ಆ್ಯಪ್ನಗರ

ರೈಲು ನಿಲುಗಡೆ, ನೀಟ್‌ ಪರೀಕ್ಷಾರ್ಥಿಗಳಿಗೆ ಆತಂಕ

ಬೆಂಗಳೂರಿನಲ್ಲಿ ನೀಟ್‌ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಗಳಿದ್ದ ರೈಲು ಬಳ್ಳೇಕೆರೆ ರೈಲು ನಿಲ್ದಾಣದಲ್ಲಿ ಕೆಲವು ಕಾಲ ನಿಂತಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

Vijaya Karnataka 6 May 2019, 9:25 pm
ಕಡೂರು: ಬೆಂಗಳೂರಿನಲ್ಲಿ ನೀಟ್‌ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಗಳಿದ್ದ ರೈಲು ಬಳ್ಳೇಕೆರೆ ರೈಲು ನಿಲ್ದಾಣದಲ್ಲಿ ಕೆಲವು ಕಾಲ ನಿಂತಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
Vijaya Karnataka Web CKM-5kdr4


ಭಾನುವಾರ ಬೆಂಗಳೂರಿಗೆ ನೀಟ್‌ ಪರೀಕ್ಷೆ ಬರೆಯಲು ರಾಜ್ಯದ ಕೊಪ್ಪಳ, ಬಳ್ಳಾರಿ, ಗದಗ ಮುಂತಾದ ಊರಿನಿಂದ ತೆರಳುತ್ತಿದ್ದ ಗಾಡಿ ಸಂಖ್ಯೆ 16591 ಹಂಪಿ ಎಕ್ಸ್‌ಪ್ರೆಸ್‌ ರೈಲು ಕಾವåಗಾರಿ ಸಂಬಂಧ ವಿಳಂಬವಾಗಿ ಚಲಿಸುತ್ತಿತ್ತು. ಅಧಿಕಾರಿಗಳು ಈ ರೈಲನ್ನು ವಿದ್ಯಾರ್ಥಿಗಳ ಪರೀಕ್ಷೆಯ ಸಲುವಾಗಿ ಬಳ್ಳಾರಿಯಿಂದ ಚಿತ್ರದುರ್ಗ, ಚಿಕ್ಕಜಾಜೂರು, ಬೀರೂರು, ಕಡೂರು ಮೂಲಕ ಬೆಂಗಳೂರಿಗೆ ಮಾರ್ಗ ಬದಲಾಯಿಸಿದ್ದು. ಆದರೆ ಅರಸೀಕೆರೆ ಮತ್ತು ಬಾಣಾವರ ನಡುವೆ ಕೂಡ ರೈಲು ಹಳಿ ನಿರ್ವಹಣಾ ಕಾಮಗಾರಿ ನಡೆಯುತ್ತಿದ್ದುದ್ದರಿಂದ ಹಂಪಿ ಎಕ್ಸ್‌ಪ್ರೆಸ್‌ ರೈಲನ್ನು ಬಳ್ಳೇಕೆರೆ ನಿಲ್ದಾಣದಲ್ಲಿ 44 ನಿಮಿಷ ನಿಲುಗಡೆಯಾಗಿದೆ.

ಈ ಸಮಯದಲ್ಲಿ ರೈಲಿನಲ್ಲಿದ್ದ ವಿದ್ಯಾರ್ಥಿಗಳು ಕೆಳಗಿಳಿದು ನಿಲ್ದಾಣಾಧಿಕಾರಿ ಮಿರಾಜುದ್ದೀನ್‌ ಬಳಿ ತಾವು ಪ್ರಯಾಣಿಸುತ್ತಿರುವ ರೈಲು ಎಷ್ಟು ಹೊತ್ತಿಗೆ ಮುಟ್ಟಬಹುದು? ಇಲ್ಲಿ ಎಷ್ಟು ಹೊತ್ತಿಗೆ ಬಿಡುತ್ತದೆ? ಮುಂತಾದ ಪ್ರಶ್ನೆಗಳನ್ನು ಕೇಳುತ್ತಿದ್ದಾಗ ನಿಲ್ದಾಣದಲ್ಲಿ ಕೆಲವು ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.ಬೆಳಗ್ಗೆ 9.12ಕ್ಕೆ ಬಂದ ರೈಲು 9.56ಕ್ಕೆ ನಿಲ್ದಾಣ ಬಿಟ್ಟಿದ್ದು ಅಲ್ಲಿಯವರೆಗೆ ನಿಲ್ದಾಣದ ಪ್ಲಾಟ್‌ಫಾರಂ ತುಂಬಾ ವಿದ್ಯಾರ್ಥಿಗಳು ಆತಂಕದಲ್ಲಿ ಓಡಾಡುತ್ತಿದ್ದರಲ್ಲದೆ ಅಧಿಕಾರಿಗಳಿಗೂ ತಮ್ಮ ಆತಂಕವನ್ನು ತೋರ್ಪಡಿಸುತ್ತಿದ್ದರು. ಈ ಹಂತದಲ್ಲಿ ರೈಲಿನ ಬಳಿಗೆ ಬಂದ ಅಧಿಕಾರಿ ಒಬ್ಬರನ್ನು ವಿದ್ಯಾರ್ಥಿಗಳು ಸುತ್ತುವರೆದು ತಮ್ಮ ದುಗುಡವನ್ನು ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ