ಆ್ಯಪ್ನಗರ

ಮಲೆನಾಡಿನಲ್ಲಿ ಧಾರಾಕಾರ ಮಳೆ

ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಜೋರಾಗಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.

Vijaya Karnataka 10 Jul 2019, 5:00 am
ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಜೋರಾಗಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.
Vijaya Karnataka Web torrential rain in the malnad
ಮಲೆನಾಡಿನಲ್ಲಿ ಧಾರಾಕಾರ ಮಳೆ


ನದಿಗಳಲ್ಲಿ ಪ್ರವಾಹ ಕಾಣಿಸಿಕೊಳ್ಳದಿದ್ದರೂ ಮಳೆ ಆರ್ಭಟ ಮುಂದುವರಿದರೆ ಯಾವುದೇ ಕ್ಷಣದಲ್ಲಿ ನದಿಗಳ ಪ್ರವಾಹ ಅಪಾಯದ ಮಟ್ಟಕ್ಕೆ ತಲುಪಲಿದೆ. ಕುದುರೆಮುಖ, ಕಳಸ, ಹೊರನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ.

ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮೇಲೆ ನೀರು ಹರಿಯಲು ಒಂದೆರಡು ಅಡಿಗಳಷ್ಟೇ ಬಾಕಿ ಇದೆ. ಈ ಸೇತುವೆ ಮುಳುಗಿದರೆ ಹೊರನಾಡಿಗೆ ಸಂಪರ್ಕ ಬಂದ್‌ ಆಗಲಿದೆ. ಮಳೆ ಜತೆಗೆ ಥಂಡಿಯೂ ಆವರಿಸುತ್ತಿದ್ದು, ಮಲೆನಾಡಿನಲ್ಲಿ ಮಳೆಯ ವೈಭವ ಮರಳಿದಂತೆ ಕಂಡುಬರುತ್ತಿದೆ.

ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳಲ್ಲಿ ಮಳೆ ಆರ್ಭಟ ಜೋರಾಗಿದ್ದರೆ, ಚಿಕ್ಕಮಗಳೂರು, ತರೀಕೆರೆ ತಾಲೂಕುಗಳಲ್ಲೂ ಮಂಗಳವಾರ ಮಳೆ ಬಿರುಸು ಪಡೆದುಕೊಂಡಿದೆ. ನಿರಂತರ ಮಳೆಯಿಂದ ರೈತ ಸಮುದಾಯ ಸಂತಸಗೊಂಡಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಕಳೆದ 24 ಗಂಟೆಯಲ್ಲಿ ಶೃಂಗೇರಿ ಹೋಬಳಿ-38, ಕಿಗ್ಗ ಹೋಬಳಿ-42, ಮೂಡಿಗೆರೆ ಹೋಬಳಿ-39, ಬಣಕಲ್‌ ಹೋಬಳಿ-48, ಗೋಣಿಬೀಡು ಹೋಬಳಿ-43, ಕಳಸ ಹೋಬಳಿ-29, ಜಾವಳಿ ಹೋಬಳಿ-15, ನರಸಿಂಹರಾಜಪುರ ಹೋಬಳಿ-13, ಬಾಳೆಹೊನ್ನೂರು ಹೋಬಳಿ-16, ಕೊಪ್ಪ ಹೋಬಳಿ-31, ಹರಿಹರಪುರ ಹೋಬಳಿ-38, ಮೇಗುಂದ ಹೋಬಳಿ-22ಮಿ.ಮೀ ಮಳೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ