ಚಿಕ್ಕಮಗಳೂರು : ಭದ್ರಾ ಹುಲಿ ಸಂರಕ್ಷಿತ ಹೆಬ್ಬೆ ವಲಯದ ತೇಗೂರು ಗುಡ್ಡದ ಬಳಿ ಗಬ್ಬದ ಹುಲಿ, ಹೊಟ್ಟೆಯೊಳಗಿದ್ದ ಎರಡು ಮರಿಗಳು ಮೃತಪಟ್ಟಿವೆ.
ಸುಮಾರು ಎಂಟು ವರ್ಷದ ಹುಲಿಯ ಬೆನ್ನಿನ ಮೇಲೆ ಸಣ್ಣ ಪ್ರಮಾಣದ ಗಾಯದ ಗುರುತುಗಳು ಕಂಡುಬಂದಿವೆ. ದೇಹದ ಎಡಭಾಗ ಕೊಳೆತಿದ್ದು, ಎರಡು ಮರಿಗಳೂ ತಾಯಿಯ ಹೊಟ್ಟೆಯಲ್ಲೇ ಮೃತಪಟ್ಟಿರುವುದು ಕಂಡುಬಂದಿದೆ.
ಮರಣೋತ್ತರ ಪರೀಕ್ಷೆ ಸಂದರ್ಭ ಹುಲಿಯ ಹೊಟ್ಟೆಯೊಳಗೆ ದನದ ಮಾಂಸ, ದನಗಳ ಕಿವಿಗೆ ಹಾಕುವ ಪ್ಲಾಸ್ಟಿಕ್ ಓಲೆ ಸಿಕ್ಕಿದ್ದು, ವಿಷಪ್ರಾಶನದಿಂದ ಮೃತಪಟ್ಟಿರುವ ಶಂಕೆ ಮೂಡಿದೆ. ಹೆಬ್ಬೆ ವಲಯದಲ್ಲಿ ಎರಡು ವರ್ಷಗಳ ಹಿಂದೆ ಎರಡು ಹುಲಿಗಳು ಪರಸ್ಪರ ಕಾದಾಟದಲ್ಲಿ ಮೃತಪಟ್ಟಿದ್ದವು.
ಪಶು ವೈದ್ಯಾಧಿಕಾರಿ ವಿನಯ್, ಜಯರಾಮ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅರಣ್ಯ ಸಂರಕ್ಷಣಾಧಿಕಾರಿ ಧನಂಜಯ, ಹೆಬ್ಬೆ ವಲಯ ಅರಣ್ಯಾಧಿಕಾರಿ ಮಂಜುನಾಥ್, ವೈಲ್ಡ್ಲೈಫ್ ವಾರ್ಡನ್ ಹೊನ್ನಾಳು ಸತೀಶ್, ಮಹೇಂದ್ರ ಜೈನ್ ಸಮ್ಮುಖದಲ್ಲಿ ಕಳೇಬರವನ್ನು ದಹನ ಮಾಡಲಾಯಿತು.
ಸುಮಾರು ಎಂಟು ವರ್ಷದ ಹುಲಿಯ ಬೆನ್ನಿನ ಮೇಲೆ ಸಣ್ಣ ಪ್ರಮಾಣದ ಗಾಯದ ಗುರುತುಗಳು ಕಂಡುಬಂದಿವೆ. ದೇಹದ ಎಡಭಾಗ ಕೊಳೆತಿದ್ದು, ಎರಡು ಮರಿಗಳೂ ತಾಯಿಯ ಹೊಟ್ಟೆಯಲ್ಲೇ ಮೃತಪಟ್ಟಿರುವುದು ಕಂಡುಬಂದಿದೆ.
ಮರಣೋತ್ತರ ಪರೀಕ್ಷೆ ಸಂದರ್ಭ ಹುಲಿಯ ಹೊಟ್ಟೆಯೊಳಗೆ ದನದ ಮಾಂಸ, ದನಗಳ ಕಿವಿಗೆ ಹಾಕುವ ಪ್ಲಾಸ್ಟಿಕ್ ಓಲೆ ಸಿಕ್ಕಿದ್ದು, ವಿಷಪ್ರಾಶನದಿಂದ ಮೃತಪಟ್ಟಿರುವ ಶಂಕೆ ಮೂಡಿದೆ. ಹೆಬ್ಬೆ ವಲಯದಲ್ಲಿ ಎರಡು ವರ್ಷಗಳ ಹಿಂದೆ ಎರಡು ಹುಲಿಗಳು ಪರಸ್ಪರ ಕಾದಾಟದಲ್ಲಿ ಮೃತಪಟ್ಟಿದ್ದವು.
ಪಶು ವೈದ್ಯಾಧಿಕಾರಿ ವಿನಯ್, ಜಯರಾಮ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅರಣ್ಯ ಸಂರಕ್ಷಣಾಧಿಕಾರಿ ಧನಂಜಯ, ಹೆಬ್ಬೆ ವಲಯ ಅರಣ್ಯಾಧಿಕಾರಿ ಮಂಜುನಾಥ್, ವೈಲ್ಡ್ಲೈಫ್ ವಾರ್ಡನ್ ಹೊನ್ನಾಳು ಸತೀಶ್, ಮಹೇಂದ್ರ ಜೈನ್ ಸಮ್ಮುಖದಲ್ಲಿ ಕಳೇಬರವನ್ನು ದಹನ ಮಾಡಲಾಯಿತು.