ಚಿಕ್ಕಮಗಳೂರು: ಹಿಂಬದಿಯಿಂದ ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರಿನ ಕದ್ರಿಮಿದ್ರಿ ಬಳಿ ಈ ದುರ್ಘಟನೆ ನಡೆದಿದೆ.
ಮಹೇಶ್ (43), ಲೋಕೇಶ್ (40) ಮೃತರು. ಮೃತರು ಚಿಕ್ಕಮಗಳೂರಿನ ತೇಗೂರು ನಿವಾಸಿಗಳು. ತೇಗೂರಿನಿಂದ ಗಾರೆ ಕೆಲಸಕ್ಕೆ ಗೆಂಡೇಹಳ್ಳಿಗೆ ಹೋಗುತ್ತಿದ್ದರು.
ಕದ್ರಿಮಿದ್ರಿಯಿಂದ ಇಂಡಸ್ಟ್ರಿಯಲ್ ಪ್ರದೇಶಕ್ಕೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಮೃತಪಟ್ಟಿದ್ದಾರೆ.
ಯಜಮಾನನನ್ನು ಕಳೆದುಕೊಂಡು ತಬ್ಬಲಿಯಾದ 2 ಕುಟುಂಬ ಸದಸ್ಯರ ರೋದನ ಹೇಳತೀರದು. ಶವಾಗಾರದ ಬಳಿ ಸದಸ್ಯರ ಅಕ್ರಂದನ ಕಂಡು ಗ್ರಾಮಸ್ಥರು ಮರುಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರಿನ ಕದ್ರಿಮಿದ್ರಿ ಬಳಿ ಈ ದುರ್ಘಟನೆ ನಡೆದಿದೆ.
ಮಹೇಶ್ (43), ಲೋಕೇಶ್ (40) ಮೃತರು. ಮೃತರು ಚಿಕ್ಕಮಗಳೂರಿನ ತೇಗೂರು ನಿವಾಸಿಗಳು. ತೇಗೂರಿನಿಂದ ಗಾರೆ ಕೆಲಸಕ್ಕೆ ಗೆಂಡೇಹಳ್ಳಿಗೆ ಹೋಗುತ್ತಿದ್ದರು.
ಕದ್ರಿಮಿದ್ರಿಯಿಂದ ಇಂಡಸ್ಟ್ರಿಯಲ್ ಪ್ರದೇಶಕ್ಕೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಮೃತಪಟ್ಟಿದ್ದಾರೆ.
ಯಜಮಾನನನ್ನು ಕಳೆದುಕೊಂಡು ತಬ್ಬಲಿಯಾದ 2 ಕುಟುಂಬ ಸದಸ್ಯರ ರೋದನ ಹೇಳತೀರದು. ಶವಾಗಾರದ ಬಳಿ ಸದಸ್ಯರ ಅಕ್ರಂದನ ಕಂಡು ಗ್ರಾಮಸ್ಥರು ಮರುಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.