ಆ್ಯಪ್ನಗರ

ಹುಲಿಗೆ ಎರಡು ಸಿಂದಿ ಹಸು ಬಲಿ

ಚನ್ನಗೊಂಡನಹಳ್ಳಿ ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿ ವ್ಯಾಘ್ರನ ಕಾಟ ವಿಪರೀತವಾಗಿದ್ದು ಜನರು ಭಯಭೀತಿಗೊಂಡಿದ್ದಾರೆ.

Vijaya Karnataka 6 Dec 2018, 5:00 am
ಚಿಕ್ಕಮಗಳೂರು: ಚನ್ನಗೊಂಡನಹಳ್ಳಿ ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿ ವ್ಯಾಘ್ರನ ಕಾಟ ವಿಪರೀತವಾಗಿದ್ದು ಜನರು ಭಯಭೀತಿಗೊಂಡಿದ್ದಾರೆ.
Vijaya Karnataka Web tiger killed two cows
ಹುಲಿಗೆ ಎರಡು ಸಿಂದಿ ಹಸು ಬಲಿ


ಕಾಫಿತೋಟದಲ್ಲಿ ಇತ್ತೀಚೆಗೆ ಮೇಯುತ್ತಿದ್ದ ಎರಡು ಸಿಂದಿ ಹಸುಗಳನ್ನು ಹುಲಿ ಹಿಡಿದು ಕೊಂದಿದೆ. ಅದರಲ್ಲಿ ಒಂದು ಗರ್ಭಧರಿಸಿದ್ದ ಹಸುವಾಗಿದ್ದು, ಅರ್ಧಂಬರ್ಧ ಕೊಳೆತ ಸ್ಥಿತಿಯಲ್ಲಿ ಕಳೇಬರ ಪತ್ತೆಯಾಗಿದೆ.

ಈ ಎರಡೂ ಹಸುಗಳು ಚನ್ನಗೊಂಡನಹಳ್ಳಿಯ ಸಿ.ವಿ.ಶಿವರುದ್ರಪ್ಪ ಎಂಬುವವರಿಗೆ ಸೇರಿದ್ದವು. ಗ್ರಾಮಸ್ಥರ ಮನವಿ ಹಿನ್ನೆಲೆಯಲ್ಲಿ ವಲಯ ಅರಣ್ಯಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಹತ್ತಾರು ಸಾವಿರ ರೂ. ಬೆಲೆ ಬಾಳುವ ಹಸುಗಳನ್ನು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಸರಕಾರವನ್ನು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ