ಆ್ಯಪ್ನಗರ

ಆಮೆ ಹಿಡಿದು ಮಾರಾಟ ಯತ್ನ: ಇಬ್ಬರ ಬಂಧನ

ಜೀವಂತ ಆಮೆಗಳನ್ನು ಹಿಡಿದು ಚೀಲದಲ್ಲಿ ತುಂಬಿಕೊಂಡು ಮಾರಾಟಕ್ಕೆಂದು ತಿರುಗಾಡುತ್ತಿದ್ದ ಇಬ್ಬರನ್ನು ಚಿಕ್ಕಮಗಳೂರು ಪೊಲೀಸ್‌ ಅರಣ್ಯ ಸಂಚಾರಿ ದಳದವರು ಬಂಧಿಸಿದ್ದಾರೆ.

Vijaya Karnataka 17 Nov 2018, 5:00 am
ಕಡೂರು :ಜೀವಂತ ಆಮೆಗಳನ್ನು ಹಿಡಿದು ಚೀಲದಲ್ಲಿ ತುಂಬಿಕೊಂಡು ಮಾರಾಟಕ್ಕೆಂದು ತಿರುಗಾಡುತ್ತಿದ್ದ ಇಬ್ಬರನ್ನು ಚಿಕ್ಕಮಗಳೂರು ಪೊಲೀಸ್‌ ಅರಣ್ಯ ಸಂಚಾರಿ ದಳದವರು ಬಂಧಿಸಿದ್ದಾರೆ.
Vijaya Karnataka Web CKM-16KDR2


ತಾಲೂಕಿನ ಸಖರಾಯಪಟ್ಟಣದ ರಂಗನಾಥ್‌(40), ಅರುಣ್‌(31) ಬಂಧಿತರು. ಸಖರಾಯಪಟ್ಟಣ ಹೊರ ವಲಯದ ರೈಲ್ವೆ ನಿಲ್ದಾಣದ ರಸ್ತೆಯ ಬಳಿ ಗುರುವಾರ ಸಂಜೆ ಅನುಮಾನವಾಗಿ ತಿರುಗಾಡುತ್ತಿದ್ದ ಇಬ್ಬರನ್ನೂ ಬಂಧಿಸಲಾಗಿದೆ.

ಆರೋಪಿಗಳ ಕೈಯಲ್ಲಿ ಚೀಲದಲ್ಲಿ ಜೀವಂತ 8 ಆಮೆಗಳು ಪತ್ತೆಯಾಗಿವೆ. ವನ್ಯಜೀವಿ ಸಂರಕ್ಷ ಣ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ಕಡೂರು ವಲಯ ಅರಣ್ಯಾಧಿಕಾರಿ ಒಪ್ಪಿಸಲಾಯಿತು. ಬಳಿಕ ಕಡೂರು ಅರಣ್ಯ ವಲಯ ಅಧಿಕಾರಿ ಪಾಲಾಕ್ಷ ಪ್ಪ ಬಂಧಿತರನ್ನು ತನಿಖೆಗೆ ಒಳಪಡಿಸಿದಾಗ ಅವರು ಮಾರಾಟ ಮಾಡುವ ಉದ್ದೇಶದಿಂದ ತಂದಿರುವುದಾಗಿ ಹೇಳಿಕೆ ನೀಡಿದ್ದಾರೆ. ಬಂಧಿತರನ್ನು ಶುಕ್ರವಾರ ಕಡೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.

ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಮುದ್ದಣ್ಣ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಯಲಿದೆ. ಅರಣ್ಯ ಸಿಬ್ಬಂದಿ ಬಿ.ಆರ್‌.ತಮ್ಮಯ್ಯ, ಹರೀಶ್‌, ರವಿಕುಮಾರ್‌, ವೆಂಕಟೇಶ್‌, ಶಿವಕುಮಾರ್‌ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ