ಆ್ಯಪ್ನಗರ

ಸತ್ಯ, ನಿಷ್ಠೆ ಉಳಿದಿರುವುದೇ ರೈತರಲ್ಲಿ : ಸಾಣೇಹಳ್ಳಿ ಶ್ರೀ

ಇಂದು ಜಗತ್ತಿನಲ್ಲಿ ಬರಿ ಮೋಸ ವಂಚನೆಯೇ ಹೆಚ್ಚು. ಸತ್ಯ ನಿಷ್ಠೆಗೆ ಬೆಲೆಯೇ ಇಲ್ಲದಂತಾಗಿದೆ. ರೈತರಲ್ಲಿ ಈ ಎಲ್ಲ ಸದ್ಗುಣಗಳನ್ನು ಕಾಣಬಹುದು ಎಂದು ಡಾ.ಪಂಡಿತಾರಾಧ್ಯ ಶಿವಾಚಾರ‍್ಯ ಸ್ವಾಮೀಜಿ ಹೇಳಿದರು.

Vijaya Karnataka 6 Feb 2019, 5:00 am
ಸಖರಾಯಪಟ್ಟಣ : ಇಂದು ಜಗತ್ತಿನಲ್ಲಿ ಬರಿ ಮೋಸ ವಂಚನೆಯೇ ಹೆಚ್ಚು. ಸತ್ಯ ನಿಷ್ಠೆಗೆ ಬೆಲೆಯೇ ಇಲ್ಲದಂತಾಗಿದೆ. ರೈತರಲ್ಲಿ ಈ ಎಲ್ಲ ಸದ್ಗುಣಗಳನ್ನು ಕಾಣಬಹುದು ಎಂದು ಡಾ.ಪಂಡಿತಾರಾಧ್ಯ ಶಿವಾಚಾರ‍್ಯ ಸ್ವಾಮೀಜಿ ಹೇಳಿದರು.
Vijaya Karnataka Web CKM-5onkar2


ಸಮೀಪದ ಶಿವಪುರ ಗ್ರಾಮದಲ್ಲಿ ಮಂಗಳವಾರ ಸರ್ವ ಶರಣರ ಸಮ್ಮೇಳನ ಮತ್ತು ರೈತಪರ ಚಿಂತನಮಂಥನ ಕಾರ್ಯಕ್ರಮದಲ್ಲಿ ಮಾತನಾಡಿ, ಮೌಲ್ಯಗಳ ಜತೆ ಸಂಸ್ಕೃತಿಯೂ ನೆಲ ಕಚ್ಚಿದೆ. ಯಾರಲ್ಲಿಯೂ ಪ್ರಾಮಾಣಿಕತೆಯಿಲ್ಲದೆ ಬರಿ ಮೋಸ ವಂಚನೆ ಸ್ವಾರ್ಥ ತುಂಬಿರುವ ಸಮಾಜದಲ್ಲಿ ಗ್ರಾಮೀಣ ಭಾಗದ ಜನರ ಮತ್ತು ರೈತರ ನೋವುಗಳಿಗೆ ಸ್ಪಂದನೆ ಸಿಗದಂತಾಗಿದೆ.ರೈತರ ಅವರಲ್ಲೆ ಆತ್ಮ ಸ್ಥೈರ್ಯವನ್ನು ಬೆಳೆಸಿಕೊಂಡು ಮುನ್ನುಗ್ಗಿದರೆ ಮಾತ್ರ ಎಲ್ಲವನ್ನು ಪಡೆಯಲು ಸಾಧ್ಯ ಎಂದರು.

ಸಮ್ಮೇಳನವನ್ನು ಮಾಜಿ ಶಾಸಕ ಕೆ.ಬಿ ಮಲ್ಲಿಕಾರ್ಜುನ್‌ ಉದ್ಘಾಟಿಸಿ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ತಮ್ಮ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಗ್ರಾಮದ ಮತ್ತು ದೇಶದ ಸಮಸ್ಯೆಗಳನ್ನು ಮರೆಯುತ್ತಿದ್ದೇವೆ. ಮನೆಯಲ್ಲಿ ಹಿರಿಯರ ಮತ್ತು ತಂದೆತಾಯಿಗಳ ಮಾರ್ಗದರ್ಶನದಂತೆ ನಡೆದರೆ ಮನೆಯೂ ಸುಖಿಯಾಗಿ ಗ್ರಾಮವೂ ಶಾಂತಿಯಿಂದ ಇರುತ್ತದೆ ಎಂದರು.

ಮಾಜಿ ಗ್ರಾ.ಪಂ.ಸದಸ್ಯ ಹಾಲಪ್ಪ , ಗ್ರಾಮಕ್ಕೆ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿಕೊಳ್ಳಲಾಯಿತು. ಮಾಜಿ ವಿಧಾನ ಪರಿಷತ್‌ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿ.ಪಂ.ನ ಮಾಜಿ ಅಧ್ಯಕ್ಷ ಕಲ್ಮರುಡಪ್ಪ, ತಾ.ಪಂ.ಸದಸ್ಯ ರುದ್ರಮೂರ್ತಿ, ತಾ.ಪಂ. ವೀರಶೈವ ಸಮಾಜದ ಅಧ್ಯಕ್ಷ ಶೇಖರಪ್ಪ, ಜಿ.ಪಂ.ಸದಸ್ಯೆ ಶಕುಂತಲಾಮಲ್ಲಪ್ಪ ಮಾತನಾಡಿದರು. ಎಪಿಎಂಸಿ ಸದಸ್ಯ ಲೋಕೇಶ್‌, ಗ್ರಾ.ಪಂ.ಅಧ್ಯಕ್ಷೆ ಆಶಾಮೋಹನ್‌, ಜಿಲ್ಲ ಸಹಕಾರ ಬ್ಯಾಂಕ್‌ ಉಪಾಧ್ಯಕ್ಷ ರವಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌, ಪಿಎಲ್ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಕಲ್ಮರುಡಪ್ಪ, ಜಿ.ಪಂ.ನ ಮಾಜಿ ಸದಸ್ಯ ಸದಾಶಿವಪ್ಪ, ಓಂಕಾರಪ್ಪ, ಎಲ್‌ಐಸಿ ಮಲ್ಲೇಗೌಡ, ಪಿಳ್ಳೇನಹಳ್ಳಿ ಮಹೇಶ್ವರಪ್ಪ ಭಾಗವಹಿಸಿದ್ದರು. ನಿವೃತ್ತ ಶಿಕ್ಷ ಕ ಮಲ್ಲೇಶಪ್ಪ ಸ್ವಾಗತಿಸಿ, ಉಪನ್ಯಾಸಕ ಈಶ್ವರಪ್ಪ ನಿರೂಪಿಸಿ , ಮಹೇಶ್ವರಪ್ಪ ವಂದಿಸಿದರು.

ಎ ಸಿ ರೊಮುಗಳಲ್ಲಿ ಕುಳಿತು ರೈತರ ಕಷ್ಟಗಳನ್ನು ಮಾತನಾಡುವವರೇ ಹೆಚ್ಚಾಗಿದ್ದು ಅದನ್ನು ಬಿಟ್ಟು ರೈತರು ಬೆಳೆಯುವ ಬೆಳೆಗಳಿಗೆ ನಿಗದಿತ ಬೆಲೆಯನ್ನು ಮಾಡಲು ಯಾರು ಪ್ರಯತ್ನ ಪಡುತ್ತಿಲ್ಲ. ರಾಗಿ ಹೇಗೆ ಬೆಳೆಯುತ್ತದೆ ಎಂದು ಅಧಿಕಾರಿಗಳಿಗೆ ಗೊತ್ತೇ ಇಲ್ಲ. ಅವರು ಕ್ಷೇತ್ರಕ್ಕೆ ಬಂದು ಕಷ್ಟ ನಷ್ಟದ ಅರಿವನ್ನು ತಿಳಿದು ಅದಕ್ಕನುಸಾರವಾಗಿ ಬೆಲೆ ನಿಗದಿ ಮಾಡುವುದು. ರೈತರ ಆರ್ಥಿಕ ಮಟ್ಟ ಸುಧಾರಿಸಲು ಹಲವಾರು ಯೋಜನೆಗಳನ್ನು ಸರಕಾರ ರೂಪಿಸಲು ಮುಂದಾಗಬೇಕು.



-ಚಟ್ನಹಳ್ಳಿ ಮಹೇಶ್‌ ,ಸಾಹಿತಿ

-------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ