ಆ್ಯಪ್ನಗರ

ಕಳವು ಆರೋಪಿ ಬಂಧನ

ಬಾಳೂರು ಠಾಣಾ ವ್ಯಾಪ್ತಿಯ ಸಂಪಿಗೆಖಾನ್‌ನ ಕಾಂತಿ ಎಸ್ಟೇಟ್‌ ಮಾಲೀಕ ಆನಂದ್‌ ಅವರ ಮನೆಯಲ್ಲಿ ಆಭರಣ ಕಳವು ಮಾಡಿದ್ದ ಆರೋಪಿಯನ್ನು ಮಾಲು ಸಮೇತ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Vijaya Karnataka 17 Mar 2019, 5:00 am
ಕೊಟ್ಟಿಗೆಹಾರ : ಬಾಳೂರು ಠಾಣಾ ವ್ಯಾಪ್ತಿಯ ಸಂಪಿಗೆಖಾನ್‌ನ ಕಾಂತಿ ಎಸ್ಟೇಟ್‌ ಮಾಲೀಕ ಆನಂದ್‌ ಅವರ ಮನೆಯಲ್ಲಿ ಆಭರಣ ಕಳವು ಮಾಡಿದ್ದ ಆರೋಪಿಯನ್ನು ಮಾಲು ಸಮೇತ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Vijaya Karnataka Web theft was arrested by the accused
ಕಳವು ಆರೋಪಿ ಬಂಧನ


ಸಂಪಿಗೆಖಾನ್‌ ಗ್ರಾಮದ ದಿನೇಶ್‌ ಬಂಧಿತ ಆರೋಪಿ. ಬೆಂಗಳೂರು ಮೂಲದ ಆನಂದ್‌ ಸಂಪಿಗೆಖಾನ್‌ನಲ್ಲಿ ವರ್ಷದ ಹಿಂದೆ ಕಾಫಿತೋಟ ಖರೀದಿ ಮಾಡಿದ್ದು ಅದೇ ಗ್ರಾಮದ ದಿನೇಶ್‌ ಮತ್ತು ಕುಟುಂಬದವರು ಆನಂದ್‌ ಅವರ ತೋಟದ ಲೈನ್‌ನಲ್ಲಿ ವಾಸವಿದ್ದು ಆನಂದ್‌ ಅವರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದರು.

ತೋಟದ ಮಾಲೀಕ ಆನಂದ್‌ ಅವರ ವಿಶ್ವಾಸ ಗಿಟ್ಟಿಸಿಕೊಂಡ ದಿನೇಶ್‌, ಆನಂದ್‌ ಅವರ ಮನೆ ಕೆಲಸಗಳಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಈ ಸಂದರ್ಭ ಬೀರುವಿನಲ್ಲಿದ್ದ ಚಿನ್ನಾಭರಣವನ್ನು ದಿನೇಶ್‌ ಕಳವು ಮಾಡಿದ್ದ. ಈ ಬಗ್ಗೆ ಆನಂದ್‌ ಬಾಳೂರು ಠಾಣೆಗೆ ದೂರು ನೀಡಿದ್ದು, ಪೊಲೀಸರು ತೋಟದ ಕಾರ್ಮಿಕರನ್ನು ವಿಚಾರಣೆ ನಡೆಸಿದಾಗ ದಿನೇಶ್‌ ಕಳವು ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದ. ಕಳವು ಮಾಡಿದ ಚಿನ್ನಾಭರಣಗಳನ್ನು ಹಿರೇಬೈಲ್‌, ಕಳಸ, ಕಾರ್ಕಳ, ಮೂಡಿಗೆರೆಯ ಬ್ಯಾಂಕ್‌, ಫೈನಾನ್ಸ್‌ ಹಾಗೂ ಗಿರವಿ ಅಂಗಡಿಗಳಲ್ಲಿ ಅಡವಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ. ವಿವಿಧೆಡೆ ಅಡವಿಟ್ಟಿದ್ದ ಸುಮಾರು 3 ಲಕ್ಷ ರೂ. ಬೆಲೆಬಾಳುವ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜಿಲ್ಲಾ ಎಸ್‌ಪಿ ಹರೀಶ್‌ ಪಾಂಡೆ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷ ಕ ಕೆ.ಕೆ. ರಘು, ಅಪರಾಧ ವಿಭಾಗದ ಸಿಬ್ಬಂದಿ ಗಿರೀಶ್‌, ರವೀಂದ್ರ, ಮಂಜುನಾಥ್‌, ಬಾಳೂರು ಪಿಎಸ್‌ಐ ಭಾರತಿ, ಎಎಸ್‌ಐ ಹನುಮಂತಪ್ಪ, ಪ್ರದೀಪ್‌, ಮಧು, ಓಂಕಾರ್‌, ಕಲ್ಲೇಶ್‌, ವೈಭವ್‌, ಯೋಗೀಶ್‌ಬಾಬು, ಸುರೇಶ್‌, ಹೇಮಂತ್‌ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ