ಆ್ಯಪ್ನಗರ

ವಿದ್ಯಾರ್ಥಿಗೆ ದಂಡ ಹಾಕಿದ್ದ ತನಿಖಾ ಸಿಬ್ಬಂದಿ ಅಮಾನತು

ಪಟ್ಟಣದ ಬಸ್‌ ನಿಲ್ದಾಣದ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಸಾಗುತ್ತಿದ್ದ ವಿದ್ಯಾರ್ಥಿಗೆ ಸಮಯದ ಔಚಿತ್ಯ ಗಮನಿಸದೇ ದಂಡ ವಿಧಿಸಿದ್ದ ಕೆಎಸ್‌ಆರ್‌ಟಿಸಿ ತನಿಖಾ ಸಿಬ್ಬಂದಿಯ ಅಮಾನತಿಗೆ ಆದೇಶ ಹೊರಡಿಸಲಾಗಿದೆ.

Vijaya Karnataka Web 28 Mar 2018, 5:00 am
ಕೊಟ್ಟಿಗೆಹಾರ: ಪಟ್ಟಣದ ಬಸ್‌ ನಿಲ್ದಾಣದ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಸಾಗುತ್ತಿದ್ದ ವಿದ್ಯಾರ್ಥಿಗೆ ಸಮಯದ ಔಚಿತ್ಯ ಗಮನಿಸದೇ ದಂಡ ವಿಧಿಸಿದ್ದ ಕೆಎಸ್‌ಆರ್‌ಟಿಸಿ ತನಿಖಾ ಸಿಬ್ಬಂದಿಯ ಅಮಾನತಿಗೆ ಆದೇಶ ಹೊರಡಿಸಲಾಗಿದೆ.
Vijaya Karnataka Web the suspect has been suspended by the investigating staff
ವಿದ್ಯಾರ್ಥಿಗೆ ದಂಡ ಹಾಕಿದ್ದ ತನಿಖಾ ಸಿಬ್ಬಂದಿ ಅಮಾನತು


ಬಸ್‌ ಪ್ರಯಾಣದ ವೇಳೆ ತನಗಾದ ಅನ್ಯಾಯ ಮತ್ತು ಸತಾಯಿಸಿದ್ದರ ಕುರಿತು ವಿದ್ಯಾರ್ಥಿ ಪ್ರಜ್ವಲ್‌, ಕೆಎಸ್‌ಆರ್‌ಟಿಸಿ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗೆ ದೂರು ನೀಡಿದ್ದನು. ಅದನ್ನು ಪರಿಶೀಲಿಸಿದ ನಿಯಂತ್ರಣಾಧಿಕಾರಿಯು, ತನಿಖಾ ಸಿಬ್ಬಂದಿ ಸತೀಶ್‌ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ವಿವರ: ಕೊಟ್ಟಿಗೆಹಾರ ಸರಕಾರಿ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್‌, ಕಳೆದ ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಬಾಳೂರಿನಲ್ಲಿ, ಕೆಎಸ್‌ಆರ್‌ಟಿಸಿ ಬಸ್‌ ಏರಿದ್ದು, ಕಂಡಕ್ಟರ್‌ಗೆ ಪರೀಕ್ಷಾ ಪ್ರವೇಶ ಪತ್ರ ತೋರಿಸಿ, ಸರಕಾರದ ಆದೇಶದಂತೆ ಉಚಿತ ಪ್ರಯಾಣಕ್ಕೆ ಅವಕಾಶ ಕೋರಿದ್ದನು. ಹಾಗಾಗಿ ಕಂಡಕ್ಟರ್‌ ಟಿಕೆಟ್‌ ತೆಗೆದುಕೊಳ್ಳದೆ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಬಸ್‌ ಕೊಟ್ಟಿಗೆಹಾರ ನಿಲ್ದಾಣಕ್ಕೆ ಬಂದಾಗ ತನಿಖಾ ಸಿಬ್ಬಂದಿ ಸತೀಶ್‌, ವಿದ್ಯಾರ್ಥಿ ಪ್ರಜ್ವಲ್‌ ಬಳಿ ಪರೀಕ್ಷಾ ಪ್ರವೇಶ ಪತ್ರ ಇದ್ದರೂ ಶಾಲೆ ಗುರುತಿನ ಚೀಟಿ ಇಲ್ಲ ಎಂಬ ಕಾರಣ ನೀಡಿ 150 ರೂ. ದಂಡ ಕಟ್ಟುವಂತೆ ತಿಳಿಸಿದ್ದರು. ಆದರೆ, ಆಗ ವಿದ್ಯಾರ್ಥಿ ಬಳಿ 100 ರೂ. ಮಾತ್ರ ಇದ್ದುದರಿಂದ ಅಷ್ಟನ್ನೇ ಕೊಟ್ಟಿದ್ದು, ಆ ಮೊತ್ತ ಪಡೆದ ತನಿಖಾ ಸಿಬ್ಬಂದಿ ಪ್ರತಿಯಾಗಿ ರಶೀದಿ ನೀಡದೇ ಹೋಗಿದ್ದರು. ಅಲ್ಲದೆ, ಟಿಕೆಟ್‌ ನೀಡದ ಕಂಡಕ್ಟರ್‌ ರಮೇಶ್‌ ಕುಮಾರ್‌ಗೆ ಅಪರಾಧ ಜ್ಞಾಪನಾ ಪತ್ರ ಕೂಡ ನೀಡಿದ್ದರು.
..............................
ಉಚಿತ ಪ್ರಯಾಣಕ್ಕೆ ಅವಕಾಶವಿದ್ದರೂ ಅಮಾಯಕ ವಿದ್ಯಾರ್ಥಿಗೆ ದಂಡ ವಿಧಿಸಿದ್ದ ಕೆಎಸ್‌ಆರ್‌ಟಿಸಿ ತನಿಖಾ ಸಿಬ್ಬಂದಿಯನ್ನು ಅಮಾನತುಗೊಳಿಸಿರುವುದು, ಸರಿಯಾದ ಪಾಠವಾಗಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಈ ರೀತಿಯ ಕ್ರಮಗಳು ಪರಿಣಾಮಕಾರಿಯಾಗಿವೆ. ವಿದ್ಯಾರ್ಥಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೆ ಅದಕ್ಕೆ ನೇರ ಹೊಣೆ ತನಿಖಾ ಸಿಬ್ಬಂದಿಯೆ ಆಗಿರುತ್ತಾರೆ.
-ಸಂಜಯ್‌ಗೌಡ, ಕೊಟ್ಟಿಗೆಹಾರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ