ಆ್ಯಪ್ನಗರ

ಸುಂಡೆಕೆರೆಹಳ್ಳದ ಜಂಡು ತೆಗೆದ ‘ಸೇವಕರು’!

ನಿಸ್ವಾರ್ಥ ಮನಸ್ಥಿತಿ ಇದ್ದಾಗ ಮಾತ್ರ ಸಮಾಜ ಸೇವೆಗೆ ಅರ್ಥ ಬರುತ್ತದೆ.ಅಲ್ಲದೇ ಈಗಿನ ಸಂಘಟನೆ, ವೇದಿಕೆ, ಸಂಘ, ಸಂಸ್ಥೆಗಳು ಬಾವುಟ,ಫ್ಲೆಕ್ಸ್‌ ಹಿಡಿದು ಬೀದಿಗಿಳಿದು ನಾನಾ ಬೇಡಿಕೆ ಈಡೇರಿಕೆಗೆ ಹೋರಾಟ ಮಾಡೋದು ಸಹಜ.ಆದರೆ,ಮೂಡಿಗೆರೆಯ ಸಮಾಜ ಸೇವಾಕರ್ತ ತಂಡವೊಂದು ಸ್ವತ: ಕೆರೆಗಿಳಿದು ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಕಾಯಕಕ್ಕೆ ಕೈ ಹಾಕುವ ಮೂಲಕ ಮಾದರಿಯಾಗಿದೆ.

Vijaya Karnataka 4 Feb 2019, 5:00 am
ಮೂಡಿಗೆರೆ : ನಿಸ್ವಾರ್ಥ ಮನಸ್ಥಿತಿ ಇದ್ದಾಗ ಮಾತ್ರ ಸಮಾಜ ಸೇವೆಗೆ ಅರ್ಥ ಬರುತ್ತದೆ.ಅಲ್ಲದೇ ಈಗಿನ ಸಂಘಟನೆ, ವೇದಿಕೆ, ಸಂಘ, ಸಂಸ್ಥೆಗಳು ಬಾವುಟ,ಫ್ಲೆಕ್ಸ್‌ ಹಿಡಿದು ಬೀದಿಗಿಳಿದು ನಾನಾ ಬೇಡಿಕೆ ಈಡೇರಿಕೆಗೆ ಹೋರಾಟ ಮಾಡೋದು ಸಹಜ.ಆದರೆ,ಮೂಡಿಗೆರೆಯ ಸಮಾಜ ಸೇವಾಕರ್ತ ತಂಡವೊಂದು ಸ್ವತ: ಕೆರೆಗಿಳಿದು ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಕಾಯಕಕ್ಕೆ ಕೈ ಹಾಕುವ ಮೂಲಕ ಮಾದರಿಯಾಗಿದೆ.
Vijaya Karnataka Web CKM-3mdg-p2


ಹೌದು, ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದ ಕೆಲವು ಬಡಾವಣೆಗಳಿಗೆ ಕುಡಿಯುವ ನೀರು ಒದಗಿಸುವ ಬೀಜವಳ್ಳಿ ಸುಂಡೆಕೆರೆ ಹಳ್ಳ ಸಂಪೂರ್ಣ ಕಲುಷಿತಗೊಂಡಿತ್ತು. ಈ ತ್ಯಾಜ್ಯವನ್ನು ತೆರವುಗೊಳಿಸುವಂತೆ ಸಮಾಜ ಸೇವಾಕರ್ತರ ತಂಡ ಹಲವು ಬಾರಿಗೆ ಸಂಬಧಿಸಿದ ಆಡಳಿತಕ್ಕೆ ಮನವಿ ಸಲ್ಲಿಸಿತ್ತು. ಈಗ ಪಟ್ಟಣದ ಯುವ ತಂಡ ಸುಂಡೆಕೆರೆ ಹಳ್ಳ ಉಳಿಸಿ ಅಭಿಯಾನದ ಮೂಲಕ ಭಾನುವಾರ ಹಳ್ಳವನ್ನು ಪಟ್ಟಣ ಪಂಚಾಯಿತಿಯ ಜೇಸಿಬಿ ಬಳಸಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದೆ.

ಪಟ್ಟಣದ ಬಹುತೇಕ ವಾಹನಗಳನ್ನು ಇದೇ ಹಳ್ಳದಲ್ಲಿ ತೊಳೆಯುತ್ತಿದ್ದು, ಗೌರಿ ಗಣೇಶ ಹಬ್ಬದ ವೇಳೆ ಹತ್ತಾರು ಗಣಪತಿ ವಿಗ್ರಹವನ್ನು ಹಳ್ಳದಲ್ಲಿ ವಿಸರ್ಜಿಸಲಾಗಿದೆ. ಮೇಲಿನಿಂದ ಹರಿದು ಬರುವ ನೀರನ್ನು ಚೆಕ್‌ ಡ್ಯಾಮ್‌ ಮೂಲಕ ತಡೆ ಕಟ್ಟಿರುವುದರಿಂದ ನೀರು ಹರಿಯದೇ ನಿಂತಿದೆ.ಈ ಎಲ್ಲಾ ಕಾರಣದಿಂದ ಹಳ್ಳದ ನೀರು ಸಂಪೂರ್ಣ ಕಲುಷಿತಗೊಂಡು ನೀರು ಕುಡಿಯಲು ಯೋಗ್ಯವಿಲ್ಲದಂತಾಗಿತ್ತು. ಹಾಗಾಗಿ ಸಮಾಜ ಸೇವಕರು ಹಳ್ಳದ ಬದಿಯ ಪೊದೆಗಳನ್ನು ಕತ್ತರಿಸಿ ಕಸವನ್ನೆಲ್ಲಾ ಸ್ವಚ್ಛಗೊಳಿಸುತ್ತಿದೆ.

ಈ ಸಂದರ್ಭ ಸಮಾಜ ಸೇವಕರಾದ ಫಿಶ್‌ ಮೋಣು, ಅಬ್ದುಲ್‌ ರೆಹಮಾನ್‌, ನಟೇಶ್‌, ಕುಮಾರ್‌, ಅಸ್ಲಂ, ಚಂದ್ರು, ಸಂತೋಷ್‌ ಪಿಂಟೋ, ಐವಿಆರ್‌ ಪಿಂಟೊ, ರಫೀಕ್‌, ಪಾಝಿಲ್‌, ಸಂತೋಷ್‌, ನಿಶ್ಚಲ್‌, ಲಕ್ಷ ್ಮಣ್‌, ದಿನೇಶ್‌, ಲಕ್ಷ ್ಮಣ್‌ಗೌಡ, ದಿನೇಶ್‌ ಭಟ್‌, ಮೋಹನ್‌, ಪಾಪಕ್ಕ, ಸುರೇಂದ್ರ, ಲಾಜರ್‌ ಬಾಬು, ವಿಶುಕುಮಾರ್‌ ಮತ್ತಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ