ಆ್ಯಪ್ನಗರ

ರಸ್ತೆ ಇಲ್ಲದೆ ತೆಪ್ಪದಲ್ಲಿ ರೋಗಿಯ ಸಾಗಣೆ

ರಸ್ತೆ ಸೌಕರ್ಯವಿಲ್ಲದೆ ಭದ್ರಾನದಿಯಲ್ಲಿ ತೆಪ್ಪದ ಮೂಲಕ ರೋಗಿಯನ್ನು ಮುಖ್ಯರಸ್ತೆಗೆ ಸಾಗಿಸಿ ಅಲ್ಲಿಂದ ಆಸ್ಪತ್ರೆಗೆ ಕರೆದ್ಯೊಯ್ದ ಘಟನೆ ಕೂವೆ ಸಮೀಪದ ಹೊಳೆಕುಡಿಗೆಯಲ್ಲಿ ನಡೆದಿದೆ.

Vijaya Karnataka 1 May 2019, 5:00 am
ಕೊಟ್ಟಿಗೆಹಾರ: ರಸ್ತೆ ಸೌಕರ್ಯವಿಲ್ಲದೆ ಭದ್ರಾನದಿಯಲ್ಲಿ ತೆಪ್ಪದ ಮೂಲಕ ರೋಗಿಯನ್ನು ಮುಖ್ಯರಸ್ತೆಗೆ ಸಾಗಿಸಿ ಅಲ್ಲಿಂದ ಆಸ್ಪತ್ರೆಗೆ ಕರೆದ್ಯೊಯ್ದ ಘಟನೆ ಕೂವೆ ಸಮೀಪದ ಹೊಳೆಕುಡಿಗೆಯಲ್ಲಿ ನಡೆದಿದೆ.
Vijaya Karnataka Web BNG-CKM-30KTG4


ಗ್ರಾಮದ ಮಲೆಕುಡಿಯ ಕುಟುಂಬ ಹಿರಿಯ ರುದ್ರಯ್ಯ ಅವರು ಉಬ್ಬಸದಿಂದ ಬಳಲುತ್ತಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬದವರು ಹರಸಾಹಸ ಪಡಬೇಕಾಯಿತು. ತೆಪ್ಪದಲ್ಲಿ ಕುರ್ಚಿಯನ್ನು ಇಟ್ಟು ಅದರಲ್ಲಿ ರುದ್ರಯ್ಯ ಅವರನ್ನು ಕುಳಿರಿಸಿ ನದಿ ದಾಟಿಸಿ ಮುಖ್ಯ ರಸ್ತೆಗೆ ತಂದಿದ್ದು ಅಲ್ಲಿಂದ ವಾಹನದಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದ್ಯೊಯಲಾಯಿತು. ರುದ್ರಯ್ಯ ಅವರು ಅಲ್ಲಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರುದ್ರಯ್ಯ ಅವರ ಕುಟುಂಬಕ್ಕೆ ಅರಣ್ಯ ಹಕ್ಕು ಕಾಯಿದೆಯಡಿ ಜಾಗ ಮಂಜೂರು ಮಾಡಿದ್ದು ಹಕ್ಕುಪತ್ರ ನೀಡಲಾಗಿದೆ. ಆದರೆ ಭದ್ರಾನದಿ ಸುತ್ತುವರಿದಿರುವುದರಿಂದ ಅನಿವಾರ್ಯವಾಗಿ ಬಿದಿರಿನ ತೆಪ್ಪದಲ್ಲಿ ಓಡಾಡುವಂತಾಗಿದೆ. ಮನೆ ಸುತ್ತ ಖಾಸಗಿ ಕಾಫಿ ಎಸ್ಟೇಟ್‌ ಇರುವುದರಿಂದ ಮುಖ್ಯರಸ್ತೆಗೆ ಸಂಪರ್ಕವೆ ಇಲ್ಲದಂತಾಗಿದೆ. ಇದರಿಂದ ತುರ್ತು ಸಂದರ್ಭದಲ್ಲಿ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಕೆಲ ತಿಂಗಳ ಹಿಂದೆ ಮೂಡಿಗೆರೆ ಶಾಸಕರಾದ ಎಂ.ಪಿ ಕುಮಾರಸ್ವಾಮಿ ಅವರು ಇಲ್ಲಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ್ದರು. ಹಿಂದಿನ ಶಾಸಕರು ಹಾಗೂ ತಹಸೀಲ್ದಾರ್‌ ಕೂಡ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ರಸ್ತೆ ಸೌಲಭ್ಯ ರುದ್ರಯ್ಯ ಅವರ ಕುಟುಂಬಕ್ಕೆ ಗಗನಕುಸುಮವಾಗೇ ಉಳಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ