ಆ್ಯಪ್ನಗರ

ಮೂರು ದಿನ 6 ರೈಲುಗಳ ಸಂಚಾರ ರದ್ದು

ತಾಲೂಕಿನ ಶಿವನಿ, ಅಜ್ಜಂಪುರ ನಡುವೆ ರೈಲ್ವೆ ಹಳಿ ಕೆಳಗೆ ಮಣ್ಣು ಕುಸಿದ ಪರಿಣಾಮ ಈ ಮಾರ್ಗದಲ್ಲಿ ಸಂಚರಿಸುವ ಒಟ್ಟು 6 ರೈಲುಗಳನ್ನು ಮೂರು ದಿನಗಳ ಕಾಲ ನಿಲುಗಡೆ ಗೊಳಿಸಲಾಗಿದೆ.

Vijaya Karnataka 25 Jun 2019, 6:55 pm
ಕಡೂರು (ಚಿಕ್ಕಮಗಳೂರು): ತಾಲೂಕಿನ ಶಿವನಿ, ಅಜ್ಜಂಪುರ ನಡುವೆ ರೈಲ್ವೆ ಹಳಿ ಕೆಳಗೆ ಮಣ್ಣು ಕುಸಿದ ಪರಿಣಾಮ ಈ ಮಾರ್ಗದಲ್ಲಿ ಸಂಚರಿಸುವ ಒಟ್ಟು 6 ರೈಲುಗಳನ್ನು ಮೂರು ದಿನಗಳ ಕಾಲ ನಿಲುಗಡೆ ಗೊಳಿಸಲಾಗಿದೆ.
Vijaya Karnataka Web three day 6 trains canceled
ಮೂರು ದಿನ 6 ರೈಲುಗಳ ಸಂಚಾರ ರದ್ದು


ಶಿವನಿ- ಅಜ್ಜಂಪುರ ನಡುವಿನ 229/900ರಿಂದ 230/000 ಕಿ.ಮೀ.ನಡುವಿನ ಜಾಗದಲ್ಲಿ ರೈಲು ಹಳಿ ಕೆಳಗಿನ ಮಣ್ಣು ಕುಸಿದಿರುವುದು ಕಂಡು ಬಂದಿದೆ. ರಿಪೇರಿ ಕಾರ್ಯ ಪೂರ್ಣಗೊಳ್ಳುವ ವರೆಗೆ ರೈಲ್ವೆ ಸಂಚಾರ ಸಾಧ್ಯವಿಲ್ಲ ಎಂದು ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪರಿಣಾಮವಾಗಿ ಬೆಂಗಳೂರು ಹುಬ್ಬಳ್ಳಿ ಮತ್ತು ಬೆಂಗಳೂರು ಹೊಸಪೇಟೆ ನಡುವೆ ಸಂಚರಿಸುವ 56909, 56910, 56911, 56912 56913 ಹಾಗೂ 56914 ನಂಬರಿನ ರೈಲುಗಾಡಿಗಳ ಸಂಚಾರವನ್ನು ಜೂನ್‌ 25, 26 ಹಾಗೂ 27ರ ದಿನಾಂಕಕ್ಕೆ ರದ್ದುಪಡಿಸಲಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ. ಶಿವಮೊಗ್ಗ, ಬೆಂಗಳೂರು ನಡುವಿನ ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ