ಆ್ಯಪ್ನಗರ

ಎರಡು ಜಾನುವಾರು ಕಳವು

ಗ್ರಾಮದ ಯರದಂಕಲು ಸರ್ಕಲ್‌ ಹತ್ತಿರದ ಕೊಟ್ಟಿಗೆಗಳಲ್ಲಿದ್ದ ಎರಡು ಜಾನುವಾರುಗಳನ್ನು ಗುರುವಾರ ರಾತ್ರಿ ಕಳವು ಮಾಡಲಾಗಿದ್ದು, ಈ ಕುರಿತು ಜಾನುವಾರು ಮಾಲೀಕರು ಸ್ಥಳೀಯ ಠಾಣೆಗೆ ದೂರು ಸಲ್ಲಿಸಿದ್ದಾರೆ.

Vijaya Karnataka 22 Sep 2018, 5:00 am
ಲಿಂಗದಹಳ್ಳಿ : ಗ್ರಾಮದ ಯರದಂಕಲು ಸರ್ಕಲ್‌ ಹತ್ತಿರದ ಕೊಟ್ಟಿಗೆಗಳಲ್ಲಿದ್ದ ಎರಡು ಜಾನುವಾರುಗಳನ್ನು ಗುರುವಾರ ರಾತ್ರಿ ಕಳವು ಮಾಡಲಾಗಿದ್ದು, ಈ ಕುರಿತು ಜಾನುವಾರು ಮಾಲೀಕರು ಸ್ಥಳೀಯ ಠಾಣೆಗೆ ದೂರು ಸಲ್ಲಿಸಿದ್ದಾರೆ.
Vijaya Karnataka Web two cattle stolen
ಎರಡು ಜಾನುವಾರು ಕಳವು


ರಂಗನಾಥ್‌ ಎಂಬುವವರಿಗೆ ಸೇರಿದ ಕಂದು ಬಣ್ಣದ ಹೋರಿಕರು, ಪಕ್ಕದ ಕೊಟ್ಟಿಗೆಯಲ್ಲಿ ರಾಜು ಎಂಬುವರಿಗೆ ಸೇರಿದ್ದ ಕಪ್ಪು ಬಿಳಿ ಬಣ್ಣದ ಹಸುವನ್ನು ಟವೇರಾ ವಾಹನದಲ್ಲಿ ಬಂದವರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಳವಾಗಿರುವ ಹಸು ಮತ್ತು ಹೋರಿಕರುಗಳ ಬೆಲೆ ಅಂದಾಜು ತಲಾ 25 ಸಾವಿರ ರೂ. ಎನ್ನಲಾಗಿದೆ.

ಲಿಂಗದಹಳ್ಳಿ ಹೋಬಳಿಯಲ್ಲಿ ಬಹಳ ದಿನಗಳಿಂದ ಜಾನುವಾರುಗಳ ಕಳವು ನಡೆಯುತ್ತಿದೆ. ರಾತ್ರಿ ವೇಳೆಯಲ್ಲಿ ಬಿಳಿ ಬಣ್ಣದ ಟವೇರ ಕಾರಿನಲ್ಲಿ ಬರುವ ಕಳ್ಳರು ಬೀದಿಯಲ್ಲಿ, ಮನೆ ಮುಂದೆ ಹಾಗೂ ಕೊಟ್ಟಿಗೆಯಲ್ಲಿರುವ ಜಾನುವಾರುಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಾರೆ. ಕೆಲವು ವೇಳೆ ಇದನ್ನು ನೋಡಿದವರ ಮೇಲೆ ಕಲ್ಲು ಹಾಗೂ ದೊಣ್ಣೆ ಎಸೆದು ಬೆದರಿಸಿ ಪರಾರಿಯಾಗುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಜಾನುವಾರುಗಳ ಕಳ್ಳತನ ನಡೆಯುತ್ತಲೇ ಇರುವುದರಿಂದ ರೈತಾಪಿ ಜನರು ಭಯಭಿತರಾಗಿದ್ದು, ತಮ್ಮ ಜಾನುವಾರುಗಳನ್ನು ಉಳಿಸಿಕೊಳ್ಳುವುದೇ ಚಿಂತೆಯಾಗಿದೆ. ಪೊಲೀಸ್‌ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಜಾನುವಾರು ಕಳ್ಳರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ