ಆ್ಯಪ್ನಗರ

ಪರ್ವತರಾಯನಕರೆ ಪಾಲಾದ ಯುವಕನ ಶವ ನಾಪತ್ತೆ

ಪಟ್ಟಣ ಸಮೀಪದ ಪರ್ವತರಾಯನ ಕೆರೆಯಲ್ಲಿ ಮಂಗಳವಾರ ಮಧ್ಯಾಹ್ನ ಈಜಲು ಹೋಗಿ ಮೃತಪಟ್ಟಿರುವ ಸಲೀಂ ಶವ ಬುಧವಾರವೂ ಪತ್ತೆಯಾಗಲಿಲ್ಲ.

Vijaya Karnataka 13 Sep 2018, 5:00 am
ಅಜ್ಜಂಪುರ : ಪಟ್ಟಣ ಸಮೀಪದ ಪರ್ವತರಾಯನ ಕೆರೆಯಲ್ಲಿ ಮಂಗಳವಾರ ಮಧ್ಯಾಹ್ನ ಈಜಲು ಹೋಗಿ ಮೃತಪಟ್ಟಿರುವ ಸಲೀಂ ಶವ ಬುಧವಾರವೂ ಪತ್ತೆಯಾಗಲಿಲ್ಲ.
Vijaya Karnataka Web the young mans body was missing from the mountain
ಪರ್ವತರಾಯನಕರೆ ಪಾಲಾದ ಯುವಕನ ಶವ ನಾಪತ್ತೆ


ಮಂಗಳವಾರ ಸಂಜೆ ಸ್ಥಳೀಯರು ಮತ್ತು ಕಡೂರು ಅಗ್ನಿ ಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ತಡಕಾಡಿದರೂ ಸಿಗದೆ ಕತ್ತಲಾಯಿತೆಂದು ವಾಪಸ್‌ ತೆರಳಿದರು. ಬುಧವಾರ ಬೆಳ್ಳಂಬೆಳಗ್ಗೆ ತಾವರೆಕೆರೆಯಿಂದ ಎಂಟತ್ತು ಮಂದಿ ಈಜು ಪರಿಣಿತರು ಮೀನಿನ ಬಲೆಯೊಂದಿಗೆ ಆಗಮಿಸಿ ಕೆರೆಯನ್ನು ಜಾಲಾಡಿದರೂ ಪತ್ತೆ ಆಗಲಿಲ್ಲ. ಆಳವಾದ ಗುಂಡಿ ಜತೆಗೆ ಗಿಡ ಗಂಟೆ, ಮುಳ್ಳುಗಳು ಬಲೆಗೆ ಸಿಕ್ಕಿದ್ದರಿಂದ ಅವುಗಳನ್ನು ಬೇರ್ಪಡಿಸುವುದೇ ದೊಡ್ಡ ಕೆಲಸವಾಗಿತ್ತು. ಗದಗ ಜಿಲ್ಲೆ ಕುರುಕೋಟೆ ಗ್ರಾಮದ ಸಲೀಂ ವರ್ಷಕ್ಕೊಮ್ಮೆ ಅಜ್ಜಂಪುರಕ್ಕೆ ಬಂದು ಹತ್ತಿರದ ಸಂಬಂಧಿ ಸಮೀನಾ ಎಂಬುವರ ಮನೆಯಲ್ಲಿ ಒಂದೆರಡು ದಿನ ಇದ್ದು ವಾಪಾಸ್‌ ಹೋಗುತ್ತಿದ್ದ. ಸಹಜವಾಗಿ ಕೆರೆಗೆ ಸ್ನಾನಕ್ಕೆ ಇಳಿದಿದ್ದ . ಈಜು ಬರದೇ ಇದ್ದುದ್ದರಿಂದ ಮುಳುಗುತ್ತಿದ್ದ ಈತನನ್ನು ಗೆಳೆಯ ಹುಸೇನ್‌ ರಕ್ಷಿಸಲು ಹೋದಾಗ ಆತ ಕೂಡ ನೀರು ಕುಡಿದು ಅಸ್ವಸ್ಥನಾದ. ತಕ್ಷ ಣ ಆತನನ್ನು ಸರಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರಿಂದ ಬದುಕುಳಿದಿದ್ದಾನೆ. ಬಡ ಕುಟುಂಬದ ಈತ ಮನೆಗೆ ಆಧಾರವಾಗಿದ್ದ. ತಂದೆ ರಾಜ್‌ ಸಾಬ್‌ ಇಲ್ಲದ್ದರಿಂದ ತಾಯಿ ಪಾತಿಮಾ ಇತರೆ 4 ಕುಟುಂಬದ ಸದಸ್ಯರ ಹೊಣೆ ಹೊತ್ತಿದ್ದ.

ಎರಡೂ ದಿನ ತರೀಕೆರೆ ತಹಶೀಲ್ದಾರ್‌ ಧರ್ಮೋಜಿರಾವ್‌, ಅಜ್ಜಂಪುರ ಪಿಎಸ್‌ಐ ರಫೀಕ್‌ ಸ್ಥಳದಲ್ಲಿ ಮೆಕ್ಕಾಂ ಹೂಡಿ ಶವ ತೆಗೆಯಲು ಪ್ರಯತ್ನ ನಡೆಸಿದರು. ಎಎಸ್‌ಐ ಗೋವಿಂದರಾಜ್‌, ಪೊಲೀಸರು, ರೆವಿನ್ಯೂ ಇನ್ಸ್‌ಪೆಕ್ಟರ್‌ ಕೃಷ್ಣಮೂರ್ತಿ, ಗ್ರಾಮ ಲೆಕ್ಕಾಧಿಕಾರಿ ಶಿವು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಕೆರೆಯ ಸುತ್ತ ಸಾರ್ವಜನಿಕರು ಮೃತನ ಶವ ಹುಡುಕಲು ಕಸರತ್ತು ನಡೆಸಿದರು. ರಾತ್ರಿವರೆಗೂ ಶವ ಪತ್ತೆ ಆಗಲೇ ಇಲ್ಲ.

ತೂಬಿನ ಮೇಲ್ಭಾಗ ಡೈವ್‌ ಹೊಡೆಯುತ್ತಿದ್ದ ಸಲೀಂನನ್ನು ವಾಹನ ಚಾಲಕ ಮಹಮದ್‌ ಹುಸೇನ್‌ ನೀರಿನ ದಡದಲ್ಲಿ ನಿಂತು ನೋಡುತ್ತಿದ್ದ. ಅಸಹಾಯಕನಾಗಿ ಸಲೀಂ ಕೈ ಚಾಚಿದಾಗ ಓಡಿ ಈಜಿ ರಕ್ಷಿಸಲು ಪ್ರಯತ್ನಪಟ್ಟ. ಕೊನೆಗೆ ಆತನ ಕೈ ಸಿಕ್ಕಾಗ ಈತ ಸುಸ್ತಾಗಿದ್ದ. ತಕ್ಷ ಣ ಸುತ್ತಮುತ್ತ ಜನರು ಓಡಿ ಬಂದು ರಕ್ಷಿಸಿ ಆಸ್ಪತ್ರೆಗೆ ಸೇರಿಸಿ ಚಿಕಿತಸೆ ಕೊಡಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ