ಚಿಕ್ಕಮಗಳೂರು : ನಿರ್ಲಿಪ್ತ ಮತ್ತು ವಾಸ್ತವ ವೀಕ್ಷ ಣೆ ಮತ್ತು ವಿಸ್ಮಯದ ಬಗ್ಗೆ ಹುಟ್ಟುವ ಪ್ರಶ್ನೆಯೇ ವೈಜ್ಞಾನಿಕ ಸಂಶೋಧನೆಯ ಮೂಲ ಎಂದು ಐಡಿಎಸ್ಜಿ ಕಾಲೇಜಿನ ಪ್ರಾದ್ಯಾಪಕ, ಸಂಶೋಧಕ ಹನುಮಂತಪ್ಪ ಮಕ್ರಿ ಹೇಳಿದರು.
ನಗರ ಹೊರವಲಯದ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ 'ವೈಜ್ಞಾನಿಕ ಚಿಂತನೆ' ವಿಷಯದ ಮೇಲೆ ಉಪನ್ಯಾಸ ನೀಡಿದರು.
ನಮ್ಮ ಸುತ್ತಮುತ್ತಲಿರುವ ಪರಿಸರದ ಬಗ್ಗೆ ಹುಟ್ಟುವ ಕುತೂಹಲ ಮತ್ತು ಪ್ರಶ್ನೆಯಿಂದಲೇ ನೀವು ವಿಜ್ಞಾನಿಗಳಾಗಬಹುದು. ಅಬ್ದುಲ್ ಕಲಾಂ, ರಾಮಾನುಜಮ್, ಸಿ.ಎನ್.ಆರ್.ರಾವ್ ಅವರಂತಹ ಖ್ಯಾತ ವಿಜ್ಞಾನಿಗಳು ಇಂತಹ ಮನೋಧರ್ಮದಿಂದಲೇ ವಿಜ್ಞಾನಿಗಳಾದವರು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಮಲೆನಾಡಿನ ಭಾಗದಲ್ಲಿ ಕಾಫಿ, ಆಲೂಗೆಡ್ಡೆ, ಶುಂಠಿಗಳಿಗೆ ಬಳಸುವ ಮಾರಕ ಕಳೆ-ಕೀಟನಾಶಕ ರಾಸಾಯನಿಕದಿಂದ ಈ ಭಾಗದಲ್ಲಿ ಕ್ಯಾನ್ಸರ್ ಕಾಯಿಲೆ ಯಥೇಚ್ಛವಾಗಿದೆ ಎಂದರು. ವಿಜ್ಞಾನ ಬೆಳೆಯಲು ಅತ್ಯಾಧುನಿಕ ಪ್ರಯೋಗಾಲಯಗಳು ಬೇಕು. ಆದರೆ, ಇದರ ಕೊರತೆ ದೇಶದಲ್ಲಿ ಎದ್ದು ಕಾಣುತ್ತದೆ. ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದು ದೇಶಕ್ಕೆ ಒಳ್ಳೆಯದಲ್ಲ. ಮನುಷ್ಯನಿಗೆ ವಿಶ್ವದ ವಿಸ್ಮಯ ತಿಳಿಯುವುದಿರಲಿ, ಒಂದು ಏಕಕೋಶ ಜೀವಿ, ಬ್ಯಾಕ್ಟೀರಿಯಾ ಮತ್ತು ವೈರಸ್ಗಳ ಮರ್ಮವೇ ತಿಳಿದಿಲ್ಲ. ವಿದ್ಯಾರ್ಥಿಗಳು ಮೈಕ್ರೋಬಯಾಲಜಿ ಮತ್ತು ಜೆನೆಟಿಕ್ಸ್ನಂತಹ ವಿಷಯಗಳು ಮಂಚೂಣಿಯಲ್ಲಿರುವ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿ ಕೊಳ್ಳಬೇಕು. ಸಂಶೋಧನೆ ಮತ್ತು ಪ್ರಯೋಗದಲ್ಲಿ ವಿಜ್ಞಾನವನ್ನು ಕರಗತ ಮಾಡಬಹುದೇ ವಿನಃ ಬರೀ ಪಠ್ಯ ಓದುವುದರಿಂದ ಅಸಾಧ್ಯ ಎಂದರು.
ಕುವೆಂಪು ವಿದ್ಯಾನಿಕೇತನ ಶಾಲೆಯ ಕಾರ್ಯದರ್ಶಿ ಕೆ.ಸಿ.ಶಂಕರ್, ಪ್ರಾಂಶುಪಾಲ ವಿ.ಎಸ್.ರಾಘವೇಂದ್ರ, ಉಪಪ್ರಾಂಶುಪಾಲ ಜ್ಯೋತಿಷ್ ಹಾಜರಿದ್ದರು. ವಿದ್ಯಾರ್ಥಿನಿ ಖುಷಿ ನಿರೂಪಿಸಿ, ಸಾನ್ವಿ ವಂದಿಸಿದರು.
ನಗರ ಹೊರವಲಯದ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ 'ವೈಜ್ಞಾನಿಕ ಚಿಂತನೆ' ವಿಷಯದ ಮೇಲೆ ಉಪನ್ಯಾಸ ನೀಡಿದರು.
ನಮ್ಮ ಸುತ್ತಮುತ್ತಲಿರುವ ಪರಿಸರದ ಬಗ್ಗೆ ಹುಟ್ಟುವ ಕುತೂಹಲ ಮತ್ತು ಪ್ರಶ್ನೆಯಿಂದಲೇ ನೀವು ವಿಜ್ಞಾನಿಗಳಾಗಬಹುದು. ಅಬ್ದುಲ್ ಕಲಾಂ, ರಾಮಾನುಜಮ್, ಸಿ.ಎನ್.ಆರ್.ರಾವ್ ಅವರಂತಹ ಖ್ಯಾತ ವಿಜ್ಞಾನಿಗಳು ಇಂತಹ ಮನೋಧರ್ಮದಿಂದಲೇ ವಿಜ್ಞಾನಿಗಳಾದವರು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಮಲೆನಾಡಿನ ಭಾಗದಲ್ಲಿ ಕಾಫಿ, ಆಲೂಗೆಡ್ಡೆ, ಶುಂಠಿಗಳಿಗೆ ಬಳಸುವ ಮಾರಕ ಕಳೆ-ಕೀಟನಾಶಕ ರಾಸಾಯನಿಕದಿಂದ ಈ ಭಾಗದಲ್ಲಿ ಕ್ಯಾನ್ಸರ್ ಕಾಯಿಲೆ ಯಥೇಚ್ಛವಾಗಿದೆ ಎಂದರು. ವಿಜ್ಞಾನ ಬೆಳೆಯಲು ಅತ್ಯಾಧುನಿಕ ಪ್ರಯೋಗಾಲಯಗಳು ಬೇಕು. ಆದರೆ, ಇದರ ಕೊರತೆ ದೇಶದಲ್ಲಿ ಎದ್ದು ಕಾಣುತ್ತದೆ. ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದು ದೇಶಕ್ಕೆ ಒಳ್ಳೆಯದಲ್ಲ. ಮನುಷ್ಯನಿಗೆ ವಿಶ್ವದ ವಿಸ್ಮಯ ತಿಳಿಯುವುದಿರಲಿ, ಒಂದು ಏಕಕೋಶ ಜೀವಿ, ಬ್ಯಾಕ್ಟೀರಿಯಾ ಮತ್ತು ವೈರಸ್ಗಳ ಮರ್ಮವೇ ತಿಳಿದಿಲ್ಲ. ವಿದ್ಯಾರ್ಥಿಗಳು ಮೈಕ್ರೋಬಯಾಲಜಿ ಮತ್ತು ಜೆನೆಟಿಕ್ಸ್ನಂತಹ ವಿಷಯಗಳು ಮಂಚೂಣಿಯಲ್ಲಿರುವ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿ ಕೊಳ್ಳಬೇಕು. ಸಂಶೋಧನೆ ಮತ್ತು ಪ್ರಯೋಗದಲ್ಲಿ ವಿಜ್ಞಾನವನ್ನು ಕರಗತ ಮಾಡಬಹುದೇ ವಿನಃ ಬರೀ ಪಠ್ಯ ಓದುವುದರಿಂದ ಅಸಾಧ್ಯ ಎಂದರು.
ಕುವೆಂಪು ವಿದ್ಯಾನಿಕೇತನ ಶಾಲೆಯ ಕಾರ್ಯದರ್ಶಿ ಕೆ.ಸಿ.ಶಂಕರ್, ಪ್ರಾಂಶುಪಾಲ ವಿ.ಎಸ್.ರಾಘವೇಂದ್ರ, ಉಪಪ್ರಾಂಶುಪಾಲ ಜ್ಯೋತಿಷ್ ಹಾಜರಿದ್ದರು. ವಿದ್ಯಾರ್ಥಿನಿ ಖುಷಿ ನಿರೂಪಿಸಿ, ಸಾನ್ವಿ ವಂದಿಸಿದರು.