ಆ್ಯಪ್ನಗರ

ಇಂದಿನಿಂದ ಮೂರು ದಿನಗಳ ಕಾಲ ಧಾರ್ಮಿಕ ಪ್ರವಚನ

ಜಗದ್ಗುರು ವಿಶ್ವಾರಾಧ್ಯ ಗುರುಕುಲ ಕಾಶಿ ಮಹಾಪೀಠದ ಶತಮಾನೋತ್ಸವ ಸಮಾರಂಭಕ್ಕೆ ಶುಕ್ರವಾರ ರಾತ್ರಿ ಚಾಲನೆ ಸಿಕ್ಕಿದ್ದು, ಮೂರು ದಿನಗಳ ಕಾಲ ಧಾರ್ಮಿಕ ಸಮಾರಂಭಗಳು ನಡೆಯಲಿವೆ.

Vijaya Karnataka 12 Jan 2019, 5:00 am
ಚಿಕ್ಕಮಗಳೂರು : ಜಗದ್ಗುರು ವಿಶ್ವಾರಾಧ್ಯ ಗುರುಕುಲ ಕಾಶಿ ಮಹಾಪೀಠದ ಶತಮಾನೋತ್ಸವ ಸಮಾರಂಭಕ್ಕೆ ಶುಕ್ರವಾರ ರಾತ್ರಿ ಚಾಲನೆ ಸಿಕ್ಕಿದ್ದು, ಮೂರು ದಿನಗಳ ಕಾಲ ಧಾರ್ಮಿಕ ಸಮಾರಂಭಗಳು ನಡೆಯಲಿವೆ.
Vijaya Karnataka Web ckm-11aragap3


ಧಾರ್ಮಿಕ ಪ್ರವಚನಕ್ಕಾಗಿ ಆಗಮಿಸಿದ ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜಂಗಮವಾಡಿ ಮಠಾಧೀಶ ಡಾ.ಚಂದ್ರಶೇಖರ ಶಿವಾಚಾರ‍್ಯ ಜಗದ್ಗುರುಗಳಿಗೆ ಶುಕ್ರವಾರ ಸಂಜೆ ಅಭೂತಪೂರ್ವ ಸ್ವಾಗತ ನೀಡಲಾಯಿತು. ನಗರದ ಬೋಳರಾಮೇಶ್ವರ ದೇವಾಲಯ ಆವರಣದಲ್ಲಿ ಮಧ್ಯಾಹ್ನದಿಂದಲೇ ಬೇರುಗಂಡಿ ಮಠ, ಶಂಕರಮಠದ ಸ್ವಾಮೀಜಿಗಳು ಸೇರಿದಂತೆ ಹಲವು ಮಠಾಧೀಶರು, ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿದ್ದ ಭಕ್ತರು ಜಮಾಯಿಸಿದ್ದರು.

ಡಾ.ಚಂದ್ರಶೇಖರ ಶಿವಾಚಾರ‍್ಯ ಜಗದ್ಗುರುಗಳು ಆಗಮಿಸುತ್ತಿದ್ದಂತೆ ಮಹಿಳೆಯರು ಆರತಿ ಎತ್ತಿ ಸ್ವಾಗತಿಸಿದರು. ವೀರಗಾಸೆ, ನಾದಸ್ವರ, ನಂದಿಧ್ವಜ, ಗ್ರಾಮೀಣ ವಾದ್ಯಗಳು, ಭಕ್ತರ ಘೋಷಣೆಗಳು ಮೊಳಗಿದವು. ದೇವಾಲಯದೊಳಗೆ ತೆರಳಿ ಪೂಜೆ ಸಲ್ಲಿಸಿದ ಜಗದ್ಗುರುಗಳನ್ನು ಸಾಲಂಕೃತಗೊಂಡ ಸಾರೋಟಿನಲ್ಲಿ ಕುಳ್ಳಿರಿಸಿ ಪಾದಪೂಜೆ ನೆರವೇರಿಸಲಾಯಿತು.

ಕೆ.ಎಂ.ರಸ್ತೆ, ಐ.ಜಿ.ರಸ್ತೆ, ರತ್ನಗಿರಿ ರಸ್ತೆ ಮೂಲಕ ಕಾರ‍್ಯಕ್ರಮ ನಡೆಯುವ ಸ್ಥಳ ಜಗದ್ಗುರು ರೇಣುಕಾಚಾರ‍್ಯ ಸಮುದಾಯ ಭವನದವರೆಗೆ ವಿವಿಧ ಕಲಾ ಪ್ರದರ್ಶನಗಳೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ದಾರಿಯುದ್ದಕ್ಕೂ ನೀರು ಹಾಗೂ ರಂಗವಲ್ಲಿ ಹಾಕಿ ಭಕ್ತರು ಜಗದ್ಗುರುಗಳನ್ನು ಸ್ವಾಗತಿಸಿದರು.

ಜಗದ್ಗುರು ರೇಣುಕಾಚಾರ‍್ಯ ಸಮುದಾಯ ಭವನದಲ್ಲಿ ರಾತ್ರಿ ನಡೆದ ಸಮಾರಂಭದಲ್ಲಿ ಧರ್ಮ ಸಮ್ಮೇಳನ ಹಾಗೂ ಜಗದ್ಗುರು ವಿಶ್ವಾರಾಧ್ಯ ಗುರುಕುಲ ಕಾಶಿ ಮಹಾಪೀಠದ ಶತಮಾನೋತ್ಸವ ಸಮಾರಂಭವನ್ನು ಜಗದ್ಗುರು ರೇಣುಕಾಚಾರ‍್ಯ ಟ್ರಸ್ಟ್‌ ಉಪಾಧ್ಯಕ್ಷೆ ಗೌರಮ್ಮಬಸವೇಗೌಡ ಉದ್ಘಾಟಿಸಿದರು. ವಿವಿಧ ಮಠಾಧೀಶರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ