ಆ್ಯಪ್ನಗರ

ಇಂದು ಚಿಕ್ಕಮಗಳೂರು ಬಂದ್‌ಗೆ ಕರೆ

ರಾಜ್ಯ ಸಮ್ಮಿಶ್ರ ಸರಕಾರ ರೈತರ ಸಾಲ ಮನ್ನಾ ಮಾಡಬೇಕು ಎಂಬ ಆಗ್ರಹದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಪಕ್ಷ, ಸಂಘಟನೆಗಳ ಅಧಿಕೃತ ಕರೆ ಕೇಳಿಬಂದಿಲ್ಲ.

Vijaya Karnataka 28 May 2018, 5:00 am
ಶಿವಮೊಗ್ಗ, ಚಿಕ್ಕಮಗಳೂರು : ರಾಜ್ಯ ಸಮ್ಮಿಶ್ರ ಸರಕಾರ ರೈತರ ಸಾಲ ಮನ್ನಾ ಮಾಡಬೇಕು ಎಂಬ ಆಗ್ರಹದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಪಕ್ಷ, ಸಂಘಟನೆಗಳ ಅಧಿಕೃತ ಕರೆ ಕೇಳಿಬಂದಿಲ್ಲ.
Vijaya Karnataka Web today call for chikmagalur bandh
ಇಂದು ಚಿಕ್ಕಮಗಳೂರು ಬಂದ್‌ಗೆ ಕರೆ


ಈ ಕುರಿತಂತೆ 'ಪತ್ರಿಕೆ'ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಬಿಜೆಪಿ ಮುಖಂಡರು, ರೈತರ ಸ್ವಯಂ ಘೋಷಿತ ಬಂದ್‌ಗೆ ಬಿಜೆಪಿ ಸಹಕಾರ ನೀಡಲಿದೆ ಎಂದು ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಬಿಜೆಪಿ ವತಿಯಿಂದ ಕರ್ನಾಟಕ ಬಂದ್‌ ಕರೆನೀಡಿದ್ದು, ಆಟೊ ಮೂಲಕ ಬಂದ್‌ ಬಗ್ಗೆ ಭಾನುವಾರ ಡಂಗೂರ ಸಾರಲಾಯಿತು.

''ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ರಾಜ್ಯ ಬಂದ್‌ ಹಿನ್ನೆಲೆಯಲ್ಲಿ ನಗರದ ವರ್ತಕರು ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ಅಂಗಡಿ, ಮುಂಗಟ್ಟುಗಳ ಬಾಗಿಲು ಮುಚ್ಚಿ ಬಂದ್‌ಗೆ ಸಹಕರಿಸಬೇಕು,'' ಎಂದು ಆಟೊದಲ್ಲಿ ಪ್ರಚಾರ ಮಾಡಿ ಮನವಿ ಮಾಡಲಾಯಿತು. ಬಂದ್‌ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರದಲ್ಲಿ ವ್ಯತ್ಯಾಯವಾಗುವ ಸಾಧ್ಯತೆ ಇದೆ. ಹೋಟೆಲ್‌, ಶಾಲಾ ಕಾಲೇಜುಗಳು ಆರಂಭವಾದರೂ ಒತ್ತಡಕ್ಕೆ ಮಣಿದು ರಜೆ ಘೋಷಿಸುವ ಸಾಧ್ಯತೆ ಹೆಚ್ಚಿದೆ. ಹಾಲು, ಔಷಧ ಅಂಗಡಿಗಳು, ಸರಕಾರಿ ಕಚೇರಿಗಳು, ಬ್ಯಾಂಕ್‌, ಹಣಕಾಸು ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
--------
ರೈತ ಸಂಘ ಬೆಂಬಲವಿಲ್ಲ
ಸರಕಾರ ರಚನೆಯಾಗಿ ಕೆಲವೇ ದಿನಗಳಲ್ಲಿ ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ರಾಜ್ಯ ಬಂದ್‌ ಮಾಡುವ ಅಗತ್ಯವಿರಲಿಲ್ಲ. ಇದು ಸರಕಾರ ಅಸ್ಥಿರಗೊಳಿಸುವ ಯತ್ನ ಎನ್ನಿಸುತ್ತದೆ. ಬಂದ್‌ಗೆ ರೈತ ಸಂಘದ ಬೆಂಬಲವಿಲ್ಲ.

- ಗುರುಶಾಂತಪ್ಪ, ರೈತ ಸಂಘದ ಚಿಕ್ಕಮಗಳೂರು ಜಿಲ್ಲಾ ಸಂಚಾಲಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ