ಕಡೂರು : ಮೆಸ್ಕಾಂ ಇಲಾಖೆ ಕಾರ್ಯವೈಖರಿ ಕುರಿತು ಮಂಗಳವಾರ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ಖಂಡಿಸಿದರು.
ತಾ.ಪಂ. ಅಧ್ಯಕ್ಷೆ ರೇಣುಕಾ ಉಮೇಶ್ ಅಧ್ಯಕ್ಷ ತೆ ವಹಿಸಿದ್ದರು. ಸದಸ್ಯರಾದ ದೇವರಾಜನಾಯ್ಕ, ಅಕ್ಷ ಯ್ಕುಮಾರ್ ಇಲಾಖೆಯ ಕೆಲಸ ಕುರಿತು ತೀವ್ರವಾಗಿ ಖಂಡಿಸಿ ನಿಯಮಿತವಾಗಿ ವಿದ್ಯುತ್ ಸರಬರಾಜು ಮಾಡದಿರುವುದು, ಕುಡಿಯುವ ನೀರು ಪೂರೈಕೆಯ ಕಾಮಗಾರಿಗೆ ಅನಗತ್ಯ ವಿಳಂಬ ಮಾಡುವುದು ಸೇರಿದಂತೆ ಹಲವು ವಿಷಯ ಕುರಿತು ಗಂಭೀರ ಆರೋಪ ಮಾಡಿದರು.
ಇದಕ್ಕೆ ಮಹಿಳಾ ಸದಸ್ಯೆಯರಾದ ಸವಿತಾಆನಂದ್, ಕವಿತಾ ಜಗದೀಶ್, ಶ್ವೇತಾ ಆನಂದ್, ಸವಿತಾ ಕಲ್ಲೇಶಪ್ಪ ಮುಂತಾದವರು ಧ್ವನಿಗೂಡಿಸಿ ಇಲಾಖೆಯ ದೂರು ವಿಭಾಗಕ್ಕೆ ಕರೆ ಮಾಡಿದರೆ ಯಾವಾಗಲು ದೂರವಾಣಿ ತೆಗೆದು ಉತ್ತರಿಸುವುದೇ ಇಲ್ಲ. ಗ್ರಾಮಾಂತರ ಭಾಗದಲ್ಲಿ ಬೇರೆ ಬೇರೆ ವಿದ್ಯುತ್ ಸಮಸ್ಯೆ ತಲೆದೋರಿದರೆ ಅದಕ್ಕೂ ಸ್ಪಂದನೆ ಇಲ್ಲ ಎಂದು ಟೀಕಿಸಿದರು.
ಮೆಸ್ಕಾಂ ಎಂಜಿನಿಯರ್ ಕೃಷ್ಣಮೂರ್ತಿ ಮಾತನಾಡಿ, ಮಳೆಗಾಲದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ಸಿಬ್ಬಂದಿ ದುರಸ್ತಿ ಕಾರ್ಯಕ್ಕೆ ತೆರಳಿದ ಸಂದರ್ಭ ಕೆಲವೊಮ್ಮೆ ದೂರವಾಣಿ ಸ್ವೀಕರಿಸದಿರಬಹುದು ಇದಕ್ಕಾಗಿ ವಿಷಾದಿಸುತ್ತೇವೆ ಎಂದ ಅವರು ಕುಡಿಯುವ ಪೂರೈಕೆಯ ಯೋಜನೆಗಳಿಗೆ ತುರ್ತಾಗಿ ವಿದ್ಯುತ್ ಒದಗಿಸಲು ಇಲಾಖೆ ಸಿದ್ಧವಿದೆ, ಅದರೆ ಅರ್ಜಿ ಬಾರದೆ ವಿಳಂಬವಾಗುತ್ತಿದೆ ಎಂದರು.
ಕೃಷಿಭಾಗ್ಯ ಯೋಜನೆಯಡಿ ಟಾರ್ಪಲಿನ್, ಕೃಷಿ ಹೊಂಡ, ಸ್ಟ್ರಿಂಕ್ಲರ್ ಮುಂತಾದ ಸವಲತ್ತು ನೀಡುವಲ್ಲಿ ಇಲಾಖೆ ಪ್ರಾಮಾಣಿಕವಾಗಿ ಕೆಲಸಮಾಡಲಿ ಎಂದು ಸದಸ್ಯ ಆನಂದನಾಯ್ಕ ಹೇಳಿದರೆ ಹೋಬಳಿಗೆ ಒಬ್ಬ ರೈತನಿಗೆ ಮಾತ್ರ ಟಾರ್ಪಲಿನ್ ನೀಡಲಾಗುತ್ತಿದೆ. ಹೆಚ್ಚಿನ ಟಾರ್ಪಲಿನ್ ವಿತರಣೆಗೆ ಸಭೆ ನಿರ್ಣಯಮಾಡಲಿ ಎಂದು ಒತ್ತಾಯಿಸಿದರು.
ಸದಸ್ಯೆ ಗೌರಮ್ಮ ಮಾತನಾಡಿ, ಕೃಷಿ ಯಂತ್ರೋಪಕರಣ ನೀಡಲು ಲಾಟರಿ ಪದ್ಧತಿ ಅನುಸರಿಸಲಾಗುತ್ತಿದೆ.ಇದನ್ನು ಕೈಬಿಟ್ಟು ಜ್ಯೆಷ್ಠತೆ ಆಧಾರದ ಮೇಲೆ ಯಂತ್ರೋಪಕರಣ ನೀಡಲಿ. ಒಂದೇ ಮನೆಯಲ್ಲಿ ಇಬ್ಬರಿಗೆ ಯಂತ್ರೋಪಕರಣ ನೀಡುವುದು ಬೇಡ ಒತ್ತಾಯಿಸಿದರು. ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆಯ ಮೂಲಕ ವಿದ್ಯಾರ್ಥಿವೇತನ ನೀಡಲು ಅರ್ಜಿ ಸಲ್ಲಿಕೆಗೆ ಬಹಳ ಸಮಸ್ಯೆ ಉದ್ಭವವಾಗಿದೆ. ವಿದ್ಯಾರ್ಥಿಗಳು, ಶಿಕ್ಷ ಕರು ಮತ್ತಿತರ ಸಿಬ್ಬಂದಿ ಅರ್ಜಿ ಸಲ್ಲಿಕೆಗಾಗಿ ಸೈಬರ್ ಸೆಂಟರ್ ಆಥವಾ ಇನ್ನಿತರ ಕಂಪ್ಯೂಟರ್ ಕೇಂದ್ರಗಳ ಬಳಿ ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಬಹುತೇಕ ಸದಸ್ಯರು ಆರೋಪಿಸಿದರು. ತಾ.ಪಂ.ಉಪಾಧ್ಯಕ್ಷ ದಾಸಯ್ಯನ ಗುತ್ತಿ ಚಂದ್ರಪ್ಪ, ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ಡಾ.ದೇವರಾಜನಾಯ್ಕ ಇದ್ದರು.
ತಾ.ಪಂ. ಅಧ್ಯಕ್ಷೆ ರೇಣುಕಾ ಉಮೇಶ್ ಅಧ್ಯಕ್ಷ ತೆ ವಹಿಸಿದ್ದರು. ಸದಸ್ಯರಾದ ದೇವರಾಜನಾಯ್ಕ, ಅಕ್ಷ ಯ್ಕುಮಾರ್ ಇಲಾಖೆಯ ಕೆಲಸ ಕುರಿತು ತೀವ್ರವಾಗಿ ಖಂಡಿಸಿ ನಿಯಮಿತವಾಗಿ ವಿದ್ಯುತ್ ಸರಬರಾಜು ಮಾಡದಿರುವುದು, ಕುಡಿಯುವ ನೀರು ಪೂರೈಕೆಯ ಕಾಮಗಾರಿಗೆ ಅನಗತ್ಯ ವಿಳಂಬ ಮಾಡುವುದು ಸೇರಿದಂತೆ ಹಲವು ವಿಷಯ ಕುರಿತು ಗಂಭೀರ ಆರೋಪ ಮಾಡಿದರು.
ಇದಕ್ಕೆ ಮಹಿಳಾ ಸದಸ್ಯೆಯರಾದ ಸವಿತಾಆನಂದ್, ಕವಿತಾ ಜಗದೀಶ್, ಶ್ವೇತಾ ಆನಂದ್, ಸವಿತಾ ಕಲ್ಲೇಶಪ್ಪ ಮುಂತಾದವರು ಧ್ವನಿಗೂಡಿಸಿ ಇಲಾಖೆಯ ದೂರು ವಿಭಾಗಕ್ಕೆ ಕರೆ ಮಾಡಿದರೆ ಯಾವಾಗಲು ದೂರವಾಣಿ ತೆಗೆದು ಉತ್ತರಿಸುವುದೇ ಇಲ್ಲ. ಗ್ರಾಮಾಂತರ ಭಾಗದಲ್ಲಿ ಬೇರೆ ಬೇರೆ ವಿದ್ಯುತ್ ಸಮಸ್ಯೆ ತಲೆದೋರಿದರೆ ಅದಕ್ಕೂ ಸ್ಪಂದನೆ ಇಲ್ಲ ಎಂದು ಟೀಕಿಸಿದರು.
ಮೆಸ್ಕಾಂ ಎಂಜಿನಿಯರ್ ಕೃಷ್ಣಮೂರ್ತಿ ಮಾತನಾಡಿ, ಮಳೆಗಾಲದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ಸಿಬ್ಬಂದಿ ದುರಸ್ತಿ ಕಾರ್ಯಕ್ಕೆ ತೆರಳಿದ ಸಂದರ್ಭ ಕೆಲವೊಮ್ಮೆ ದೂರವಾಣಿ ಸ್ವೀಕರಿಸದಿರಬಹುದು ಇದಕ್ಕಾಗಿ ವಿಷಾದಿಸುತ್ತೇವೆ ಎಂದ ಅವರು ಕುಡಿಯುವ ಪೂರೈಕೆಯ ಯೋಜನೆಗಳಿಗೆ ತುರ್ತಾಗಿ ವಿದ್ಯುತ್ ಒದಗಿಸಲು ಇಲಾಖೆ ಸಿದ್ಧವಿದೆ, ಅದರೆ ಅರ್ಜಿ ಬಾರದೆ ವಿಳಂಬವಾಗುತ್ತಿದೆ ಎಂದರು.
ಕೃಷಿಭಾಗ್ಯ ಯೋಜನೆಯಡಿ ಟಾರ್ಪಲಿನ್, ಕೃಷಿ ಹೊಂಡ, ಸ್ಟ್ರಿಂಕ್ಲರ್ ಮುಂತಾದ ಸವಲತ್ತು ನೀಡುವಲ್ಲಿ ಇಲಾಖೆ ಪ್ರಾಮಾಣಿಕವಾಗಿ ಕೆಲಸಮಾಡಲಿ ಎಂದು ಸದಸ್ಯ ಆನಂದನಾಯ್ಕ ಹೇಳಿದರೆ ಹೋಬಳಿಗೆ ಒಬ್ಬ ರೈತನಿಗೆ ಮಾತ್ರ ಟಾರ್ಪಲಿನ್ ನೀಡಲಾಗುತ್ತಿದೆ. ಹೆಚ್ಚಿನ ಟಾರ್ಪಲಿನ್ ವಿತರಣೆಗೆ ಸಭೆ ನಿರ್ಣಯಮಾಡಲಿ ಎಂದು ಒತ್ತಾಯಿಸಿದರು.
ಸದಸ್ಯೆ ಗೌರಮ್ಮ ಮಾತನಾಡಿ, ಕೃಷಿ ಯಂತ್ರೋಪಕರಣ ನೀಡಲು ಲಾಟರಿ ಪದ್ಧತಿ ಅನುಸರಿಸಲಾಗುತ್ತಿದೆ.ಇದನ್ನು ಕೈಬಿಟ್ಟು ಜ್ಯೆಷ್ಠತೆ ಆಧಾರದ ಮೇಲೆ ಯಂತ್ರೋಪಕರಣ ನೀಡಲಿ. ಒಂದೇ ಮನೆಯಲ್ಲಿ ಇಬ್ಬರಿಗೆ ಯಂತ್ರೋಪಕರಣ ನೀಡುವುದು ಬೇಡ ಒತ್ತಾಯಿಸಿದರು. ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆಯ ಮೂಲಕ ವಿದ್ಯಾರ್ಥಿವೇತನ ನೀಡಲು ಅರ್ಜಿ ಸಲ್ಲಿಕೆಗೆ ಬಹಳ ಸಮಸ್ಯೆ ಉದ್ಭವವಾಗಿದೆ. ವಿದ್ಯಾರ್ಥಿಗಳು, ಶಿಕ್ಷ ಕರು ಮತ್ತಿತರ ಸಿಬ್ಬಂದಿ ಅರ್ಜಿ ಸಲ್ಲಿಕೆಗಾಗಿ ಸೈಬರ್ ಸೆಂಟರ್ ಆಥವಾ ಇನ್ನಿತರ ಕಂಪ್ಯೂಟರ್ ಕೇಂದ್ರಗಳ ಬಳಿ ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಬಹುತೇಕ ಸದಸ್ಯರು ಆರೋಪಿಸಿದರು. ತಾ.ಪಂ.ಉಪಾಧ್ಯಕ್ಷ ದಾಸಯ್ಯನ ಗುತ್ತಿ ಚಂದ್ರಪ್ಪ, ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ಡಾ.ದೇವರಾಜನಾಯ್ಕ ಇದ್ದರು.