ಆ್ಯಪ್ನಗರ

ಮೆಸ್ಕಾಂ ಸಿಬ್ಬಂದಿಗಳಿಗೆ ಗೌರವ

ಒಂದು ಕ್ಷಣ ವಿದ್ಯುತ್‌ ನಿಲುಗಡೆಯಾದರೂ ಮೆಸ್ಕಾಂ ಇಲಾಖೆಗೆ ಹಿಡಿ ಶಾಪ ಹಾಕುವ ಇಂದಿನ ಜನರ ಮನಸ್ಥಿತಿಯ ನಡುವೆ. ಮೆಸ್ಕಾಂ ಇಲಾಖೆಯ ಲೈನ್‌ ಮ್ಯಾನ್‌ ಗಳ ಕಾರ್ಯವೈಖ್ಯರಿಯನ್ನು ಗುರುತಿಸಿ ಕಳಸ ಜೆಸಿಐ ಸಂಸ್ಥೆಯು ಶನಿವಾರ ಗೌರವಿಸಿದೆ.

Vijaya Karnataka 16 Sep 2019, 5:00 am
ಕಳಸ: ಒಂದು ಕ್ಷಣ ವಿದ್ಯುತ್‌ ನಿಲುಗಡೆಯಾದರೂ ಮೆಸ್ಕಾಂ ಇಲಾಖೆಗೆ ಹಿಡಿ ಶಾಪ ಹಾಕುವ ಇಂದಿನ ಜನರ ಮನಸ್ಥಿತಿಯ ನಡುವೆ. ಮೆಸ್ಕಾಂ ಇಲಾಖೆಯ ಲೈನ್‌ ಮ್ಯಾನ್‌ ಗಳ ಕಾರ್ಯವೈಖ್ಯರಿಯನ್ನು ಗುರುತಿಸಿ ಕಳಸ ಜೆಸಿಐ ಸಂಸ್ಥೆಯು ಶನಿವಾರ ಗೌರವಿಸಿದೆ.
Vijaya Karnataka Web 15KLS1_35


ಆಗಸ್ಟ್‌ ತಿಂಗಳಲ್ಲಿಸುರಿದ ಮಹಾಮಳೆಗೆ ತಾಲೂಕಿನಾದ್ಯಂತ ವಿದ್ಯುತ್‌ ಕಂಬಗಳು ಉರುಳಿ ಕತ್ತಲಲ್ಲಿಮುಳುಗಿತ್ತು. ರಸ್ತೆಗಳು ಸಂಪೂರ್ಣ ಕಡಿತಗೊಂಡಿದ್ದವು. ಈ ಸಂದರ್ಭ ರಾತ್ರಿ ಹಗಲೆನ್ನದೆ ತಮ್ಮ ಅವಿರತ ಶ್ರಮದಿಂದ ಅತ್ಯಲ್ಪ ದಿನಗಳಲ್ಲಿವಿದ್ಯುತ್‌ ಪೂರೈಕೆಯಾಗಲು ಶ್ರಮಿಸಿದ ಮೆಸ್ಕಾಂ ಸಿಬ್ಬಂದಿಗಳಾದ ಸೋಮನಾಥ್‌, ರಾಘವೇಂದ್ರ ಬಂಡಾರಿ, ಗಣೇಶ್‌ ನಾಯ್‌್ಕ, ಪ್ರಶಾಂತ್‌, ಪ್ರಭಾಕರ್‌, ಶೇಖರಪ್ಪ ನಾಗರಾಜ್‌, ಭರತ್‌, ಹೇಮಕುಮಾರ್‌, ಸುನೀಲ್‌, ಧರ್ಮಕುಮಾರ್‌, ರುದ್ರೇಶ್‌, ಅಭಿಲಾಷ್‌, ಪಾಲಾಕ್ಷ, ರಘು, ಭೀಮಶಂಕರ್‌ ಇವರನ್ನು ಗೌರವಿಸಲಾಯಿತು.

ಈ ಸಂದರ್ಭ ಮಾತನಾಡಿದ ಉದ್ಯಮಿ ರವಿ ರೈ, ಪ್ರತೀ ಬಾರಿಯು ಜನರ ಕೆಂಗಣ್ಣಿಗೆ ಗುರಿಯಾಗುವ ಮೆಸ್ಕಾಂ ಇಲಾಖೆ ಸಿಬ್ಬಂದಿ ಈ ಬಾರಿ ಕಳಸದ ಜನತೆಗೆ ಹೀರೋಗಳಾಗಿದ್ದಾರೆ. ಪ್ರವಾಹದಿಂದ ರಸ್ತೆಗಳು ಕಡಿತಗೊಂಡರೂ ವಿದ್ಯುತ್‌ ಕಂಬಗಳನ್ನು ಹೊತ್ತು ಸಾಗಿಸಿ ಕೆಲವೇ ದಿನಗಳಲ್ಲಿಗ್ರಾಮಾಂತರ ಪ್ರದೇಶಗಳಿಗೂ ವಿದ್ಯುತ್‌ ಸೌಲಭ್ಯ ನೀಡಿರುವ ಇಲಾಖೆಯ ಕಾರ್ಯವೈಖ್ಯರಿಯನ್ನು ಮೆಚ್ಚಲೇಬೇಕಾಗಿದೆ ಎಂದರು.

ಜೆಸಿಐ ಅಧ್ಯಕ್ಷ ಪ್ರಕಾಶ್‌ ಕುಮಾರ್‌ ಮಾತನಾಡಿ, ಈ ಬಾರಿ ಪ್ರವಾಹದಿಂದ ಈ ಭಾಗದಲ್ಲಿತೊಂದರೆಯಾಗಿರುವುದರಿಂದ ಪ್ರತೀ ಬಾರಿ ನಡೆಯುತ್ತಿದ್ದ ಜೆಸಿಐ ಸಪ್ತಾಹವನ್ನು ಕೈಬಿಟ್ಟು ಅತ್ಯಂತ ಸರಳವಾಗಿ ಮೆಸ್ಕಾಂ ಸಿಬ್ಬಂದಿ ಸಮಯೋಚಿತ ಉತ್ತಮ ಕೆಲಸವನ್ನು ಮೆಚ್ಚಿ ಅವರನ್ನು ಗೌರವಿಸುವ ಕೆಲಸ ಮಾಡುತ್ತಿದ್ದೇವೆ. ಈ ಬಾರಿ ಮೆಸ್ಕಾಂ ಸಿಬ್ಬಂದಿ ಕಾರ್ಯವೈಖ್ಯರಿ ನಿಜವಾಗಿಯೂ ಗೌರವಿಸುವಂತಹ ಕೆಲಸವಾಗಿತ್ತು. ವಿದ್ಯುತ್‌ ನಿಲುಗಡೆಯಾದ ಕೂಡಲೆ ಅವರಿಗೆ ಹಿಡಿ ಶಾಪ ಹಾಕುವ ಬದಲು ವಿದ್ಯುತ್‌ ನಿಲುಗಡೆಯಾಗಲು ಕಾರಣವೇನು ಮತ್ತು ಅವರು ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂಬುದನ್ನು ನಾವು ಅರಿಯಬೇಕು ಎಂದು ಹೇಳಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತಿ ರವೀಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಮುನ, ಜೆಸಿಐ ನಿಖಟಪೂರ್ವ ಅಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ಕೆ.ಸಿ.ಮಹೇಶ್‌, ಗ್ರಾಮ ಪಂಚಾಯಿತಿ ಸದಸ್ಯ ರಂಗನಾಥ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ