ಆ್ಯಪ್ನಗರ

ತರುಣರಲ್ಲಿಕೆಲಸ ಮಾಡುವ ಇಚ್ಛಾಶಕ್ತಿ ದೂರ

ತರುಣರಲ್ಲಿಕೆಲಸ ಮಾಡಬೇಕು ಎಂಬ ಇಚ್ಛಾಶಕ್ತಿ ದೂರ ಆಗುತ್ತಿರುವುದು ದುರ್ದೈವ ಎಂದು ಯುವ ಬ್ರಿಗೇಡ್‌ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ವಿಷಾಧಿಸಿದರು.

Vijaya Karnataka 3 Feb 2020, 5:00 am
ಚಿಕ್ಕಮಗಳೂರು: ತರುಣರಲ್ಲಿಕೆಲಸ ಮಾಡಬೇಕು ಎಂಬ ಇಚ್ಛಾಶಕ್ತಿ ದೂರ ಆಗುತ್ತಿರುವುದು ದುರ್ದೈವ ಎಂದು ಯುವ ಬ್ರಿಗೇಡ್‌ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ವಿಷಾಧಿಸಿದರು.
Vijaya Karnataka Web 2RUDRAP4_35


ಯುವ ಬ್ರಿಗೇಡ್‌ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದಿಂದ ಕರ್ಕಿಪೇಟೆಯಲ್ಲಿಭಾನುವಾರ ಏರ್ಪಡಿಸಿದ್ದ ಕಲ್ಯಾಣಿ ದೀಪೋತ್ಸವ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಯಾವುದಾದರೂ ಸಂಕಲ್ಪ ಮಾಡಿದರೆ ಅದನ್ನು ಮಾಡೇ ಮಾಡುತ್ತೇನೆ ಎಂಬ ಇಚ್ಛಾಶಕ್ತಿ ತರುಣರಲ್ಲಿಇರಬೇಕು. ಆದರೆ, ಕೆಲಸ ಮಾಡದ ವಾತಾವರಣಕ್ಕೆ ತರುಣರು ಜಾರಿದ್ದಾರೆ. ಇಂದು ಡಿಗ್ರಿ ಕೈಗೆ ಬಂತೆಂದರೆ ಭಾರತವನ್ನು ಬೈಯ್ಯಲು ಬಗೆಬಗೆಯ ಪದಪುಂಜಗಳು ಅವರ ಬಾಯಲ್ಲಿಸಿಗುತ್ತವೆ. ಡಿಗ್ರಿ ಇದೆ ಎಂದ ಮಾತ್ರಕ್ಕೆ ಸರಕಾರವೇ ಅವರ ಮನೆ ಬಾಗಿಲಿಗೆ ಬಂದು ಕೆಲಸ ನೀಡಬೇಕು. ಇಂತಹ ಮನಸ್ಥಿತಿಗೆ ಬಂದು ತಲುಪಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮೂರು ಬಗೆಯ ಯುವಕರನ್ನು ನಾವು ನೋಡಬಹುದು. ಮೊದಲನೆ ವರ್ಗ ಬಹಳ ಶಾಂತರೀತಿಯಿಂದ ಇರುತ್ತದೆ. ಅದು ಬಹುಮತ ಯಾವ ಕಡೆ ಇರುತ್ತೋ ಆ ಕಡೆ ವಾಲುತ್ತದೆ. ಇನ್ನೊಂದು ವರ್ಗ ತುಕಡೆ ತುಕಡೆ ಗ್ಯಾಂಗ್‌ ಅದು ದೇಶ ವಿರೋಧಿ ಚಟುವಟಿಕೆಯಲ್ಲಿರುತ್ತದೆ. ಮೂರನೆಯದು ಭಾರತಕ್ಕೆ ಒಳ್ಳೆಯದಾದರೆ ಸಾಕು ಎಂದು ಅವರ ಪಾಡಿಗೆ ಅವರು ಕೆಲಸ ಮಾಡುತ್ತಿರುತ್ತಾರೆ. ಆ ಮೂರನೇ ಗುಂಪಿನಲ್ಲೇ ನಮ್ಮ ಯುವ ಬ್ರಿಗೇಡ್‌ ಯುವಕರು ಬರುತ್ತಾರೆ. ಒಳ್ಳೆಯ ಕೆಲಸ ಮಾಡುವವರ ಸಂಖ್ಯೆ ಜಾಸ್ತಿ ಆಗಲಿ ಎಂಬ ಕಾರಣಕ್ಕೆ ಯುವ ಬ್ರಿಗೇಡ್‌ ಸ್ಥಾಪನೆ ಮಾಡಿದ್ದಾಗಿ ಹೇಳಿದರು.

ಯುವ ಬ್ರಿಗೇಡ್‌ ರಾಜ್ಯ ಸಂಚಾಲಕ ಚಂದ್ರಶೇಖರ ನಂಜನಗೂಡು ಪ್ರಾಸ್ತಾವಿಸಿ ಯುವ ಬ್ರಿಗೇಡ್‌ 4 ತಂಡಗಳಾಗಿ ಕೆಲಸ ಮಾಡುತ್ತಿದೆ. 5ನೇ ತಂಡವಾಗಿ ನನ್ನ ಕನಸಿನ ಕರ್ನಾಟಕ ಸ್ಥಾಪನೆ ಆಗುತ್ತಿದೆ ಎಂದರು.

ಕರ್ಕಿಪೇಟೆಯ ನಿವೃತ್ತ ಸೈನಿಕ ಕೆ.ಸಿ.ಬಸವರಾಜ್‌ ಮಾತನಾಡಿದರು. ಗ್ರಾಮಸ್ಥರಾದ ಓಂಕಾರಪ್ಪ, ಶಿವಶಂಕರಪ್ಪ ಹಾಜರಿದ್ದರು. ಐನಳ್ಳಿ ಮತ್ತು ಕರ್ಕಿಪೇಟೆ ಕಲ್ಯಾಣಿಗಳಲ್ಲಿಚಕ್ರವರ್ತಿ ಸೂಲಿಬೆಲೆ ಅವರು ಪೂಜೆ ಸಲ್ಲಿಸಿದರು. ಗ್ರಾಮಸ್ಥರು ನೂರಾರು ಹಣತೆ ಹಚ್ಚಿದರು. ಊರಲ್ಲಿಹಬ್ಬದ ವಾತಾವರಣ ನಿರ್ಮಾಣ ಆಗಿತ್ತು.
...............
ಇತ್ತೀಚಿನ ರಾಜಕಾರಣಿಗಳಿಗೆ ಕೆರೆ ಕಟ್ಟೆ ಮುಚ್ಚಿ ಗೊತ್ತೇ ವಿನಾ ತೆರೆದು ಗೊತ್ತಿಲ್ಲ. ಶ್ರೇಷ್ಠವಾದವುಗಳನ್ನು ಮುಚ್ಚುವುದರಿಂದ ನಮ್ಮ ಪರಂಪರೆ ಉಳಿಯುವುದಿಲ್ಲ. ನಮ್ಮ ತಾತ, ಮುತ್ತಾತಂದಿರ ಕಾಲದಲ್ಲಿಕೆರೆಯೊಂದ ಕಟ್ಟಿಸುವ ಕಾರ್ಯ ಮಹತ್ವ ಪಡೆದಿತ್ತು. ತನ್ನ ಕಳಂಕ ಕಳೆದುಕೊಳ್ಳಲು ವೇಶ್ಯೆಯೊಬ್ಬಳು ಸೂಳೆ ಕೆರೆ ಕಟ್ಟಿಸಿದ್ದಾಳೆ. ಆದರೆ, ಈಗ ಕೆರೆಗಳನ್ನೇ ನುಂಗಿ ನೀರುಕುಡಿದು ಮಂತ್ರಿಗಳಾದವರೂ ಇದ್ದಾರೆ ಎಂದು ರಾಜಕಾರಣಿಗಳ ವಿರುದ್ಧ ಹರಿಹಾಯ್ದರು.
-ಚಕ್ರವರ್ತಿ ಸೂಲಿಬೆಲೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ