ಆ್ಯಪ್ನಗರ

ಎಬಿವಿಪಿ ಸಂಘಟನೆ ರದ್ದತಿಗೆ ಆಗ್ರಹ

ಪುತ್ತೂರಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಬಿವಿಪಿ ಸಂಘಟನೆಯನ್ನು ಕೂಡಲೇ ರದ್ದು ಮಾಡಬೇಕೆಂದು ಕೆಪಿಸಿಸಿ ಸದಸ್ಯ ಕೆ.ಎಸ್‌. ಆನಂದ್‌ ಆಗ್ರಹಿಸಿದರು.

Vijaya Karnataka 10 Jul 2019, 5:00 am
ಕಡೂರು: ಪುತ್ತೂರಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಬಿವಿಪಿ ಸಂಘಟನೆಯನ್ನು ಕೂಡಲೇ ರದ್ದು ಮಾಡಬೇಕೆಂದು ಕೆಪಿಸಿಸಿ ಸದಸ್ಯ ಕೆ.ಎಸ್‌. ಆನಂದ್‌ ಆಗ್ರಹಿಸಿದರು.
Vijaya Karnataka Web CKM-8KDR4


ಪಟ್ಟಣದಲ್ಲಿ ಎನ್‌ಎಸ್‌ಯುಐ ಮತ್ತು ಯುವ ಕಾಂಗ್ರೆಸ್‌ ಘಟಕಕ್ಕೆ ಸೇರಿದ ಸಾವಿರಾರು ವಿದ್ಯಾರ್ಥಿಗಳು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಾಲೂಕು ಕಚೇರಿ ಆವರಣದಲ್ಲಿ ಮಾತನಾಡಿದರು. ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದ 5 ವಿದ್ಯಾರ್ಥಿಗಳು ಎಬಿವಿಪಿ ಸಂಘಟನೆಗೆ ಸೇರಿದವರು. ಇದು ಎಬಿವಿಪಿ ಸಂಘಟನೆಯಲ್ಲಿರುವವರ ಮುಖವಾಡವನ್ನು ಕಳಚಿದೆ. ಈ ಸಂಘಟನೆಯನ್ನು ದೇಶದಾದ್ಯಂತ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ದೇಶದ ಯಾವುದೇ ಮೂಲೆಯಲ್ಲಿ ಹಿಂದೂಗಳ ಮೇಲೆ ದಾಳಿ ನಡೆದರೆ ಹಿಂದೂಗಳ ವಾರಸುದಾರರಂತೆ ಮಾತನಾಡುವ ಬಿಜೆಪಿ ನಾಯಕರು ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾಕರಂದ್ಲಾಜೆ, ಮೈಸೂರು-ಮಡಿಕೇರಿ ಸಂಸದ ಪ್ರತಾಪ್‌ಸಿಂಹ ಅವರು ಪುತ್ತೂರಿನ ಹಿಂದೂ ವಿದ್ಯಾರ್ಥಿನಿಯ ಮೇಲೆ ಅವರದೇ ಪಕ್ಷ ದ ಸಂಘಟನೆಯಾದ ಎಬಿವಿಪಿ ವಿದ್ಯಾರ್ಥಿಗಳು ನಡೆಸಿರುವ ಪೈಶಾಚಿಕ ಕೃತ್ಯ ಕಂಡು ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.

ತಹಶೀಲ್ದಾರ್‌ ಉಮೇಶ್‌ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸದರು. ಪ್ರತಿಭಟನೆಯ ನೇತೃತ್ವವನ್ನು ಯಶವಂತ್‌ ಕಂಚಿ ವಹಿಸಿದ್ದರು. ತಾಲೂಕು ಎನ್‌ಎಸ್‌ಯುಐನ ಅಧ್ಯಕ್ಷ ಸಂಜಯ್‌, ಜಿಲ್ಲಾ ಉಪಾಧ್ಯಕ್ಷ ಆಸಂದಿ ಪ್ರಮೋದ್‌, ನಗರ ಘಟಕದ ಅಧ್ಯಕ್ಷ ಸೋಮೇಶ್‌ಶಿವಮೊಗ್ಗೆ, ತಾಲೂಕು ಉಪಾಧ್ಯಕ್ಷ ಇರ್ಫಾನ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಜಿಮ್‌ ಶ್ರೀನಿವಾಸ್‌, ಯುವ ಮುಖಂಡರಾದ ವಿನಯ್‌, ದರ್ಗಾ ಸಮಿತಿಯ ಅಧ್ಯಕ್ಷ ಆಪ್ರೋಜ್‌, ನವೀನ್‌, ಪೂಜಾ, ಸಾನಿಯಾ, ತೇಜಸ್ವೀನಿ, ಸುನೀಲ್‌, ಕಡೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಾಸೂರುಚಂದ್ರಮೌಳಿ, ಬೀರೂರು ಬ್ಲಾಕ್‌ ಅಧ್ಯಕ್ಷ ಆಸಂದಿಕಲ್ಲೇಶ್‌, ಕಡೂರಹಳ್ಳಿ ನವೀನ್‌, ಅನ್ಸ್‌ರ್‌(ಬೆಕ್ಕು), ಪುರಸಭೆ ಚುನಾಯಿತ ಸದಸ್ಯ ಸೈಯಾದ್‌ ಯಾಸಿನ್‌, ರವಿಕುಮಾರ್‌ ಹಾಗೂ ವಿದ್ಯಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ