ಆ್ಯಪ್ನಗರ

ಚಿಕ್ಕಮಗಳೂರಿನಲ್ಲಿ ಹುಲಿ ಉಗುರು ಮಾರಾಟ ಯತ್ನ

ಚಿಕ್ಕಮಗಳೂರು ಜಿಲ್ಲೆಯ ಹುಕ್ಕುಂದ ಗ್ರಾಮದ ಕಾಫಿ ತೋಟದಲ್ಲಿ ಉರುಳು ಹಾಕಿ ಹುಲಿಯನ್ನು ಕೊಲ್ಲಲಾಗಿತ್ತು. ನಂತರ ಅದರಲ್ಲಿ 2 ಉಗುರನ್ನು ಮಾರಾಟ ಮಾಡಿಕೊಡಲು ಸ್ಥಳೀಯರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರ ಯಶಸ್ವಿ ಕಾರ್ಯಾಚರಣೆಯಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.

Vijaya Karnataka 28 Oct 2021, 11:16 pm
ಚಿಕ್ಕಮಗಳೂರು: ನಗರದಲ್ಲಿ ಸಕ್ರಿಯವಾಗಿದ್ದ ಹುಲಿ ಉಗುರು ಮಾರಾಟ ಜಾಲವನ್ನು ಪತ್ತೆ ಹಚ್ಚುವಲ್ಲಿ ಅರಣ್ಯ ಇಲಾಖೆಯ ಸಂಚಾರಿ ಅರಣ್ಯ ವಲಯ ಅರಣ್ಯಾಧಿಕಾರಿ ತಂಡ ಯಶಸ್ವಿಯಾಗಿದೆ.
Vijaya Karnataka Web ಪೊಲೀಸ್‌
ಪೊಲೀಸ್‌


ಅರಣ್ಯ ಸಂಚಾರಿ ದಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್‌ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ್‌ ಮತ್ತು ಅರಣ್ಯಾಧಿಕಾರಿ ವೆಂಕಟೇಶ್‌ ತಂಡ ಹುಲಿ ಉಗುರು ಮಾರಾಟ ಮಾಡಲು ಯತ್ನಿಸುತ್ತಿದ್ದ.

ದನಗಳ್ಳರ ಹಾವಳಿಗೆ ಚಿಕ್ಕಮಗಳೂರಿನ ಅಜ್ಜಿಯ ಬದುಕು ಅತಂತ್ರ..! ಎರಡ್ಮೂರು ತಿಂಗಳಲ್ಲೇ ನಾಲ್ಕು ಹಸು ಕಳ್ಳತನ

ಚಿಕ್ಕಮಗಳೂರು ಜಿಲ್ಲೆಯ ಕಲ್ಲದೊಡ್ಡಿಯ ಇಂದ್ರನಗರದ ವಾಸಿ ಶೇಖರ್‌ ಹಕ್ಕಿಪಿಕ್ಕಿ ಎಂಬ ಆಸಾಮಿಯನ್ನು ಹಿರೇಕೊಳಲೆ ರಸ್ತೆಯಲ್ಲಿ ಬಂಧಿಸಿ 2 ಹುಲಿ ಉಗುರು, ಒಂದು ಮೊಬೈಲ್‌ ವಶಪಡಿಸಿಕೊಂಡಿದ್ದಾರೆ. ಹುಲಿ ಉಗುರನ್ನು ಮಾರಾಟಕ್ಕೆ ನೀಡಿದ್ದ ಹುಕ್ಕುಂದ ಗ್ರಾಮದ ಸುಂದರ ತಲೆಮರೆಸಿಕೊಂಡಿದ್ದಾನೆ.

ಹುಕ್ಕುಂದ ಗ್ರಾಮದ ಕಾಫಿ ತೋಟದಲ್ಲಿ ಉರುಳು ಹಾಕಿ ಹುಲಿ ಕೊಂದಿದ್ದ ಸುಂದರ, ಅದರಲ್ಲಿ 2 ಉಗುರನ್ನು ಶೇಖರ ಹಕ್ಕಿಪಿಕ್ಕಿ ಎಂಬುವವನಿಗೆ ಮಾರಾಟ ಮಾಡಿಕೊಡಲು ನೀಡಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಸಿಕ್ಕಿದೆ.
ಚಿಕ್ಕಮಗಳೂರಿನಲ್ಲಿ ಪ್ರಗತಿಗೆ ಕಾದಿವೆ 512 ಶಾಲೆ; 700 ಶಾಲೆಗಳಲ್ಲಿ 188ಕ್ಕೆ ಮಾತ್ರ ಪುನಶ್ಚೇತನ!
ಈ ಸಂಬಂಧ ತಲೆ ತಪ್ಪಿಸಿಕೊಂಡ ಸುಂದರನ ಪತ್ತೆಗೆ ಕಾರ್ಯಾಚರಣೆ ನೆಡೆಸಲು ಇಲಾಖೆ ಉನ್ನತ ಅಧಿಕಾರಿಗಳು ಮುಂದಾಗಿದ್ದಾರೆ. ಅವನ ಸೆರೆ ಹಿಡಿದ ನಂತರವಷ್ಟೇ ಹುಲಿ ಹತ್ಯೆ ವಿಚಾರ ತಿಳಿಯಲಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧಿತ ಶೇಖರನನ್ನು ನ್ಯಾಯಾಲಕ್ಕೆ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ವೆಂಕಟೇಶ್‌, ಉಪ ವಲಯ ಅರಣ್ಯಾಧಿಕಾರಿಗಳಾದ ನಂದೀಶ್‌, ದಿನೇಶ್‌, ಅಶ್ವಥ್‌, ನಾರಾಯಣ, ವೆಂಕಟೇಶ್‌ ಅರಣ್ಯ ರಕ್ಷಕರಾದ ಹೇಮಂತ್‌, ಕುಮಾರಸ್ವಾಮಿ, ಜಯಪ್ರಕಾಶ್‌, ಈಶ್ವರ್‌ ಮತ್ತು ವಾಹನ ಚಾಲಕ ಸುನಿಲ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ