬಲ, ತೇಜಸ್ಸು, ಆರೋಗ್ಯ ಕೊಡು ಎಂದು ಬೇಡಿ ಫಲವಿಲ್ಲ. ಎಂದು ಕಗ್ಗ ಸಾರುತ್ತದೆ ಎಂದ ಅವರು ಇಂದಿನ ವೇಗದ ಯುಗದಲ್ಲಿಸಾಹಿತ್ಯದ ಓದು ಮಾಯವಾಗಿ ಮೊಬೈಲ್‌ ಗ್ರಹಿಕೆ ಹೆಚ್ಚಿದ್ದು, ಜನರ ಬುದ್ದಿಗೆ ತುಕ್ಕು ಹಿಡಿದಿದೆ ಎಂದರು.

ಅವರು ಕಗ್ಗದ ಹಲವಾರು ಕವನ ವಾಚಿಸಿದರು. ಡಾ.ಕೋದಂಡ ರಾಮ್‌ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಶಿಕ್ಷಕಿ ಸಂಧ್ಯಾರನ್ನು ಗೌರವಿಸಲಾಯಿತು.

ರೇಣುಕಾ ಪ್ರಾರ್ಥಿಸಿ,ಅರವಿಂದ ಸಿಗದಾಳ್‌ ಸ್ವಾಗತಿಸಿ, ನಾಗಭೂಷಣ ಮತ್ತು ಶೈಲಜಾ ನಿರೂಪಿಸಿ, ರಾಘವೇಂದ್ರ ಭಟ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ