ಆ್ಯಪ್ನಗರ

ಕಲೆ ಮೇಲೆ ದಾಳಿಯಿಟ್ಟಿದೆ ಟಿವಿ ಲೋಕ

ಟಿವಿ ಲೋಕವು ಬಂಡವಾಳಶಾಹಿ ಕೈಯಲ್ಲಿದ್ದು, ಸರಕಾರಿ ವಲಯದ ಮೇಲೆ ದಾಳಿ ಮಾಡುತ್ತಿದೆ. ಆದರೆ ಖಾಸಗಿ ವಲಯದ ಮೇಲೆ ಏನೂ ಮಾಡುತ್ತಿಲ್ಲ ಎಂದು ಬೆಂಗಳೂರಿನ ಸಾಹಿತಿ ನಟರಾಜ್‌ ಹುಳಿಯಾರ್‌ ಹೇಳಿದರು.

Vijaya Karnataka 14 Jan 2019, 5:00 am
ಕೊಪ್ಪ : ಟಿವಿ ಲೋಕವು ಬಂಡವಾಳಶಾಹಿ ಕೈಯಲ್ಲಿದ್ದು, ಸರಕಾರಿ ವಲಯದ ಮೇಲೆ ದಾಳಿ ಮಾಡುತ್ತಿದೆ. ಆದರೆ ಖಾಸಗಿ ವಲಯದ ಮೇಲೆ ಏನೂ ಮಾಡುತ್ತಿಲ್ಲ ಎಂದು ಬೆಂಗಳೂರಿನ ಸಾಹಿತಿ ನಟರಾಜ್‌ ಹುಳಿಯಾರ್‌ ಹೇಳಿದರು.
Vijaya Karnataka Web CKM-13kph8


ಕಮ್ಮರಡಿಯಲ್ಲಿ ಭಾನುವಾರ ತಾಲೂಕು ಕಸಾಪ ಆಯೋಜಿಸಿದ್ದ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಭಾಷಣ ಮಾಡಿದರು. ಖಾಸಗಿ ಮತ್ತು ಸರಕಾರದ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಅವರ ವಿಮರ್ಷೆ ಪಾಶ್ರ್ವ ಅಥವಾ ಮೊಂಡಾಗಿರುತ್ತವೆ. ಆದ್ದರಿಂದ ಮಾಧ್ಯಮದ ವಿಮರ್ಷೆಗೆ ಮರುಳಾಗಬಾರದು ಎಂದರು.

ಮಾಜಿ ಸಚಿವ ಡಿ.ಎನ್‌.ಜೀವರಾಜ್‌ ಮಾತನಾಡಿ, ಏಕರೂಪ ಶಿಕ್ಷ ಣ ನೀತಿಯಿಂದ ಮಾತ್ರ ಸರಕಾರಿ ಶಾಲೆ ಉಳಿವು ಸಾಧ್ಯ. ಸಾಹಿತ್ಯ ಸಮ್ಮೇಳನದಲ್ಲಿ ಇತರರ ಗಮನ ಸೆಳೆಯಲು ಗೊಂದಲದ ಮಾತನ್ನಾಡಿದ್ದನ್ನು ಖಂಡಿಸುತ್ತೇನೆ. ಮುಖ್ಯ ಮಂತ್ರಿ ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ಪ್ರಯೋಗ ಮಾಡಲು ಹೊರಟಿದ್ದು, ಅವರನ್ನು ಅಭಿನಂದಿಸುತ್ತೇನೆ. ಸಮ್ಮೇಳನದ ನಿರ್ಣಯವು ಜಾರಿಯಾಗಲು ಅದು ಮೇಲಕ್ಕೆ ತಲುಪಬೇಕು ಎಂದರು.

ಶಾಸಕ ಟಿ.ಡಿ.ರಾಜೇಗೌಡ ಸಮ್ಮೇಳನಾಧ್ಯಕ್ಷ ರನ್ನು ಗೌರವಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಎಸ್‌.ಎನ್‌.ರಾಮಸ್ವಮಿ, ಹಣಕಾಸು ಸಮಿತಿ ಅಧ್ಯಕ್ಷ ಎಚ್‌.ಕೆ.ಪ್ರಶಾಂತ್‌, ಆಹಾರ ಸಮಿತಿ ಅಧ್ಯಕ್ಷ ಕೆ.ಕೆ.ಸಾಯಿನಾಥ್‌,ಮತ್ತಿತರ ಜನಪ್ರತಿನಿಧಿ ಹಾಜರಿದ್ದರು. ವೈಷ್ಣವಿ ಅಡಿಗ ಪ್ರಾರ್ಥಿಸಿ, ಜಿನೇಶ್‌ ಸ್ವಾಗತಿಸಿ, ರಮೇಶ್‌ ನಿರೂಪಿಸಿ, ತಾಲೂಕು ಕಸಾಪ ಅಧ್ಯಕ್ಷ ಎಚ್‌.ಎಸ್‌.ಇನೇಶ್‌ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ