ಆ್ಯಪ್ನಗರ

ಹೀಗೊಬ್ಬ ಅಪರೂಪದ ಸರಕಾರಿ ಶಿಕ್ಷ ಕ

ಸರಕಾರಿ ಶಾಲೆಗಳ ಶಿಕ್ಷಕರೆಂದರೆ ಟೈಮ್‌ಗೆ ಸರಿಯಾಗಿ ಶಾಲೆಗೆ ಬರೋದಿಲ್ಲ, ಕೇವಲ ಗಂಟೆ ಹೊಡಿ ಸಂಬಳ ತಗೋ ಎಂಬುದಕ್ಕೆ ಮಾತ್ರ ಸೀಮಿತ ಆಗಿದ್ದಾರೆ ಎಂಬ ದೂರು ಸಾಮಾನ್ಯ. ಆದರೆ, ಇದಕ್ಕೆ ಅಪವಾದ ಕೊಟ್ಟಿಗೆಹಾರ ಅತ್ತಿಗೆರೆ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಕುಮಾರ್‌.

Vijaya Karnataka 31 May 2019, 5:00 am
ಕೊಟ್ಟಿಗೆಹಾರ : ಸರಕಾರಿ ಶಾಲೆಗಳ ಶಿಕ್ಷಕರೆಂದರೆ ಟೈಮ್‌ಗೆ ಸರಿಯಾಗಿ ಶಾಲೆಗೆ ಬರೋದಿಲ್ಲ, ಕೇವಲ ಗಂಟೆ ಹೊಡಿ ಸಂಬಳ ತಗೋ ಎಂಬುದಕ್ಕೆ ಮಾತ್ರ ಸೀಮಿತ ಆಗಿದ್ದಾರೆ ಎಂಬ ದೂರು ಸಾಮಾನ್ಯ. ಆದರೆ, ಇದಕ್ಕೆ ಅಪವಾದ ಕೊಟ್ಟಿಗೆಹಾರ ಅತ್ತಿಗೆರೆ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಕುಮಾರ್‌.
Vijaya Karnataka Web CKM-30KTG4


ಕೊಟ್ಟಿಗೆಹಾರದ ಅತ್ತಿಗೆರೆ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷ ಕ ಕುಮಾರ್‌, ಶಾಲೆಗೆ ಬೆಳಗೆ 9 ಕ್ಕೆ ಹಾಜರ್‌.ನಂತರ ಸಂಜೆ 6 ರವರೆಗೆ ಪಾಠ, ಪ್ರವಚನ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಜತಗೆ ರಜಾದಿನಗಳಲ್ಲೂ ಶಾಲೆಯ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮಸ್ಥರು,ವಿದ್ಯಾರ್ಥಿಗಳು ಅಚ್ಚು ಮೆಚ್ಚಿನ ಗುರುಗಳಾಗಿದ್ದಾರೆ.

ಅರಸಿಕೆರೆ ತಾಲೂಕಿನ ಬಾಣಾವರದ ಕುಮಾರ್‌ 2005ರಲ್ಲಿ ಶಿಕ್ಷ ಕ ವೃತ್ತಿಯನ್ನು ಬಾಗಲಕೋಟೆಯಲ್ಲಿ ಪ್ರಾರಂಭಿಸಿ ಆರೂವರೆ ವರ್ಷ ಬಾಗಲಕೋಟೆಯ ಸರಕಾರಿ ಶಾಲೆಯಲ್ಲಿ ವೃತ್ತಿಜೀವನ ಆರಂಭಿಸಿದರು. 2011ರಲ್ಲಿ ಅತ್ತಿಗೆರೆ ಸರಕಾರಿ ಶಾಲೆಗೆ ವರ್ಗಾವಣೆಗೊಂಡು ಬಂದರು. ಅಂದಿನಿಂದ ಅತ್ತಿಗೆರೆ ಶಾಲೆ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಇಂದು ಖಾಸಗಿ ಶಾಲೆಗಳಿಗೆ ಕಮ್ಮಿ ಇಲ್ಲದಂತೆ ರಾರಾಜಿಸುತ್ತಿದೆ. ಶಾಲಾ ಆವರಣದ ಪಾರ್ಕ್‌ ನಿರ್ಮಾಣ, ನೀರಿನ ಕಾರಂಜಿ ನಿರ್ಮಾಣ, ನೀರಿನ ಚಿಲುಮೆಗಳು, ಡಿಜಿಟಲ್‌ ಬೋರ್ಡ್‌ಗಳೆಲ್ಲವೂ ಕುಮಾರ್‌ ಅವರ ಶ್ರಮದ ಫಲವಾಗಿದೆ.ಗ್ರಾಮಸ್ಥರು,ಹಳೆ ವಿದ್ಯಾರ್ಥಿಗಳನ್ನು ಸೇರಿಸುವ ಮೂಲಕ ಸಂಘಟಿಸುವ ಪ್ರಯತ್ನ ಮಾಡಿದ್ದಾರೆ. ಇವರ ಕಾರ‍್ಯ ವೈಖರಿಗೆ ಗ್ರಾಮದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ