ಆ್ಯಪ್ನಗರ

ವಾರಸುದಾರರಿಲ್ಲದ ಕಾರು ಪರಿಶೀಲನೆ

ಕೊಟ್ಟಿಗೆಹಾರ ವೃತ್ತದ ಬಳಿ 2 ದಿನದಿಂದ ನಿಂತಿದ್ದ ಬೆಂಗಳೂರು ಮೂಲದ ವಾರಸುದಾರರಿಲ್ಲದ ಕಾರನ್ನು ಸೋಮವಾರ ಬಣಕಲ್‌ ಠಾಣೆ ಪೊಲೀಸರು ಪರಿಶೀಲಿಸಿದರು.

Vijaya Karnataka 30 Jul 2019, 5:00 am
ಕೊಟ್ಟಿಗೆಹಾರ : ಕೊಟ್ಟಿಗೆಹಾರ ವೃತ್ತದ ಬಳಿ 2 ದಿನದಿಂದ ನಿಂತಿದ್ದ ಬೆಂಗಳೂರು ಮೂಲದ ವಾರಸುದಾರರಿಲ್ಲದ ಕಾರನ್ನು ಸೋಮವಾರ ಬಣಕಲ್‌ ಠಾಣೆ ಪೊಲೀಸರು ಪರಿಶೀಲಿಸಿದರು.
Vijaya Karnataka Web CKM-29KTG2-1


ಈ ಬಗ್ಗೆ ವಿಕ ಪ್ರಕಟಿಸಿದ್ದ ವರದಿಯಿಂದ ಎಚ್ಚೆತ್ತುಕೊಂಡ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು. ಕಾರು ಬೆಂಗಳೂರು ಮೂಲದ (ಕೆಎ01 ಎಎಚ್‌ 2708) ನೋಂದಣಿ ಸಂಖ್ಯೆ ಹೊಂದಿದ್ದು, ಎರಡು ದಿನವಾದರೂ ತೆಗೆದುಕೊಂಡು ಹೋಗದೆ ಇರುವುದನ್ನು ಗಮನಿಸಿದ್ದಾರೆ. ಕಾರನ್ನು ರಸ್ತೆ ಮೇಲೆಯೇ ನಿಲುಗಡೆ ಮಾಡಿರುವುದರಿಂದ ಸಂಚಾರಕ್ಕೂ ತೊಂದರೆಯಾಗಿದೆ.

ಪ್ರವಾಸಿಗರೊಬ್ಬರು ಪ್ರವಾಸಕ್ಕೆಂದು ತಂದ ಬಾಡಿಗೆ ಕಾರನ್ನು ಇಲ್ಲಿ ಬಿಟ್ಟು ಹೋಗಿದ್ದು, ಮಾಲೀಕರಿಗೆ ವಿಚಾರ ಮುಟ್ಟಿಸಲಾಗಿದೆ. ಕಾರು ಲಾಕ್‌ ಆಗಿರುವುದರಿಂದ ತೆರವುಗೊಳಿಸಲು ಸಾಧ್ಯವಿಲ್ಲದ್ದರಿಂದ ಮಾಲೀಕರು ಬಂದ ನಂತರ ತೆರವುಗೊಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ