ಚಿಕ್ಕಮಗಳೂರು : ತಾಲೂಕಿನ ಪಂಡರವಳ್ಳಿಯ ಕಾಫಿ ತೋಟವೊಂದಕ್ಕೆ ಟಿಂಬರ್ ಕೆಲಸಕ್ಕೆ ಕೇರಳದಿಂದ ಅಕ್ರಮವಾಗಿ ತರಿಸಿಕೊಂಡಿದ್ದ ಆನೆಯನ್ನು ವಾಪಸ್ ಕಳಿಸಿದ್ದು, ಆರೋಪಿ ಮಾಲೀಕನ ವಿರುದ್ಧ ಕ್ರಮ ಜರುಗಿಸದೆ ಒತ್ತಡಕ್ಕೆ ಮಣಿದು ರಕ್ಷಿಸಲಾಗಿದೆ ಎಂದು ಭದ್ರಾ ವೈಲ್ಡ್ಲೈಫ್ ಕನ್ಸರ್ವೇಷನ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಡಿ.ವಿ.ಗಿರೀಶ್, ವೈಲ್ಡ್ಕ್ಯಾಟ್-ಸಿ ಸಂಘಟನೆಯ ಶ್ರೀದೇವ್ ಹುಲಿಕೆರೆ, ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ.ವೀರೇಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ ಆರೋಪಿಸಿದ್ದಾರೆ.
ಟಿಂಬರ್ ಕೆಲಸಕ್ಕೆ ಅಕ್ರಮವಾಗಿ ಕೇರಳದಿಂದ ಆನೆ ತರುತ್ತಿರುವ ಬಗ್ಗೆ ಪರಿಸರಾಸಕ್ತರು ನೀಡಿದ ಮಾಹಿತಿ ಮೇರೆಗೆ ಆನೆ ಮತ್ತು ಲಾರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು. ಮೂಲತಃ ಅಸ್ಸಾಂ ರಾಜ್ಯಕ್ಕೆ ಸೇರಿದ ಆನೆಯ ಮಾಲೀಕ ಜೊನೊರಾಂ ಬಹುರಾ ಆಗಿದ್ದು, ಆನೆಯ ಗುರುತಿಸುವಿಕೆಗೆ ಮೈಕ್ರೊ ಚಿಪ್ ಕೂಡ ಅಳವಡಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದರೆ, ಆನೆಯ ಮಾಲೀಕರು ತಾವು ಎಂದು ಹೇಳಿಕೊಂಡು ಕೇರಳದ ಪಿ.ಕೋಯ ಮತ್ತು ಸೈದಲಿ ಕುಟ್ಟಿ ಎಂಬುವರು ಚಿಕ್ಕಮಗಳೂರಿಗೆ ತಂದಿದ್ದರು. ಆದರೆ, ಆನೆಯ ಮೂಲ ಮಾಲೀಕನ ಮೇಲಾಗಲಿ, ಮಾಲೀಕರು ಎಂದು ಹೇಳುತ್ತಿರುವ ಕೋಯ ಮತ್ತು ಸೈದಲಿ ಕುಟ್ಟಿಯ ಮೇಲಾಗಲಿ ದೂರು ದಾಖಲಿಸದೆ ಮಾವುತ ಮತ್ತು ಲಾರಿ ಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ. ಅರಣ್ಯಾಧಿಕಾರಿಗಳು ಆನೆ ಮಾಲೀಕರನ್ನು ಪ್ರಕರಣದಿಂದ ಕೈಬಿಟ್ಟಿದ್ದಾರೆ ಎಂದಿದ್ದಾರೆ.
ಅಸ್ಸಾಂನಿಂದ ಆನೆಯನ್ನು ಕೇರಳಕ್ಕೆ ತರುವ ಬಗ್ಗೆ ಯಾವುದೇ ಮಾರಾಟ ಪತ್ರಗಳು, ಆನೆ ಸಾಗಣೆ ಅನುಮತಿ ಪತ್ರ ಕೂಡ ಇಲ್ಲ. ನಕಲಿ ದಾಖಲೆ ಸೃಷ್ಟಿಸಿ ಆನೆಯನ್ನು ಕೇರಳದಲ್ಲಿ ಇಟ್ಟುಕೊಂಡು ಟಿಂಬರ್ ಕೆಲಸ ನಿರ್ವಹಿಸಲು ಕರ್ನಾಟಕಕ್ಕೆ ತರಲಾಗಿದೆ. ಇದೊಂದು ದೊಡ್ಡ ಪ್ರಕರಣವಾಗಿದ್ದು, ಸಂಪೂರ್ಣ ತನಿಖೆ ನಡೆಸಬೇಕಿದ್ದ ಅಧಿಕಾರಿಗಳೇ ಆನೆಯನ್ನು ಜೂನ್ 30ರಂದು ಮಧ್ಯರಾತ್ರಿ ಯಾರಿಗೂ ತಿಳಿಯದಂತೆ ಮತ್ತಾವರ ಮಾಹಿತಿ ಕೇಂದ್ರದಿಂದ ಕೇರಳಕ್ಕೆ ಅದೇ ಲಾರಿಯಲ್ಲಿ ಕಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಆನೆಯನ್ನು ಪುನರ್ವಸತಿ ಕೇಂದ್ರಕ್ಕೆ ಕಳಿಸಿ ಅಕ್ರಮ ಜಾಲದಿಂದ ಅದನ್ನು ಪಾರು ಮಾಡಬೇಕು. ಪ್ರಕರಣದ ಬಗ್ಗೆ ಉನ್ನತ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಲಾಗಿತ್ತು. ಆದರೆ, ರಾಜಕೀಯ ಮತ್ತು ಟಿಂಬರ್ ಮಾಫಿಯಾದ ಪ್ರಭಾವಕ್ಕೆ ಕಟ್ಟುಬಿದ್ದು, ಅರಣ್ಯಾಧಿಕಾರಿಗಳು ಆನೆಯನ್ನು ಸೂಕ್ತ ದಾಖಲೆಗಳಿಲ್ಲದ ವ್ಯಕ್ತಿಗಳ ಜತೆ ಕಳಿಸಿರುವುದು ಖಂಡನೀಯ. ಆನೆ ಕಳ್ಳಸಾಗಣೆ ದಂಧೆಕೋರರು ಮತ್ತು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪ್ರಕರಣ ಕೈಬಿಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಟಿಂಬರ್ ಕೆಲಸಕ್ಕೆ ಅಕ್ರಮವಾಗಿ ಕೇರಳದಿಂದ ಆನೆ ತರುತ್ತಿರುವ ಬಗ್ಗೆ ಪರಿಸರಾಸಕ್ತರು ನೀಡಿದ ಮಾಹಿತಿ ಮೇರೆಗೆ ಆನೆ ಮತ್ತು ಲಾರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು. ಮೂಲತಃ ಅಸ್ಸಾಂ ರಾಜ್ಯಕ್ಕೆ ಸೇರಿದ ಆನೆಯ ಮಾಲೀಕ ಜೊನೊರಾಂ ಬಹುರಾ ಆಗಿದ್ದು, ಆನೆಯ ಗುರುತಿಸುವಿಕೆಗೆ ಮೈಕ್ರೊ ಚಿಪ್ ಕೂಡ ಅಳವಡಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದರೆ, ಆನೆಯ ಮಾಲೀಕರು ತಾವು ಎಂದು ಹೇಳಿಕೊಂಡು ಕೇರಳದ ಪಿ.ಕೋಯ ಮತ್ತು ಸೈದಲಿ ಕುಟ್ಟಿ ಎಂಬುವರು ಚಿಕ್ಕಮಗಳೂರಿಗೆ ತಂದಿದ್ದರು. ಆದರೆ, ಆನೆಯ ಮೂಲ ಮಾಲೀಕನ ಮೇಲಾಗಲಿ, ಮಾಲೀಕರು ಎಂದು ಹೇಳುತ್ತಿರುವ ಕೋಯ ಮತ್ತು ಸೈದಲಿ ಕುಟ್ಟಿಯ ಮೇಲಾಗಲಿ ದೂರು ದಾಖಲಿಸದೆ ಮಾವುತ ಮತ್ತು ಲಾರಿ ಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ. ಅರಣ್ಯಾಧಿಕಾರಿಗಳು ಆನೆ ಮಾಲೀಕರನ್ನು ಪ್ರಕರಣದಿಂದ ಕೈಬಿಟ್ಟಿದ್ದಾರೆ ಎಂದಿದ್ದಾರೆ.
ಅಸ್ಸಾಂನಿಂದ ಆನೆಯನ್ನು ಕೇರಳಕ್ಕೆ ತರುವ ಬಗ್ಗೆ ಯಾವುದೇ ಮಾರಾಟ ಪತ್ರಗಳು, ಆನೆ ಸಾಗಣೆ ಅನುಮತಿ ಪತ್ರ ಕೂಡ ಇಲ್ಲ. ನಕಲಿ ದಾಖಲೆ ಸೃಷ್ಟಿಸಿ ಆನೆಯನ್ನು ಕೇರಳದಲ್ಲಿ ಇಟ್ಟುಕೊಂಡು ಟಿಂಬರ್ ಕೆಲಸ ನಿರ್ವಹಿಸಲು ಕರ್ನಾಟಕಕ್ಕೆ ತರಲಾಗಿದೆ. ಇದೊಂದು ದೊಡ್ಡ ಪ್ರಕರಣವಾಗಿದ್ದು, ಸಂಪೂರ್ಣ ತನಿಖೆ ನಡೆಸಬೇಕಿದ್ದ ಅಧಿಕಾರಿಗಳೇ ಆನೆಯನ್ನು ಜೂನ್ 30ರಂದು ಮಧ್ಯರಾತ್ರಿ ಯಾರಿಗೂ ತಿಳಿಯದಂತೆ ಮತ್ತಾವರ ಮಾಹಿತಿ ಕೇಂದ್ರದಿಂದ ಕೇರಳಕ್ಕೆ ಅದೇ ಲಾರಿಯಲ್ಲಿ ಕಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಆನೆಯನ್ನು ಪುನರ್ವಸತಿ ಕೇಂದ್ರಕ್ಕೆ ಕಳಿಸಿ ಅಕ್ರಮ ಜಾಲದಿಂದ ಅದನ್ನು ಪಾರು ಮಾಡಬೇಕು. ಪ್ರಕರಣದ ಬಗ್ಗೆ ಉನ್ನತ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಲಾಗಿತ್ತು. ಆದರೆ, ರಾಜಕೀಯ ಮತ್ತು ಟಿಂಬರ್ ಮಾಫಿಯಾದ ಪ್ರಭಾವಕ್ಕೆ ಕಟ್ಟುಬಿದ್ದು, ಅರಣ್ಯಾಧಿಕಾರಿಗಳು ಆನೆಯನ್ನು ಸೂಕ್ತ ದಾಖಲೆಗಳಿಲ್ಲದ ವ್ಯಕ್ತಿಗಳ ಜತೆ ಕಳಿಸಿರುವುದು ಖಂಡನೀಯ. ಆನೆ ಕಳ್ಳಸಾಗಣೆ ದಂಧೆಕೋರರು ಮತ್ತು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪ್ರಕರಣ ಕೈಬಿಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದಿದ್ದಾರೆ.