ಆ್ಯಪ್ನಗರ

ಮರ ಉರುಳಿ ಮನೆಗೆ ಹಾನಿ

ಗಾಳಿ ಮಳೆಗೆ ಮನೆ ಮೇಲೆ ಮರ ಉರುಳಿ ಹಾನಿಯಾದ ಘಟನೆ ತಾಲೂಕಿನ ಅಂದಗಾರಿನಲ್ಲಿ ಮಂಗಳವಾರ ಸಂಭವಿಸಿದೆ.

Vijaya Karnataka 10 Jul 2019, 5:00 am
ಕೊಪ್ಪ : ಗಾಳಿ ಮಳೆಗೆ ಮನೆ ಮೇಲೆ ಮರ ಉರುಳಿ ಹಾನಿಯಾದ ಘಟನೆ ತಾಲೂಕಿನ ಅಂದಗಾರಿನಲ್ಲಿ ಮಂಗಳವಾರ ಸಂಭವಿಸಿದೆ.
Vijaya Karnataka Web CKM-9kph4


ಅಂದಗಾರಿನಲ್ಲಿ ಕೂಲಿ ಮಾಡಿಕೊಂಡು ಜೀವಿಸುತ್ತಿದ್ದ ಆಶ್ರಯ ಮನೆ ನಿವಾಸಿ ಯಶೋಧ ನಷ್ಟಕ್ಕೊಳಗಾದವರು. ಅವರ ಮನೆ ಎದುರಿನ ಹಲಸಿನ ಮರದ ಕೊಂಬೆ ಮುರಿದು ಬಸರೀಮರದ ಮೇಲೆ ಬಿದ್ದಿದ್ದು, ಬೃಹದಾಕಾರದ ಬಸರೀ ಮರ ಮನೆ ಮೇಲೆ ಬಿದ್ದಿದೆ. ಸಿಮೆಂಟ್‌ ಶೀಟ್‌ಗಳು ಪುಡಿಯಾಗಿದೆ. ಹೆಂಚು ಪುಡಿಯಾಗಿವೆ. ಎದುರಿನ ಗೋಡೆ ಬಿರುಕು ಬಿಟ್ಟಿವೆ. ಒಟ್ಟಾರೆಯಾಗಿ ಸುಮಾರು 50 ಸಾವಿರ ರೂ. ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ. ಮರ ಬೀಳುವ ಸಮಯದಲ್ಲಿ ಮನೆ ಮಂದಿಯೆಲ್ಲ ಹಿಂಭಾಗದಲ್ಲಿ ಇದ್ದುದರಿಂದ ಯಾವುದೆ ಸಾವು ನೋವು ಸಂಭವಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ