ಜಿಲ್ಲಾಧಿಕಾರಿಗಳ ಆದೇಶಕ್ಕಿಲ್ಲಕವಡೆಕಾಸಿನ ಕಿಮ್ಮತ್ತು
ಮಲೆನಾಡಿನಲ್ಲಿಕಳೆದ ವರ್ಷದ ಮಹಾಮಳೆಗೆ ಕೆಲವು ಕಾಲು ಸಂಕಗಳು ಕೊಚ್ಚಿಕೊಂಡು ಹೋಗಿದ್ದರೆ, ಇನ್ನು ಕೆಲವು ಕಿರು ಸೇತುವೆಗಳು ಶಿಥಿಲಗೊಂಡಿದ್ದವು. ಈ ಹಿನ್ನೆಲೆಯಲ್ಲಿಸೇತುವೆ ದುರಸ್ತಿಗೆ ಜಿಲ್ಲಾಧಿಕಾರಿ ನೀಡಿದ್ದ ಆದೇಶಕ್ಕೆ ಕವಡೆ ಕಾಸಿನ ಕಿಮತ್ತು ಇಲ್ಲದಂತಾಗಿದೆ.
Vijaya Karnataka 5 Jun 2020, 5:00 am
ಕಳಸ : ಮಲೆನಾಡಿನಲ್ಲಿಕಳೆದ ವರ್ಷದ ಮಹಾಮಳೆಗೆ ಕೆಲವು ಕಾಲು ಸಂಕಗಳು ಕೊಚ್ಚಿಕೊಂಡು ಹೋಗಿದ್ದರೆ, ಇನ್ನು ಕೆಲವು ಕಿರು ಸೇತುವೆಗಳು ಶಿಥಿಲಗೊಂಡಿದ್ದವು. ಈ ಹಿನ್ನೆಲೆಯಲ್ಲಿಸೇತುವೆ ದುರಸ್ತಿಗೆ ಜಿಲ್ಲಾಧಿಕಾರಿ ನೀಡಿದ್ದ ಆದೇಶಕ್ಕೆ ಕವಡೆ ಕಾಸಿನ ಕಿಮತ್ತು ಇಲ್ಲದಂತಾಗಿದೆ.
ಕಳೆದ ಆಗಸ್ಟ್ ತಿಂಗಳಲ್ಲಿಸುರಿದ ಮಹಾಮಳೆಗೆ ಶಿಥಿಲಗೊಂಡಿದ್ದ ಸೇತುವೆಯ ದುರಸ್ತಿಯನ್ನು ಹದಿನೈದು ದಿನದೊಳಗೆ ಮಾಡಿ ವರದಿ ನೀಡಬೇಕು ಎಂದು ಹೇಳಿದ ಜಿಲ್ಲಾಧಿಕಾರಿಗಳ ಮಾತಿಗೆ ಇಲಾಖೆ ಪಾಲನೆ ಮಾಡಿಲ್ಲ. ಮಹಾಮಳೆಗೆ ಕೋಟೆಹೊಳೆ ಸೇತುವೆ ಹೊರನಾಡು-ಕಳಸ ಮಧ್ಯೆ ಹೆಬ್ಬೋಳೆ ಸೇತುವೆ,ಕುದುರೆಮುಖ ವಿನೋಬನಗರಕ್ಕೆ ಹೋಗುವ ಸೇತುವೆ,ಕಾರ್ಲೆಯಲ್ಲಿನ ಸೇತುವೆ,ಗಾಳಿಗಂಡಿಗೆ ಹೋಗುವ ರಸ್ತೆಯಲ್ಲಿನ ಕಾಲು ಸೇತುವೆ,ಕುಂಬಳಡಿಕೆ ಗ್ರಾಮಕ್ಕೆ ಹೋಗುವ ಸೇತುವೆಗಳು ಶಿಥಿಲಗೊಂಡಿವೆ. ಇವುಗಳ ಕಾಮಗಾರಿಯೂ ನಡೆದಿಲ್ಲ.ಹಳುವಳ್ಳಿ ದೇವಸ್ಥಾನದ ಸಮೀಪ ಇರುವ ಸೇತುವೆಯ ಕಾಮಗಾರಿಯು ನಡೆಯುತ್ತಿದ್ದು,ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣವಿಲ್ಲ.ಬಾಳೆಹೊಳೆ ಸೇತುವೆ ಮತ್ತು ಕುದುರೆಮುಖದ ಹೊಸಮಠ ಸೇತುವೆಯನ್ನು ಮಾತ್ರ ದುರಸ್ತಿ ಮಾಡಿ ಕೈ ತೊಳೆದುಕೊಳ್ಳಲಾಗಿದೆ.
ಅತಿವೃಷ್ಟಿಗೆ ಸೇತುವೆಯ ಮೇಲೆ ನೀರು ಹರಿದು,ಮರದ ದಿಮ್ಮುಗಳು ಬಡಿದು ಸೇತುವೆಯು ಶಿಥಿಲಾವಸ್ಥೆ ತುಲುಪಿತ್ತು.ಸೇತುವೆಯ ಎರಡೂ ಬದಿಯ ಕೈಪಿಡಿಗಳು ತುಂಡಾಗಿ ನೀರು ಪಾಲಾಗಿದ್ದವು.ಇದಾದ ನಂತರ ಹಲವಾರು ದನಕರುಗಳು ನೀರು ಪಾಲಾದವು.ರಾತ್ರಿ ಸಂದರ್ಭದಲ್ಲಿಸೇತುವೆಗೆ ಕೈಪಿಡಿ ಇಲ್ಲದೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.ಈ ಸೇತುವೆಗಳೆ ಪಟ್ಟಣ ಮತ್ತು ಹಳ್ಳಿಯ ಸಂಪರ್ಕಕೊಂಡಿಯಾಗಿದೆ.ಸೇತುವೆಯ ಮುಖಾಂತರ ನಿತ್ಯ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳು ಬರುತ್ತಾರೆ.ಪ್ರತಿ ನಿತ್ಯ ನೂರಾರು ವಾಹನಗಳು ತಿರುಗಾಡುತ್ತವೆ.
ಈ ಬಗ್ಗೆ ಕಳೆದ ಪೆಬ್ರವರಿ 10ನೇ ತಾರೀಕಿನಂದು ಉಸ್ತುವಾರಿ ಸಚಿವ ಸಿ.ಟಿ.ರವಿ,ಜಿಲ್ಲಾಧಿಕಾರಿ ಬಗಾದಿ ಗೌತಮ್,ಶಾಸಕ ಎಂ.ಪಿ.ಕುಮಾರಸ್ವಾಮಿ ನೇತ್ರತ್ವದಲ್ಲಿಕಳಸದ ಕಲಶೇಶ್ವರ ಸಭಾ ಭವನದಲ್ಲಿನಡೆದ ಜನ ಸಂಪರ್ಕ ಸಭೆಯಲ್ಲಿಊರಿನ ಮುಖಂಡರಾದ ಕೆ.ಸಿ.ಧರಣೇಂದ್ರ ಅವರು ಸೇತುವೆ ಶಿಥಿಲಗೊಂಡಿರುವ ಬಗ್ಗೆ ಗಮನ ಸೆಳೆದಿದ್ದರು.ಆ ಸಂದರ್ಭದಲ್ಲಿಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರು ಕೂಡಲೇ ಲೋಕೋಪಯೋಗಿ ಇಲಾಖೆಯ ಎಂಜಿನಿಯರ ಗಮನಕ್ಕೆ ತಂದು ಹದಿನೈದು ದಿನದೊಳಗೆ ಈ ಸೇತುವೆಯನ್ನು ದುರಸ್ತಿ ಮಾಡಿ ವರದಿ ನೀಡಬೇಕು ಎಂದು ತಿಳಿಸಿದ್ದರು.ಆದರೆ ಇದಾಗಿ ಮೂರು ತಿಂಗಳು ಕಳೆದರೂ ಸೇತುವೆ ದುರಸ್ತಿ ಭಾಗ್ಯ ಬಂದಿಲ್ಲ.ಈ ಬಗ್ಗೆ ಸಂಬಂಧಿಸಿದ ಇಲಾಖಾ ಎಂಜಿನಿಯರ್ ಬಳಿ ವಿಚಾರಿಸಿದರೆ ಈಗಾಗಲೇ ಕೋಟೆಹೊಳೆ ಸೇತುವೆ ದುರಸ್ತಿಗೆ 4 ಲಕ್ಷ ರೂ. ಅಂದಾಜು ಪಟ್ಟಿ ತಯಾರಿಸಿದ್ದೇವೆ.ಅನುಮೋದನೆಗಾಗಿ ಸರಕಾರಕ್ಕಾಗಿ ಕಳುಹಿಸಿಕೊಡುತ್ತೇವೆ ಎಂದು ಹೇಳುತ್ತಾರೆ.15 ದಿನದಲ್ಲಿಕೆಲಸ ಮಾಡಿ ವರದಿ ನೀಡಬೇಕು ಜಿಲ್ಲಾಧಿಕಾರಿಗಳು ಸೂಚಿಸಿದರೂ ಇನ್ನು ಅನುಮೋದನೆಗಾಗಿ ಸರಕಾರಕ್ಕೆ ಪ್ರಸ್ತಾವನೆಯನ್ನೆ ಸಲ್ಲಿಸಿಲ್ಲ. ಇದರ ಪರಿಣಾಮ ಈ ಬಾರಿಯ ಮಳೆಗಾಲವನ್ನು ಗ್ರಾಮಸ್ಥರು ಅಪಾಯದ ಸ್ಥಿತಿಯಲ್ಲೇ ಬರ ಮಾಡಿಕೊಳ್ಳುವಂತಾಗಿದೆ. ಜನರ ಸಮಸ್ಯೆಗಳಿಗೆ,ಊರಿನ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ನಿಟ್ಟಿನಲ್ಲಿಲಕ್ಷಾಂತರ ರೂ ವೆಚ್ಚ ಮಾಡಿ ಇಡೀ ಜಿಲ್ಲೆಯ ಅಧಿಕಾರಿಗಳನ್ನು ಒಟ್ಟುಗೂಡಿಸಿ ಜನ ಸಂಪರ್ಕ ಸಭೆ ನಡೆಸಿ ಅಲ್ಲಿಜನರ ಮತ್ತು ಊರಿನ ಮೂಲ ಸಮಸ್ಯೆಗಳ ಅವಹಾಲುಗಳನ್ನು ಸ್ವೀಕರಿಸಿ ನಂತರ ಆ ಸಮಸ್ಯೆಗೆ ಪರಿಹಾರವೇ ಸಿಗುತ್ತಿಲ್ಲ.
ಕಳೆದ ಫೆಬ್ರವರಿ ತಿಂಗಳಿನಲ್ಲಿನಡೆದ ಜನ ಸಂಪರ್ಕ ಸಭೆಯಲ್ಲಿಜಿಲ್ಲಾಧಿಕಾರಿಗಳು ಕೋಟೆಹೊಳೆ ಸೇತುವೆಯನ್ನು ಕೂಡಲೇ ದುರಸ್ತಿ ಪಡಿಸಿ ವರದಿ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆಗೆ ತಿಳಿಸಿದ್ದರು.ಆದರೆ ಇದಾಗಿ ಮೂರು ತಿಂಗಳು ಕಳೆದರೂ ಸೇತುವೆಯ ಚಿತ್ರಣ ಯಾವುದೂ ಬದಲಾಗಿಲ್ಲ.ಅಪಾಯ ನಡೆದ ಮೇಲೆ ಒಂದಷ್ಟು ಪರಿಹಾರ ನೀಡಿ ಕೈಚೆಲ್ಲಿಕುಳಿತುಕೊಳ್ಳುವ ಬದಲು ಅಪಾಯ ಆಗುವ ಮುನ್ನ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.
-ಭೋಜೇಗೌಡ,ಹೊಸೂರು ನಿವಾಸಿ
--------------
ಕೋಟೆಹೊಳೆ ಸೇತುವೆಯ ದುರಸ್ತಿಗೆ 4ಲಕ್ಷ ಅಂದಾಜು ಪಟ್ಟಿ ತಯಾರಿಸಿದ್ದೇವೆ.ಕೂಡಲೇ ಅದನ್ನು ಅನುಮೋದನೆಗಾಗಿ ಕಳುಹಿಸಿಕೊಡುತ್ತೇವೆ.
-ಸತೀಶ್, ಲೊಕೋಪಯೋಗಿ ಇಲಾಖೆ ಎಂಜಿನಿಯರ್
--------
ಕಳೆದ ಆಗಸ್ಟ್ ತಿಂಗಳಲ್ಲಿಸುರಿದ ಮಹಾಮಳೆಗೆ ಶಿಥಿಲಗೊಂಡಿದ್ದ ಸೇತುವೆಯ ದುರಸ್ತಿಯನ್ನು ಹದಿನೈದು ದಿನದೊಳಗೆ ಮಾಡಿ ವರದಿ ನೀಡಬೇಕು ಎಂದು ಹೇಳಿದ ಜಿಲ್ಲಾಧಿಕಾರಿಗಳ ಮಾತಿಗೆ ಇಲಾಖೆ ಪಾಲನೆ ಮಾಡಿಲ್ಲ. ಮಹಾಮಳೆಗೆ ಕೋಟೆಹೊಳೆ ಸೇತುವೆ ಹೊರನಾಡು-ಕಳಸ ಮಧ್ಯೆ ಹೆಬ್ಬೋಳೆ ಸೇತುವೆ,ಕುದುರೆಮುಖ ವಿನೋಬನಗರಕ್ಕೆ ಹೋಗುವ ಸೇತುವೆ,ಕಾರ್ಲೆಯಲ್ಲಿನ ಸೇತುವೆ,ಗಾಳಿಗಂಡಿಗೆ ಹೋಗುವ ರಸ್ತೆಯಲ್ಲಿನ ಕಾಲು ಸೇತುವೆ,ಕುಂಬಳಡಿಕೆ ಗ್ರಾಮಕ್ಕೆ ಹೋಗುವ ಸೇತುವೆಗಳು ಶಿಥಿಲಗೊಂಡಿವೆ. ಇವುಗಳ ಕಾಮಗಾರಿಯೂ ನಡೆದಿಲ್ಲ.ಹಳುವಳ್ಳಿ ದೇವಸ್ಥಾನದ ಸಮೀಪ ಇರುವ ಸೇತುವೆಯ ಕಾಮಗಾರಿಯು ನಡೆಯುತ್ತಿದ್ದು,ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣವಿಲ್ಲ.ಬಾಳೆಹೊಳೆ ಸೇತುವೆ ಮತ್ತು ಕುದುರೆಮುಖದ ಹೊಸಮಠ ಸೇತುವೆಯನ್ನು ಮಾತ್ರ ದುರಸ್ತಿ ಮಾಡಿ ಕೈ ತೊಳೆದುಕೊಳ್ಳಲಾಗಿದೆ.
ಅತಿವೃಷ್ಟಿಗೆ ಸೇತುವೆಯ ಮೇಲೆ ನೀರು ಹರಿದು,ಮರದ ದಿಮ್ಮುಗಳು ಬಡಿದು ಸೇತುವೆಯು ಶಿಥಿಲಾವಸ್ಥೆ ತುಲುಪಿತ್ತು.ಸೇತುವೆಯ ಎರಡೂ ಬದಿಯ ಕೈಪಿಡಿಗಳು ತುಂಡಾಗಿ ನೀರು ಪಾಲಾಗಿದ್ದವು.ಇದಾದ ನಂತರ ಹಲವಾರು ದನಕರುಗಳು ನೀರು ಪಾಲಾದವು.ರಾತ್ರಿ ಸಂದರ್ಭದಲ್ಲಿಸೇತುವೆಗೆ ಕೈಪಿಡಿ ಇಲ್ಲದೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.ಈ ಸೇತುವೆಗಳೆ ಪಟ್ಟಣ ಮತ್ತು ಹಳ್ಳಿಯ ಸಂಪರ್ಕಕೊಂಡಿಯಾಗಿದೆ.ಸೇತುವೆಯ ಮುಖಾಂತರ ನಿತ್ಯ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳು ಬರುತ್ತಾರೆ.ಪ್ರತಿ ನಿತ್ಯ ನೂರಾರು ವಾಹನಗಳು ತಿರುಗಾಡುತ್ತವೆ.
ಈ ಬಗ್ಗೆ ಕಳೆದ ಪೆಬ್ರವರಿ 10ನೇ ತಾರೀಕಿನಂದು ಉಸ್ತುವಾರಿ ಸಚಿವ ಸಿ.ಟಿ.ರವಿ,ಜಿಲ್ಲಾಧಿಕಾರಿ ಬಗಾದಿ ಗೌತಮ್,ಶಾಸಕ ಎಂ.ಪಿ.ಕುಮಾರಸ್ವಾಮಿ ನೇತ್ರತ್ವದಲ್ಲಿಕಳಸದ ಕಲಶೇಶ್ವರ ಸಭಾ ಭವನದಲ್ಲಿನಡೆದ ಜನ ಸಂಪರ್ಕ ಸಭೆಯಲ್ಲಿಊರಿನ ಮುಖಂಡರಾದ ಕೆ.ಸಿ.ಧರಣೇಂದ್ರ ಅವರು ಸೇತುವೆ ಶಿಥಿಲಗೊಂಡಿರುವ ಬಗ್ಗೆ ಗಮನ ಸೆಳೆದಿದ್ದರು.ಆ ಸಂದರ್ಭದಲ್ಲಿಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರು ಕೂಡಲೇ ಲೋಕೋಪಯೋಗಿ ಇಲಾಖೆಯ ಎಂಜಿನಿಯರ ಗಮನಕ್ಕೆ ತಂದು ಹದಿನೈದು ದಿನದೊಳಗೆ ಈ ಸೇತುವೆಯನ್ನು ದುರಸ್ತಿ ಮಾಡಿ ವರದಿ ನೀಡಬೇಕು ಎಂದು ತಿಳಿಸಿದ್ದರು.ಆದರೆ ಇದಾಗಿ ಮೂರು ತಿಂಗಳು ಕಳೆದರೂ ಸೇತುವೆ ದುರಸ್ತಿ ಭಾಗ್ಯ ಬಂದಿಲ್ಲ.ಈ ಬಗ್ಗೆ ಸಂಬಂಧಿಸಿದ ಇಲಾಖಾ ಎಂಜಿನಿಯರ್ ಬಳಿ ವಿಚಾರಿಸಿದರೆ ಈಗಾಗಲೇ ಕೋಟೆಹೊಳೆ ಸೇತುವೆ ದುರಸ್ತಿಗೆ 4 ಲಕ್ಷ ರೂ. ಅಂದಾಜು ಪಟ್ಟಿ ತಯಾರಿಸಿದ್ದೇವೆ.ಅನುಮೋದನೆಗಾಗಿ ಸರಕಾರಕ್ಕಾಗಿ ಕಳುಹಿಸಿಕೊಡುತ್ತೇವೆ ಎಂದು ಹೇಳುತ್ತಾರೆ.15 ದಿನದಲ್ಲಿಕೆಲಸ ಮಾಡಿ ವರದಿ ನೀಡಬೇಕು ಜಿಲ್ಲಾಧಿಕಾರಿಗಳು ಸೂಚಿಸಿದರೂ ಇನ್ನು ಅನುಮೋದನೆಗಾಗಿ ಸರಕಾರಕ್ಕೆ ಪ್ರಸ್ತಾವನೆಯನ್ನೆ ಸಲ್ಲಿಸಿಲ್ಲ. ಇದರ ಪರಿಣಾಮ ಈ ಬಾರಿಯ ಮಳೆಗಾಲವನ್ನು ಗ್ರಾಮಸ್ಥರು ಅಪಾಯದ ಸ್ಥಿತಿಯಲ್ಲೇ ಬರ ಮಾಡಿಕೊಳ್ಳುವಂತಾಗಿದೆ. ಜನರ ಸಮಸ್ಯೆಗಳಿಗೆ,ಊರಿನ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ನಿಟ್ಟಿನಲ್ಲಿಲಕ್ಷಾಂತರ ರೂ ವೆಚ್ಚ ಮಾಡಿ ಇಡೀ ಜಿಲ್ಲೆಯ ಅಧಿಕಾರಿಗಳನ್ನು ಒಟ್ಟುಗೂಡಿಸಿ ಜನ ಸಂಪರ್ಕ ಸಭೆ ನಡೆಸಿ ಅಲ್ಲಿಜನರ ಮತ್ತು ಊರಿನ ಮೂಲ ಸಮಸ್ಯೆಗಳ ಅವಹಾಲುಗಳನ್ನು ಸ್ವೀಕರಿಸಿ ನಂತರ ಆ ಸಮಸ್ಯೆಗೆ ಪರಿಹಾರವೇ ಸಿಗುತ್ತಿಲ್ಲ.
ಕಳೆದ ಫೆಬ್ರವರಿ ತಿಂಗಳಿನಲ್ಲಿನಡೆದ ಜನ ಸಂಪರ್ಕ ಸಭೆಯಲ್ಲಿಜಿಲ್ಲಾಧಿಕಾರಿಗಳು ಕೋಟೆಹೊಳೆ ಸೇತುವೆಯನ್ನು ಕೂಡಲೇ ದುರಸ್ತಿ ಪಡಿಸಿ ವರದಿ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆಗೆ ತಿಳಿಸಿದ್ದರು.ಆದರೆ ಇದಾಗಿ ಮೂರು ತಿಂಗಳು ಕಳೆದರೂ ಸೇತುವೆಯ ಚಿತ್ರಣ ಯಾವುದೂ ಬದಲಾಗಿಲ್ಲ.ಅಪಾಯ ನಡೆದ ಮೇಲೆ ಒಂದಷ್ಟು ಪರಿಹಾರ ನೀಡಿ ಕೈಚೆಲ್ಲಿಕುಳಿತುಕೊಳ್ಳುವ ಬದಲು ಅಪಾಯ ಆಗುವ ಮುನ್ನ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.
-ಭೋಜೇಗೌಡ,ಹೊಸೂರು ನಿವಾಸಿ
--------------
ಕೋಟೆಹೊಳೆ ಸೇತುವೆಯ ದುರಸ್ತಿಗೆ 4ಲಕ್ಷ ಅಂದಾಜು ಪಟ್ಟಿ ತಯಾರಿಸಿದ್ದೇವೆ.ಕೂಡಲೇ ಅದನ್ನು ಅನುಮೋದನೆಗಾಗಿ ಕಳುಹಿಸಿಕೊಡುತ್ತೇವೆ.
-ಸತೀಶ್, ಲೊಕೋಪಯೋಗಿ ಇಲಾಖೆ ಎಂಜಿನಿಯರ್
--------