ಆ್ಯಪ್ನಗರ

ಗುಡ್ಡ ಕುಸಿತದ ಭೀತಿ : ಚಾರ್ಮಾಡಿಯಲ್ಲಿ ಸದ್ಯಕ್ಕಿಲ್ಲ ವಾಹನ ಸಂಚಾರ

ಚಾರ್ಮಾಡಿ ಘಾಟಿ ರಸ್ತೆಯಲ್ಲಿನಿರಂತರ ಮಳೆ, ಮಂಜುಕವಿದ ವಾತಾವರಣ, ಗುಡ್ಡ ಕುಸಿತ ಇರುವುದರಿಂದ ತಕ್ಷಣಕ್ಕೆ ವಾಹನ ಸಂಚಾರ ಸಾಧ್ಯವಿಲ್ಲಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಹೇಳಿದ್ದಾರೆ.

Vijaya Karnataka 10 Sep 2019, 9:28 am
ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ರಸ್ತೆಯಲ್ಲಿನಿರಂತರ ಮಳೆ, ಮಂಜುಕವಿದ ವಾತಾವರಣ, ಗುಡ್ಡ ಕುಸಿತ ಇರುವುದರಿಂದ ತಕ್ಷಣಕ್ಕೆ ವಾಹನ ಸಂಚಾರ ಸಾಧ್ಯವಿಲ್ಲಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಹೇಳಿದ್ದಾರೆ.
Vijaya Karnataka Web unavailable vehicle traffic
ಗುಡ್ಡ ಕುಸಿತದ ಭೀತಿ : ಚಾರ್ಮಾಡಿಯಲ್ಲಿ ಸದ್ಯಕ್ಕಿಲ್ಲ ವಾಹನ ಸಂಚಾರ


ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿಗಳು ಪರಿಶೀಲನೆ ನಡೆಸಿ ಸದ್ಯಕ್ಕೆ ವಾಹನ ಸಂಚಾರಕ್ಕೆ ರಸ್ತೆ ಯೋಗ್ಯವಾಗಿಲ್ಲಎಂದು ವರದಿ ನೀಡಿದ ಹಿನ್ನೆಲೆಯಲ್ಲಿವಾಹನ ಸಂಚಾರ ನಿರ್ಬಂಧ ಮುಂದುವರಿದಿದೆ ಎಂದರು.

ಚಾರ್ಮಾಡಿ ಘಾಟಿ ಪ್ರದೇಶದಲ್ಲಿಈಗಲೂ ನಿರಂತರ ಮಳೆಯಾಗುತ್ತಿದೆ. ಅಲ್ಲಲ್ಲಿಭೂಕುಸಿತವಾಗುತ್ತಿದ್ದು, ದಟ್ಟವಾದ ಮಂಜು ಕವಿದಿದೆ. ಕೆಲವು ಕಡೆಗಳಲ್ಲಿರಸ್ತೆ ಕುಸಿದು ಒಂದು ವಾಹನ ಮಾತ್ರ ಸಂಚರಿಸಲು ಅವಕಾಶವಿದೆ. ರಸ್ತೆಯ ಮೇಲೆ ಮರಗಳೂ ಬೀಳುತ್ತಿವೆ. ಮಳೆ ಸಂಪೂರ್ಣ ಕಡಿಮೆಯಾಗಿ ರಸ್ತೆ ವಾಹನ ಸಂಚಾರಕ್ಕೆ ಯೋಗ್ಯವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ವರದಿ ನೀಡುವವರೆಗೂ ವಾಹನ ಸಂಚಾರ ಸಾಧ್ಯವಾಗುವುದಿಲ್ಲಎಂದು ಹೇಳಿದರು.

ಮರಳು ಮಾರಾಟಕ್ಕೆ ಅನುಮತಿ

ಭೂಕುಸಿತ ಮತ್ತು ನಿರಂತರ ಮಳೆಯಿಂದ ಹಲವು ಕಡೆ ಕೃಷಿಭೂಮಿ ಮೇಲೆ ಸಂಗ್ರಹವಾಗಿರುವ ಮರಳು ಮಾರಾಟ ಮಾಡಲು ಆಯಾ ಜಮೀನು ಮಾಲೀಕರಿಗೆ ಅನುಮತಿ ನೀಡಲಾಗಿದೆ. ಆದರೆ, ಸರಕಾರ ನಿಗದಿಪಡಿಸಿದ ರಾಜಧನ ಪಾವತಿಸಿ ಅನುಮತಿ ಪಡೆಯಬೇಕು. ಮೂಡಿಗೆರೆ ತಾಲೂಕಿನ ಕಸ್ಕೆಬೈಲಿನಲ್ಲಿಅತಿಹೆಚ್ಚು ಮರಳು ಸಂಗ್ರಹವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮೂಡಿಗೆರೆ ತಾಲೂಕಿನಲ್ಲಿಮಳೆ ನಿರಂತರವಾಗಿದ್ದು, ಪುನರ್ವಸತಿಗೆ ಸ್ಥಳ ಪರಿಶೀಲಿಸುವ ಕಾರ‍್ಯ ವಿಳಂಬವಾಗಿದೆ. ಮನೆ ಕಟ್ಟಿಕೊಳ್ಳಲು 5 ಲಕ್ಷ ರೂ. ನೀಡಿದರೂ ಜಾಗ ಇಲ್ಲದಿದ್ದರೆ ಅವರಿಗೆ ಜಾಗ ಕೊಡಬೇಕಾಗುತ್ತದೆ. ಎಲ್ಲಸಮಸ್ಯೆಗಳನ್ನು ನಿವಾರಿಸಿಕೊಂಡು ಕಾಯಂ ಪರಿಹಾರ ಕೈಗೊಳ್ಳಲು ಒಂದಷ್ಟು ಸಮಯ ಬೇಕಾಗುತ್ತದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ