ಆ್ಯಪ್ನಗರ

ಇಂಧನ ಉಳಿವು, ಪರಿಸರ ಸಂರಕ್ಷಣೆಗೆ ಸೈಕಲ್‌ ಬಳಸಿ

ಇಂಧನ ರಕ್ಷ ಣೆ ಮಾನವನ ಹೊಣೆ, ಆರೋಗ್ಯ, ಪರಿಸರ, ಇಂಧನ ರಕ್ಷ ಣೆಗೆ ಸೈಕಲಿಂಗ್‌ ಮಾಡುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಕರೆ ನೀಡಿದರು.

Vijaya Karnataka 22 Jan 2019, 9:46 pm
ಶಿವಮೊಗ್ಗ :ಇಂಧನ ರಕ್ಷ ಣೆ ಮಾನವನ ಹೊಣೆ, ಆರೋಗ್ಯ, ಪರಿಸರ, ಇಂಧನ ರಕ್ಷ ಣೆಗೆ ಸೈಕಲಿಂಗ್‌ ಮಾಡುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಕರೆ ನೀಡಿದರು.
Vijaya Karnataka Web use cycle for fuel survival environmental conservation
ಇಂಧನ ಉಳಿವು, ಪರಿಸರ ಸಂರಕ್ಷಣೆಗೆ ಸೈಕಲ್‌ ಬಳಸಿ


ಭಾರತ್‌ ಪೆಟ್ರೋಲಿಯಂ ಕಾಪೋರ್‍ರೇಷನ್‌ ಮಂಗಳೂರು ಹಾಗೂ ಶಿವಮೊಗ್ಗ ಸೈಕಲ್‌ ಕ್ಲಬ್‌ ವತಿಯಿಂದ ಭಾನುವಾರ ನಗರದಲ್ಲಿ ಇಂಧನ ಉಳಿಸಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಪ್ರತಿನಿತ್ಯ ಇಂಧನ ನಮಗೆ ಬಹಳ ಅವಶ್ಯಕವಾದ ವಸ್ತು. ಇಂದನ ನಮ್ಮ ದೇಶದ ಆಸ್ತಿ. ಆದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ ಇಂಧನ ಉಳಿವಿಗೆ ಶ್ರಮಿಸಬೇಕಿದೆ ಎಂದರು.

ಇಂದು ಭಾರತ್‌ ಪೆಟ್ರೋಲಿಯಂ ಸಂಸ್ಥೆ ಇಂತಹ ಒಂದು ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಸೈಕಲ್‌ ತುಳಿಯುವುದರಿಂದ ದೇಹ ಹಾಗೂ ಮನಸ್ಸು ಸದೃಢವಾಗುತ್ತದೆ. ಶಿವಮೊಗ್ಗ ಸೈಕಲ್‌ ಕ್ಲಬ್‌ ಈಗಾಗಲೇ ನಗರದಲ್ಲಿ ನೂರಾರು ಜಾಗೃತಿ ಕಾರ್ಯಕ್ರಮ ಬಂದಿದೆ. ಸಹ್ಯಾದ್ರಿ ಉತ್ಸವದಲ್ಲಿ ಯುವಕರಿಗೆ, ಯುವತಿಯರಿಗೆ ಸೈಕಲ್‌ ರೇಸ್‌ ಹಮ್ಮಿಕೊಳ್ಳಲಾಗಿದೆ ಎಂದರು.

ಸೈಕಲ್‌ ಕ್ಲಬ್‌ನ ಪ್ರಯುಖರಾದ ಜಿ.ವಿಜಯಕುಮಾರ್‌ ಮಾತನಾಡಿ, ಈಗಾಗಲೇ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಸೈಕಲ್‌ ಪ್ರವಾಸ, ಜಾಗೃತಿ ಕಾರ್ಯಕ್ರಮ ಹಾಗೂ ಇದೇ ತಿಂಗಳ 26ರಂದು ಹುಬ್ಬಳ್ಳಿಯಲ್ಲಿ ನಡೆಯುವ ಗಿನ್ನಿಸ್‌ ದಾಖಲೆಯ ಸೈಕ್ಲಲಿಂಗ್‌ ನಲ್ಲಿ ಸೈಕಲ್‌ ಕ್ಲಬ್‌ನ 120 ಜನ ಸದಸ್ಯರು, ಸದಸ್ಯನಿಯರು ಈಗಾಗಲೇ ತರಬೇತಿ ಪಡೆದಿದ್ದು, ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಸೈಕಲ್‌ ಜಾಗೃತಿ ಜಾಥಾ ನೆಹರು ರಸ್ತೆಯಿಂದ ನಗರದ ಪ್ರಮುಖ ಬಡಾವಣೆಯಲ್ಲಿ ಸಂಚಾರ ಮಾಡಿ ಇಂಧನ ಉಳಿಸುವ ಬಗ್ಗೆ ಜಾಗೃತಿ ಮೂಡಿಸಲಾಯಿತು. ಭಾರತ್‌ ಪೆಟ್ರೋಲಿಯಂ ಕಾಪೋರ್‍ರೇಷನ್‌ನ ಮುಖ್ಯಸ್ಥ ಸಾಗರ್‌ ಜಿ. ತೋಂಡೇಕರ್‌, ಮುಫೀಜ್‌, ಶ್ರೀನಿವಾಸ್‌, ಸಚ್ಚಿನ್‌ ಹಾಗೂ ಭಾರತ್‌ ಪೆಟ್ರೋಲಿಯಂ ಡೀಲರ್ಸ್‌ಗಳು, ಶಿವಮೊಗ್ಗ ಕೈಕಲ್‌ ಕ್ಲಬ್ಬಿನ ಕಾರ್ಯದರ್ಶಿ ಗಿರೀಶ್‌ ಕಾಮತ್‌, ನರಸಿಂಹಮೂರ್ತಿ, ರವಿ, ವಸಂತ್‌ ಹೋಬಳಿದಾರ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ