ಆ್ಯಪ್ನಗರ

ಸಾವಿರ ಕೋಟಿ ಅನುದಾನ : ಸಿ.ಟಿ.ರವಿ

ಬಿಜೆಪಿ ಸರಕಾರ ಬಂದ ಮೇಲೆ ಒಂದು ಸಾವಿರ ಕೋಟಿ ರೂ.ಗೂ ಅಧಿಕ ಹಣವನ್ನು ಕ್ಷೇತ್ರದ ಅಭಿವೃದ್ಧಿಗಾಗಿ ತಂದಿರುವುದಾಗಿ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

Vijaya Karnataka 10 Aug 2020, 5:00 am
ಚಿಕ್ಕಮಗಳೂರು: ಬಿಜೆಪಿ ಸರಕಾರ ಬಂದ ಮೇಲೆ ಒಂದು ಸಾವಿರ ಕೋಟಿ ರೂ.ಗೂ ಅಧಿಕ ಹಣವನ್ನು ಕ್ಷೇತ್ರದ ಅಭಿವೃದ್ಧಿಗಾಗಿ ತಂದಿರುವುದಾಗಿ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.
Vijaya Karnataka Web thousand crore grant ct ravi
ಸಾವಿರ ಕೋಟಿ ಅನುದಾನ : ಸಿ.ಟಿ.ರವಿ


ತಾಲೂಕಿನ ಕುರುವಂಗಿಯಲ್ಲಿಪಿಎಂಜಿಎಸ್‌ವೈ ಯೋಜನೆಯಲ್ಲಿಮಂಜೂರಾಗಿರುವ ರಸ್ತೆ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕುರುವಂಗಿಗೆ ಬಿಜೆಪಿ ಸಂಘಟನೆ ಮಾಡಲು ಬಂದಾಗಿನಿಂದಲೂ ಈ ಊರನ್ನು ಅಭಿವೃದ್ಧಿ ವಿಚಾರದಲ್ಲಿಕೈಬಿಟ್ಟಿಲ್ಲ. ಇದು ನನಗೆ ತವರೂರಿದ್ದಂತೆ. ಈ ಹಿಂದೆ ಇದ್ದ ಸರಕಾರ ಈ ಊರಿಗೆ ಯಾವುದೇ ಅಭಿವವೃದ್ಧಿ ಕಾಮಗಾರಿ ಮಾಡಿರಲಿಲ್ಲ. ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ ಅಡಿ ಬಿಳೇಕಲ್ಲು, ಕುರುವಂಗಿ, ನೆಟ್ಟೇಕೆರೆಹಳ್ಳಿ ಹಾಗೂ ಮಲ್ಲೇದೇವರಹಳ್ಳಿಗೆ ಸಂಪರ್ಕ ಕಲ್ಪಿಸುವ 5.70 ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ಧಿಗೆ ಇಂದು ಚಾಲನೆ ನೀಡುತ್ತಿದ್ದೇವೆ. ಇದಲ್ಲದೆ ಕೆರೆ ಏರಿ ಅಗಲೀಕರಣ, ದೇವಸ್ಥಾನಕ್ಕೆ ಹಣ, ಬಂಡಿ ಹಳ್ಳಿ ಸಂಪರ್ಕ ರಸ್ತೆಗೆ 30 ಲಕ್ಷ ರೂ., ನೀಡಿದ್ದೇವೆ. ಮೆಡಿಕಲ್‌ ಕಾಲೇಜಿಗೆ 607 ಕೋಟಿ ರೂ., 297 ಕೋಟಿ ರೂ.ವೆಚ್ಚದ ರಸ್ತೆ ಇತರೆ ಎಲ್ಲಸೇರಿ ಒಟ್ಟು 1 ಸಾವಿರ ಕೋಟಿಗೂ ಅಧಿಕ ಮೊತ್ತದ ಹಣ ವಿನಿಯೋಗಿಸುತ್ತಿದ್ದೇವೆ ಹೀಗಾಗಿ ಬಿಜೆಪಿ ಎಂದರೆ ಅಭಿವೃದ್ಧಿ ಎಂದು ಬಣ್ಣಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಪಿಎಂಜಿಸ್‌ವೈ ಯೋಜನೆಯಲ್ಲಿನಮ್ಮ ಜಿಲ್ಲೆಗೆ ಹೆಚ್ಚು ಹಣ ಬಂದಿದೆ.ಇದಕ್ಕೆ ನಮ್ಮ ಶಾಸಕ ಮಿತ್ರರ ಸಹಕಾರವೂ ಇದೆ. ಈ ರಸ್ತೆ ಕಳಪೆ ಆಗದಂತೆ ನೋಡಿಕೊಳ್ಳಬೇಕು. ಕೊರೊನಾ ಬಂದಿರವ ಈ ಸಂದರ್ಭದಲ್ಲಿಎಲ್ಲರೂ ಜಾಗೃತಿ ವಹಿಸಬೇಕು ಎಂದರು.

ಜಿಲ್ಲಾಪಂಚಾಯಿತಿ ಉಪಾಧ್ಯಕ್ಷ ಸೋಮಶೇಖರ್‌, ತಾ.ಪಂ.ಅಧ್ಯಕ್ಷೆ ಶುಭ, ಉಪಾಧ್ಯಕ್ಷೆ ಶಾರದ, ಎಪಿಎಂಸಿ ಅಧ್ಯಕ್ಷ ಶಿವಣ್ಣ, ಮುಖಂಡರಾದ ರಂಗನಾಥ್‌, ವೆಂಕಟೇಶ್‌, ಸಿಡಿಎ ಅಧ್ಯಕ್ಷ ಆನಂದ ಹಾಗೂ ಗ್ರಾ.ಪಂ. ಪ್ರತಿನಿಧಿಗಳು ಉಪಸ್ಥಿತರಿದ್ದರು.

ಅಂತರ ಮರೆತರು:
ಕುರುವಂಗಿಯಲ್ಲಿಏರ್ಪಡಿಸಿದ್ದ ರಸ್ತೆ ಶಂಕುಸ್ಥಾಪನೆ ಸಮಾರಂಭದಲ್ಲಿಭಾಗವಹಿಸಿದ್ದ ಜನ ಮಾಸ್ಕನ್ನೇನೋ ಧರಿಸಿದ್ದರು. ಆದರೆ, ದೈಹಿಕ ಅಂತರ ಕಾಪಾಡಿಕೊಳ್ಳದೆ ವೇದಿಕೆ ಮುಂಭಾಗ ಸಾಲು ಗಟ್ಟಿ ನಿಂತಿದ್ದರು. ಈ ಬಗ್ಗೆ ಸಂಸದೆಶೋಭಾ ಕರಂದ್ಲಾಜೆ ಅವರು ಈ ರೀತಿ ಅಂತರ ಮರೆತು ನಿಲ್ಲುವುದು ನಿಯಮ ಉಲ್ಲಂಘಿಘಿಸಿದಂತಾಗುತ್ತದೆ. ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು. ಮಕ್ಕಳು, ವೃದ್ಧರು, ಕಾಯಿಲೆಯಿಂದ ಬಳಲುತ್ತಿರುವವರಿಗೆ ಕೊರೊನಾ ಬೇಗ ತಗುಲುವುದರಿಂದ ಮುಂಜಾಗ್ರತೆ ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ