ಆ್ಯಪ್ನಗರ

ಸಾಯಿ ಏಂಜಲ್ಸ್‌ನಲ್ಲಿ ಅನನ್ಯ ಟಾಪರ್‌

ತಾಲೂಕಿನ ಸಿರಗಾಪುರದ ಸಾಯಿ ಏಂಜಲ್ಸ್‌ ಪದವಿಪೂರ್ವ ಕಾಲೇಜಿನ ಕೆ.ಆರ್‌.ಅನನ್ಯ ದ್ವಿತೀಯ ಪಿಯುಸಿಲ್ಲಿ 600ಕ್ಕೆ 586 ಅಂಕ ಪಡೆದು ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾಳೆ.

Vijaya Karnataka 1 May 2018, 5:00 am
  • ಚಿಕ್ಕಮಗಳೂರು : ತಾಲೂಕಿನ ಸಿರಗಾಪುರದ ಸಾಯಿ ಏಂಜಲ್ಸ್‌ ಪದವಿಪೂರ್ವ ಕಾಲೇಜಿನ ಕೆ.ಆರ್‌.ಅನನ್ಯ ದ್ವಿತೀಯ ಪಿಯುಸಿಲ್ಲಿ 600ಕ್ಕೆ 586 ಅಂಕ ಪಡೆದು ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾಳೆ.
Vijaya Karnataka Web topper in sai angels
ಸಾಯಿ ಏಂಜಲ್ಸ್‌ನಲ್ಲಿ ಅನನ್ಯ ಟಾಪರ್‌

ಕನ್ನಡ, ಹಿಂದಿ-96, ಇಂಗ್ಲಿಷ್‌-92, ಭೌತಶಾಸ್ತ್ರ-99, ಗಣಿತ-99, ರಸಾಯನಶಾಸ್ತ್ರ ಹಾಗೂ ಐಚ್ಛಿಕ ವಿಷಯದಲ್ಲಿ ಶೇ.100 ಅಂಕ ಗಳಿಸಿದ್ದಾಳೆ. ಸಿ.ಆರ್‌.ಭೂಮಿಕಾ 585, ಜುನೈದ್‌ಖಾನ್‌ 583 ಅಂಕ ಗಳಿಸುವ ಮೂಲಕ ಜಿಲ್ಲೆಗೆ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ. ಸುಮುಖ್‌ ಮೌದ್ಗಲ್ಯ 582, ಎಸ್‌.ಕೆ.ಪೃಥ್ವಿಶ್ರೀ 580, ಎಸ್‌.ಎನ್‌.ಸಾತ್ವಿಕ್‌ 580, ಸಿ.ಬಿ.ಸಂಜಯ್‌ 579, ಐ.ಪಿ.ಸಂಚಯ 578, ಸಿ.ವಿದ್ಯಾ 577, ಎಸ್‌.ಪುರುಷೋತ್ತಮ 576 ಅಂಕ ಗಳಿಸಿದ್ದಾರೆ. ಜುನೈದ್‌ ಖಾನ್‌ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ 100 ಅಂಕ ಗಳಿಸಿದ್ದಾನೆ.

ಕಾಲೇಜಿನಲ್ಲಿ 225 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 120 ವಿದ್ಯಾರ್ಥಿಗಳು ಅತ್ಯುನ್ನತ, 126 ಪ್ರಥಮ ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಟಾಪರ್‌ ಅನನ್ಯ ಪೋಷಕರಾದ ರವಿಪ್ರಸಾದ್‌, ವಾಸುಕಿ, ಸಂಸ್ಥೆ ಜಂಟಿ ಕಾರ‍್ಯದರ್ಶಿ ಎಂ.ಜೆ.ಕಾರ್ತಿಕ್‌, ಪ್ರಾಂಶುಪಾಲ ನಾಗರಾಜ್‌, ಉಪನ್ಯಾಸಕರು, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಹೆಮ್ಮೆಯ ಸಂಗತಿ
ಜಿಲ್ಲೆಗೆ ಟಾಪರ್‌ ಜತೆಗೆ 2 ಮತ್ತು 3ನೇ ಸ್ಥಾನವೂ ನಮ್ಮ ಕಾಲೇಜಿಗೆ ಸಿಕ್ಕಿರುವುದು ಹೆಮ್ಮೆಯ ಸಂಗತಿ. ಇದು ಆಡಳಿತ ಮಂಡಳಿ, ಉಪನ್ಯಾಸಕರ ಜವಾಬ್ದಾರಿಯನ್ನು ಹೆಚ್ಚಿಸಿದೆ.

-ವಿಜಯಾನಾಗೇಶ್‌, ಮುಖ್ಯ ಪ್ರಾಂಶುಪಾಲರು, ಸಾಯಿ ಏಂಜಲ್ಸ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ