ಆ್ಯಪ್ನಗರ

ಕೊಲೆ ಆರೋಪ ಹೊರಿಸಿ ತೇಜೋವಧೆ , ಖಂಡನೆ

ಬಿಜೆಪಿ ಮುಖಂಡ ಅನ್ವರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಹೋದರ ಅಬ್ದುಲ್‌ ಕಬೀರ್‌ ಎಂಬಾತ ವಿನಾ ಕಾರಣ ನಮ್ಮ ಮೇಲೆ ಸುಳ್ಳು ಕೇಸು ದಾಖಲಿಸಿ, ನಾವೇ ಆರೋಪಿಗಳೆಂದು ಪದೇಪದೇ ಸಂಶಯ ವ್ಯಕ್ತಪಡಿಸುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ನಗರಸಭೆ ಮಾಜಿ ಸದಸ್ಯ ನೂರ್‌ ಮಹ್ಮದ್‌ ಹೇಳಿದರು.

Vijaya Karnataka 17 Jan 2019, 5:00 am
ಚಿಕ್ಕಮಗಳೂರು: ಬಿಜೆಪಿ ಮುಖಂಡ ಅನ್ವರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಹೋದರ ಅಬ್ದುಲ್‌ ಕಬೀರ್‌ ಎಂಬಾತ ವಿನಾ ಕಾರಣ ನಮ್ಮ ಮೇಲೆ ಸುಳ್ಳು ಕೇಸು ದಾಖಲಿಸಿ, ನಾವೇ ಆರೋಪಿಗಳೆಂದು ಪದೇಪದೇ ಸಂಶಯ ವ್ಯಕ್ತಪಡಿಸುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ನಗರಸಭೆ ಮಾಜಿ ಸದಸ್ಯ ನೂರ್‌ ಮಹ್ಮದ್‌ ಹೇಳಿದರು.
Vijaya Karnataka Web torture and condemnation of murder
ಕೊಲೆ ಆರೋಪ ಹೊರಿಸಿ ತೇಜೋವಧೆ , ಖಂಡನೆ


ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣ ಸಂಬಂಧ ನಮ್ಮ ಮೇಲೆ ಕೇಸು ದಾಖಲಿಸಿರುವುದರಿಂದ ಪೊಲೀಸರು ನಮ್ಮನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ತನಿಖೆಗೆ ಸ್ಪಂದಿಸಿದ್ದೇವೆ, ಮುಂದೆಯೂ ಸಹಕಾರ ನೀಡುತ್ತೇವೆ. ಆದರೆ, ಕಬೀರ್‌ ಪದೇಪದೆ ನಮ್ಮ ಹೆಸರನ್ನು ಮಾಧ್ಯಮದ ಮೂಲಕ ಹೇಳುತ್ತಾ ನಮ್ಮ ತೇಜೋವಧೆ ಮಾಡುತ್ತಿದ್ದಾರೆ.ಅಲ್ಲದೆ ಪೊಲೀಸ್‌ ತನಿಖೆಯ ಹಾದಿ ತಪ್ಪಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ದೂರಿದರು.

ಗ್ರಾಮಪಂಚಾಯಿತಿ, ನಗರಸಭೆ ಸದಸ್ಯನಾಗಿ ಕಳೆದ 25 ವರ್ಷದಿಂದ ಸಾರ್ವಜನಿಕ ಸೇವೆಯಲ್ಲಿದ್ದೇನೆ. ನಮ್ಮ ಕುಟುಂಬದ ಮೇಲೆ ಈವರೆಗೂ ಯಾವುದೇ ಆರೋಪ ಅಥವಾ ಕಾನೂನು ಬಾಹಿರ ಕೃತ್ಯದ ಕಪ್ಪುಚುಕ್ಕೆ ಇಲ್ಲ.ಈಗ ಅನ್ವರ್‌ ಕುಟುಂಬದವರು ನಮ್ಮ ಮೇಲೆ ಸುಳ್ಳು ಕೇಸು ದಾಖಲಿಸುವ ಮೂಲಕ ನಮ್ಮ ತೇಜೋವಧೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಅನ್ವರ್‌ಗೂ ನಮಗೂ ಯಾವುದೇ ವೈಯಕ್ತಿಕ ದ್ವೇಷವಿರಲಿಲ್ಲ. ಅವರ ಸಾವಿನಿಂದ ನಮಗೆ ಯಾವುದೇ ರೀತಿಯ ಲಾಭವೂ ಇಲ್ಲ. ಪೊಲೀಸರು ಹೆಚ್ಚಿನ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಿ ಎಂಬುದು ಕೂಡ ನಮ್ಮ ಆಗ್ರಹ. ಆದರೆ, ಅನ್ವರ್‌ ಅವರ ಹೆಸರಲ್ಲಿ ಕೋಟ್ಯಂತರ ರೂ.ಬೆಲೆಬಾಳುವ ನಿವೇಶನ ಮತ್ತಿತರೆ ಸೊತ್ತುಗಳಿವೆ. ಇದೆಲ್ಲದರ ಪ್ರಯೋಜನ ಮೃತರ ನಂತರ ಅವರ ಸಂಬಂಧಿಕರಿಗೆ ಸೇರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾರಿಗೆ ಆಸ್ತಿ ಸೇರಬೇಕೋ ಅವರ ಮೇಲೆಯೇ ನಮಗೆ ಗುಮಾನಿಯಿದೆ. ಅಂತಹ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿ ಮಂಪರು ಪರೀಕ್ಷೆ ಮಾಡಿ ಸತ್ಯವನ್ನು ಎತ್ತಿಹಿಡಿಯಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಪ್ರಕಾಶ್‌, ಅಬ್ಬಾಸ್‌, ಇಬ್ರಾಹಿಂ, ಬಿ.ಎಸ್‌.ಮಹ್ಮದ್‌, ಬದ್ರುದ್ದೀನ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ